<p><strong>ಬೀದರ್:</strong> ನಗರದ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಈ ವಾರ ಪ್ರಮುಖ ತರಕಾರಿ ಬೆಲೆಗಳು ಕುಸಿದವು. ಬರದ ಬರೆಯಿಂದ ಬೆಂಡಾಗಿರುವ ರೈತರಿಗೆ ಬೆಲೆ ಕುಸಿತದ ಬಿಸಿ ತಟ್ಟಿತು. ಆದರೆ ಹೋಟೆಲ್ ಉದ್ಯಮಿಗಳು ಹಾಗೂ ಸಾಮಾನ್ಯ ಗ್ರಾಹಕರ ಪಾಲಿಗೆ ಬೆಲೆ ಕುಸಿತ ವರವಾಗಿ ಪರಿಣಮಿಸಿತು.</p>.<p>ಸಬ್ಬಸಗಿ ಸೊಪ್ಪಿನ ಬೆಲೆ ಕ್ವಿಂಟಲ್ಗೆ ದಿಢೀರ್ ₹ 500ರಿಂದ ₹1,000, ಎಲೆಕೋಸು ₹ 200 ರಿಂದ ₹500, ಮೆಂತೆ ಸೊಪ್ಪು, ಕೊತಂಬರಿ, ಹೂಕೋಸು, ಭೆಂಡೆಕಾಯಿ ಹಾಗೂ ಬೀನ್ಸ್ ಬೆಲೆ ₹ 500 ವರೆಗೆ ಕುಸಿಯಿತು. ಟೊಮೆಟೊ ಬೆಲೆಯಲ್ಲಿ ಸ್ವಲ್ಪ ಚೇತರಿಸಿಕೊಂಡಿತು.<br />ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕೆಜಿಗೆ ₹8 ರಿಂದ ₹10ಗೆ ಮಾರಾಟವಾದ ಕಾರಣ ಗ್ರಾಹಕರ ಪಾಲಿಗೆ ಅಚ್ಚುಮೆಚ್ಚಿನ ತರಕಾರಿಯಾಗಿ ಗುರುತಿಸಿಕೊಂಡಿತು. ಹೋಟೆಲ್ ಹಾಗೂ ಖಾನಾವಳಿ ಮಾಲೀಕರು ಉತ್ಸಾಹದಿಂದ ಟೊಮೆಟೊ ಖರೀದಿಸಿದರು.</p>.<p>ಬೆಳ್ಳೊಳ್ಳಿ ಬೆಲೆ ಕ್ವಿಂಟಲ್ಗೆ ₹ 200 ರಿಂದ ₹500, ಆಲೂಗಡ್ಡೆ ₹ 300 ರಿಂದ ₹400 ವರೆಗೆ ಹೆಚ್ಚಳವಾಯಿತು. ಗುಣಮಟ್ಟದ ಈರುಳ್ಳಿ, ಬದನೆಕಾಯಿ, ಗಜ್ಜರಿ, ಬಿಟ್ರೂಟ್ ಬೆಲೆ ಸ್ಥಿರವಾಗಿರುವುದು ಕಂಡು ಬಂದಿತು. ತೊಂಡೆಕಾಯಿ ಹಾಗೂ ಹಿರೇಕಾಯಿ ಮಾರುಕಟ್ಟೆಯಲ್ಲಿ ಹಿರಿಮೆಯನ್ನು ಕಾಯ್ದುಕೊಂಡವು.</p>.<p>ಹೈದರಾಬಾದ್ನಿಂದ ಆಲೂಗಡ್ಡೆ, ಹಿರೇಕಾಯಿ, ಈರುಳ್ಳಿ, ಬೆಳ್ಳೊಳ್ಳಿ, ಮೆಂತೆ ಸೊಪ್ಪು ಮಾರುಕಟ್ಟೆಗೆ ಆವಕವಾಗಿವೆ. ಮಹಾರಾಷ್ಟ್ರದ ಸೋಲಾಪುರದ ತೊಂಡೆಕಾಯಿ, ಬೀನ್ಸ್, ಲಾತೂರ್ನಿಂದ ಮೆಣಸಿನಕಾಯಿ, ನಾಸಿಕ್ನಿಂದ ಗಜ್ಜರಿ,<br />ಬೀದರ್ ತಾಲ್ಲೂಕು, ಚಿಟಗುಪ್ಪ ಹಾಗೂ ಭಾಲ್ಕಿಯಿಂದ ಹೂಕೋಸು, ಕೊತಂಬರಿ, ಕರಿಬೇವು ಹಾಗೂ ಬದನೆಕಾಯಿ ಬಂದಿವೆ.</p>.<p>‘ಮಹಾರಾಷ್ಟ್ರದಲ್ಲಿ ನೀರಾವರಿ ಸೌಲಭ್ಯ ಇರುವ ಜಿಲ್ಲೆಗಳಲ್ಲಿ ರೈತರು ಬೆಳೆದ ತರಕಾರಿ ಈ ಬಾರಿ ಜಿಲ್ಲೆಯ ಸಗಟು ಮಾರುಕಟ್ಟೆಗೆ ಬಂದಿದೆ. ಬಹುತೇಕ ರೈತರು ಒಂದೇ ಬಗೆಯ ತರಕಾರಿ ಬೆಳೆದಿದ್ದಾರೆ. ಹೀಗಾಗಿ ಬಹುತೇಕ ತರಕಾರಿ ಬೆಲೆ ಕುಸಿದಿದೆ’ ಎಂದು ಇಂಡಿಯನ್ ವೆಜಿಟೆಬಲ್ ಶಾಪ್ ಮಾಲೀಕ ಅಹ್ಮದ್ ಪಾಷಾ ಹೇಳುತ್ತಾರೆ.</p>.<p><strong>ಬೀದರ್ ತರಕಾರಿ ಸಗಟು ಮಾರುಕಟ್ಟೆ</strong><br /><br /><strong>ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ</strong><br />ಈರುಳ್ಳಿ, 1,000-1,500, 1,200–1,600<br />ಮೆಣಸಿನಕಾಯಿ, 2,000-2,500, 2,500–3,000<br />ಆಲೂಗಡ್ಡೆ, 1,500-2,000, 1,800–2,200<br />ಎಲೆಕೋಸು, 1,000-1,500, 800–1,000<br />ಬೆಳ್ಳೂಳ್ಳಿ , 2,500-3,000, 3,000–3,200<br />ಗಜ್ಜರಿ, 2,000-3,000, 2,500–3,000<br />ಬೀನ್ಸ್, 3,000-4,000, 3,000–3,500<br />ಬದನೆಕಾಯಿ, 3,000-4,000, 3,500–4,000<br />ಮೆಂತೆ ಸೊಪ್ಪು, 1,000-1,500, 800–1,000<br />ಹೂಕೋಸು, 2,000-2,400, 1,500–2,000<br />ಸಬ್ಬಸಗಿ, 3,000-4,000, 2,500–3,000<br />ಬಿಟ್ರೂಟ್, 3,500-4,000, 3,000–4,000<br />ಕರಿಬೇವು, 4,000-5,000, 3,000–4,000<br />ಕೊತಂಬರಿ, 3,000-4,000, 3,000–3,500<br />ಟೊಮೆಟೊ, 400- 600, 500–800<br />ತೊಂಡೆಕಾಯಿ, 2,500-3,000, 3,000–3,400<br />ಭೆಂಡೆಕಾಯಿ, 3,000-3,500, 2,500–3,000<br />ಹಿರೇಕಾಯಿ, 3,000-3,500, 3,000–4,000<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ನಗರದ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಈ ವಾರ ಪ್ರಮುಖ ತರಕಾರಿ ಬೆಲೆಗಳು ಕುಸಿದವು. ಬರದ ಬರೆಯಿಂದ ಬೆಂಡಾಗಿರುವ ರೈತರಿಗೆ ಬೆಲೆ ಕುಸಿತದ ಬಿಸಿ ತಟ್ಟಿತು. ಆದರೆ ಹೋಟೆಲ್ ಉದ್ಯಮಿಗಳು ಹಾಗೂ ಸಾಮಾನ್ಯ ಗ್ರಾಹಕರ ಪಾಲಿಗೆ ಬೆಲೆ ಕುಸಿತ ವರವಾಗಿ ಪರಿಣಮಿಸಿತು.</p>.<p>ಸಬ್ಬಸಗಿ ಸೊಪ್ಪಿನ ಬೆಲೆ ಕ್ವಿಂಟಲ್ಗೆ ದಿಢೀರ್ ₹ 500ರಿಂದ ₹1,000, ಎಲೆಕೋಸು ₹ 200 ರಿಂದ ₹500, ಮೆಂತೆ ಸೊಪ್ಪು, ಕೊತಂಬರಿ, ಹೂಕೋಸು, ಭೆಂಡೆಕಾಯಿ ಹಾಗೂ ಬೀನ್ಸ್ ಬೆಲೆ ₹ 500 ವರೆಗೆ ಕುಸಿಯಿತು. ಟೊಮೆಟೊ ಬೆಲೆಯಲ್ಲಿ ಸ್ವಲ್ಪ ಚೇತರಿಸಿಕೊಂಡಿತು.<br />ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕೆಜಿಗೆ ₹8 ರಿಂದ ₹10ಗೆ ಮಾರಾಟವಾದ ಕಾರಣ ಗ್ರಾಹಕರ ಪಾಲಿಗೆ ಅಚ್ಚುಮೆಚ್ಚಿನ ತರಕಾರಿಯಾಗಿ ಗುರುತಿಸಿಕೊಂಡಿತು. ಹೋಟೆಲ್ ಹಾಗೂ ಖಾನಾವಳಿ ಮಾಲೀಕರು ಉತ್ಸಾಹದಿಂದ ಟೊಮೆಟೊ ಖರೀದಿಸಿದರು.</p>.<p>ಬೆಳ್ಳೊಳ್ಳಿ ಬೆಲೆ ಕ್ವಿಂಟಲ್ಗೆ ₹ 200 ರಿಂದ ₹500, ಆಲೂಗಡ್ಡೆ ₹ 300 ರಿಂದ ₹400 ವರೆಗೆ ಹೆಚ್ಚಳವಾಯಿತು. ಗುಣಮಟ್ಟದ ಈರುಳ್ಳಿ, ಬದನೆಕಾಯಿ, ಗಜ್ಜರಿ, ಬಿಟ್ರೂಟ್ ಬೆಲೆ ಸ್ಥಿರವಾಗಿರುವುದು ಕಂಡು ಬಂದಿತು. ತೊಂಡೆಕಾಯಿ ಹಾಗೂ ಹಿರೇಕಾಯಿ ಮಾರುಕಟ್ಟೆಯಲ್ಲಿ ಹಿರಿಮೆಯನ್ನು ಕಾಯ್ದುಕೊಂಡವು.</p>.<p>ಹೈದರಾಬಾದ್ನಿಂದ ಆಲೂಗಡ್ಡೆ, ಹಿರೇಕಾಯಿ, ಈರುಳ್ಳಿ, ಬೆಳ್ಳೊಳ್ಳಿ, ಮೆಂತೆ ಸೊಪ್ಪು ಮಾರುಕಟ್ಟೆಗೆ ಆವಕವಾಗಿವೆ. ಮಹಾರಾಷ್ಟ್ರದ ಸೋಲಾಪುರದ ತೊಂಡೆಕಾಯಿ, ಬೀನ್ಸ್, ಲಾತೂರ್ನಿಂದ ಮೆಣಸಿನಕಾಯಿ, ನಾಸಿಕ್ನಿಂದ ಗಜ್ಜರಿ,<br />ಬೀದರ್ ತಾಲ್ಲೂಕು, ಚಿಟಗುಪ್ಪ ಹಾಗೂ ಭಾಲ್ಕಿಯಿಂದ ಹೂಕೋಸು, ಕೊತಂಬರಿ, ಕರಿಬೇವು ಹಾಗೂ ಬದನೆಕಾಯಿ ಬಂದಿವೆ.</p>.<p>‘ಮಹಾರಾಷ್ಟ್ರದಲ್ಲಿ ನೀರಾವರಿ ಸೌಲಭ್ಯ ಇರುವ ಜಿಲ್ಲೆಗಳಲ್ಲಿ ರೈತರು ಬೆಳೆದ ತರಕಾರಿ ಈ ಬಾರಿ ಜಿಲ್ಲೆಯ ಸಗಟು ಮಾರುಕಟ್ಟೆಗೆ ಬಂದಿದೆ. ಬಹುತೇಕ ರೈತರು ಒಂದೇ ಬಗೆಯ ತರಕಾರಿ ಬೆಳೆದಿದ್ದಾರೆ. ಹೀಗಾಗಿ ಬಹುತೇಕ ತರಕಾರಿ ಬೆಲೆ ಕುಸಿದಿದೆ’ ಎಂದು ಇಂಡಿಯನ್ ವೆಜಿಟೆಬಲ್ ಶಾಪ್ ಮಾಲೀಕ ಅಹ್ಮದ್ ಪಾಷಾ ಹೇಳುತ್ತಾರೆ.</p>.<p><strong>ಬೀದರ್ ತರಕಾರಿ ಸಗಟು ಮಾರುಕಟ್ಟೆ</strong><br /><br /><strong>ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ</strong><br />ಈರುಳ್ಳಿ, 1,000-1,500, 1,200–1,600<br />ಮೆಣಸಿನಕಾಯಿ, 2,000-2,500, 2,500–3,000<br />ಆಲೂಗಡ್ಡೆ, 1,500-2,000, 1,800–2,200<br />ಎಲೆಕೋಸು, 1,000-1,500, 800–1,000<br />ಬೆಳ್ಳೂಳ್ಳಿ , 2,500-3,000, 3,000–3,200<br />ಗಜ್ಜರಿ, 2,000-3,000, 2,500–3,000<br />ಬೀನ್ಸ್, 3,000-4,000, 3,000–3,500<br />ಬದನೆಕಾಯಿ, 3,000-4,000, 3,500–4,000<br />ಮೆಂತೆ ಸೊಪ್ಪು, 1,000-1,500, 800–1,000<br />ಹೂಕೋಸು, 2,000-2,400, 1,500–2,000<br />ಸಬ್ಬಸಗಿ, 3,000-4,000, 2,500–3,000<br />ಬಿಟ್ರೂಟ್, 3,500-4,000, 3,000–4,000<br />ಕರಿಬೇವು, 4,000-5,000, 3,000–4,000<br />ಕೊತಂಬರಿ, 3,000-4,000, 3,000–3,500<br />ಟೊಮೆಟೊ, 400- 600, 500–800<br />ತೊಂಡೆಕಾಯಿ, 2,500-3,000, 3,000–3,400<br />ಭೆಂಡೆಕಾಯಿ, 3,000-3,500, 2,500–3,000<br />ಹಿರೇಕಾಯಿ, 3,000-3,500, 3,000–4,000<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>