<p><strong>ಬೀದರ್:</strong> ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಹಿರೇಕಾಯಿ ಬೆಲೆ ₹ 2,000 ರಿಂದ 2,500ರ ವರೆಗೆ ಹಾಗೂ ಬೆಂಡೆಕಾಯಿ ಬೆಲೆ ₹ 1,500 ರಿಂದ ₹ 2,000ರ ವರೆಗೆ ಕುಸಿಯಿತು. ಹೀಗಾಗಿ ಗ್ರಾಹಕರು ತಮ್ಮ ಅಚ್ಚುಮೆಚ್ಚಿನ ಬದನೆಕಾಯಿ ಹಾಗೂ ಬೆಂಡೆಕಾಯಿಯನ್ನು ಆಸಕ್ತಿಯಿಂದ ಖರೀದಿಸಿದರು. ರೈತರು ಮಾತ್ರ ಬೆಲೆ ಕುಸಿತದಿಂದಾಗಿ ನಿರಾಶರಾದರು.</p>.<p>ಬಹುತೇಕ ತರಕಾರಿ ಬೆಲೆಗಳಲ್ಲಿ ತುಸು ಕುಸಿತ ಕಂಡು ಬಂದಿತು. ಪ್ರತಿ ಕ್ವಿಂಟಲ್ಗೆ ಹೂಕೋಸು ₹ 1 ಸಾವಿರ, ಮೆಣಸಿನಕಾಯಿ, ಆಲೂಗಡ್ಡೆ, ಸಬ್ಬಸಗಿ, ಕರಿಬೇವು, ಕೊತಂಬರಿ, ಮೆಂತೆ ಸೊಪ್ಪು ₹ 500ರ ವರೆಗೆ ಕುಸಿಯಿತು. ಟೊಮೆಟೊ ಬೆಲೆ ಸಹ ₹ 300ರ ವರೆಗೆ ಇಳಿಯಿತು.</p>.<p>ಬದನೆಕಾಯಿ ಹಾಗೂ ಬೆಳ್ಳೊಳ್ಳಿ ಬೆಲೆ ಮಾತ್ರ ಪ್ರತಿ ಕ್ವಿಂಟಲ್ಗೆ ₹ 500 ಹೆಚ್ಚಳವಾಯಿತು. ಗ್ರಾಹಕರು ಸಾಮಾನ್ಯವಾಗಿ ಕೊಂಡುಕೊಳ್ಳುವ ಈರುಳ್ಳಿ, ಎಲೆಕೋಸು, ಗಜ್ಜರಿ, ಬೀನ್ಸ್, ಬಿಟ್ರೂಟ್, ತೊಂಡೆಕಾಯಿ ಹಾಗೂ ಪಾಲಕ್ ಸೊಪ್ಪಿನ ಬೆಲೆ ಸ್ಥಿರವಾಗಿತ್ತು.</p>.<p>ತರಕಾರಿ ಸಗಟು ಮಾರುಕಟ್ಟೆಗೆ ಸೋಲಾಪುರದಿಂದ ಈರುಳ್ಳಿ, ಆಲೂಗಡ್ಡೆ, ಬೆಳ್ಳೂಳ್ಳಿ, ಹೈದರಾಬಾದ್ನಿಂದ ಮೆಣಸಿನಕಾಯಿ, ಗಜ್ಜರಿ, ಬೀನ್ಸ್, ಬಿಟ್ರೂಟ್, ತೊಂಡೆಕಾಯಿ ಬಂದಿವೆ. ಔರಂಗಾಬಾದ್ ಜಿಲ್ಲೆಯಲ್ಲಿ ಬೆಳೆದಿರುವ ಮೆಂತೆ ಸೊಪ್ಪು ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗಿದೆ.</p>.<p>ಜಿಲ್ಲೆಯ ಭಾಲ್ಕಿ, ಚಿಟಗುಪ್ಪ ಹಾಗೂ ಬೀದರ್ ತಾಲ್ಲೂಕಿನಲ್ಲಿ ಬೆಳೆದ ಕೊತಂಬರಿ, ಕರಿಬೇವು, ಸಬ್ಬಸಗಿ, ಹೂಕೋಸು, ಎಲೆಕೋಸು, ಬದನೆಕಾಯಿ ಮಾರುಕಟ್ಟೆಗೆ ಬಂದಿದೆ.</p>.<p>‘ಬೀದರ್ ಜಿಲ್ಲೆಯಲ್ಲಿ ಬರ ಇರುವ ಕಾರಣ ತರಕಾರಿ ಕಡಿಮೆ ಬಂದಿದೆ. ನೀರಾವರಿ ಸೌಲಭ್ಯ ಮಾಡಿಕೊಂಡಿರುವ ಹಾಗೂ ಪಾಲಿಹೌಸ್ನಲ್ಲಿ ತರಕಾರಿ ಬೆಳೆದ ರೈತರು ಮಾತ್ರ ಬೀದರ್ ಮಾರುಕಟ್ಟೆಗೆ ತರಕಾರಿ ಕಳಿಸುತ್ತಿದ್ದಾರೆ’ ಎಂದು ಭಾರತ ವೆಜಿಟೇಬಲ್ ಮಾಲೀಕ ಅಬ್ದುಲ್ ಗನಿ ಹೇಳುತ್ತಾರೆ.</p>.<p>‘ಜಿಲ್ಲೆಯಲ್ಲಿ ಈಗಲೂ ಸಾಧಾರಣ ಚಳಿ ಇದೆ. ಹೀಗಾಗಿ ಫೆಬ್ರುವರಿ ಅಂತ್ಯದ ವರೆಗೂ ಗ್ರಾಮೀಣ ಪ್ರದೇಶದಿಂದ ಸ್ವಲ್ಪ ಮಟ್ಟಿಗೆ ತರಕಾರಿ ಬರಲಿದೆ’ ಎಂದು ಅವರು ತಿಳಿಸುತ್ತಾರೆ.</p>.<p>..................................................................................<br />ಬೀದರ್ ತರಕಾರಿ ಸಗಟು ಮಾರುಕಟ್ಟೆ<br />..................................................................................<br />ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ<br />ಈರುಳ್ಳಿ, 1,000-1,500, 1,200-1,500<br />ಮೆಣಸಿನಕಾಯಿ 2,500-3,000, 2,500-3,000<br />ಆಲೂಗಡ್ಡೆ 1,200-1,500, 1,500-2,000<br />ಎಲೆಕೋಸು 1,000-1,500, 1,200-1,500<br />ಬೆಳ್ಳೂಳ್ಳಿ 2,500-3,000, 3,000-3,500<br />ಗಜ್ಜರಿ 3,000-3,500, 3,000-3,500<br />ಬೀನ್ಸ್ 4,500-5,000, 4,500-5,000<br />ಬದನೆಕಾಯಿ 3,000-3,500, 3,500-4,000<br />ಮೆಂತೆ ಸೊಪ್ಪು 2,500-3,000, 2,000-2,500<br />ಹೂಕೋಸು 3,000-3,500, 2,000-2,500<br />ಸಬ್ಬಸಗಿ 3,000-3,500, 2,500-3,000<br />ಬಿಟ್ರೂಟ್ 3,500-4,000, 3,500-4,000</p>.<p>ತೊಂಡೆಕಾಯಿ 3,500-4,000, 3,500-4,000<br />ಕರಿಬೇವು 3,500-4,000, 3,000-3,500<br />ಕೊತಂಬರಿ 3,000-3,500, 2,000-3,000<br />ಟೊಮೆಟೊ, 1,200-1,500, 1,000-1,200<br />ಪಾಲಕ್ 2,000-2,500, 2,000-2,500<br />ಬೆಂಡೆಕಾಯಿ 4,000–4,500, 2,500-3,000<br />ಹಿರೇಕಾಯಿ 5,000–5,500, 3,000-3,500</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಹಿರೇಕಾಯಿ ಬೆಲೆ ₹ 2,000 ರಿಂದ 2,500ರ ವರೆಗೆ ಹಾಗೂ ಬೆಂಡೆಕಾಯಿ ಬೆಲೆ ₹ 1,500 ರಿಂದ ₹ 2,000ರ ವರೆಗೆ ಕುಸಿಯಿತು. ಹೀಗಾಗಿ ಗ್ರಾಹಕರು ತಮ್ಮ ಅಚ್ಚುಮೆಚ್ಚಿನ ಬದನೆಕಾಯಿ ಹಾಗೂ ಬೆಂಡೆಕಾಯಿಯನ್ನು ಆಸಕ್ತಿಯಿಂದ ಖರೀದಿಸಿದರು. ರೈತರು ಮಾತ್ರ ಬೆಲೆ ಕುಸಿತದಿಂದಾಗಿ ನಿರಾಶರಾದರು.</p>.<p>ಬಹುತೇಕ ತರಕಾರಿ ಬೆಲೆಗಳಲ್ಲಿ ತುಸು ಕುಸಿತ ಕಂಡು ಬಂದಿತು. ಪ್ರತಿ ಕ್ವಿಂಟಲ್ಗೆ ಹೂಕೋಸು ₹ 1 ಸಾವಿರ, ಮೆಣಸಿನಕಾಯಿ, ಆಲೂಗಡ್ಡೆ, ಸಬ್ಬಸಗಿ, ಕರಿಬೇವು, ಕೊತಂಬರಿ, ಮೆಂತೆ ಸೊಪ್ಪು ₹ 500ರ ವರೆಗೆ ಕುಸಿಯಿತು. ಟೊಮೆಟೊ ಬೆಲೆ ಸಹ ₹ 300ರ ವರೆಗೆ ಇಳಿಯಿತು.</p>.<p>ಬದನೆಕಾಯಿ ಹಾಗೂ ಬೆಳ್ಳೊಳ್ಳಿ ಬೆಲೆ ಮಾತ್ರ ಪ್ರತಿ ಕ್ವಿಂಟಲ್ಗೆ ₹ 500 ಹೆಚ್ಚಳವಾಯಿತು. ಗ್ರಾಹಕರು ಸಾಮಾನ್ಯವಾಗಿ ಕೊಂಡುಕೊಳ್ಳುವ ಈರುಳ್ಳಿ, ಎಲೆಕೋಸು, ಗಜ್ಜರಿ, ಬೀನ್ಸ್, ಬಿಟ್ರೂಟ್, ತೊಂಡೆಕಾಯಿ ಹಾಗೂ ಪಾಲಕ್ ಸೊಪ್ಪಿನ ಬೆಲೆ ಸ್ಥಿರವಾಗಿತ್ತು.</p>.<p>ತರಕಾರಿ ಸಗಟು ಮಾರುಕಟ್ಟೆಗೆ ಸೋಲಾಪುರದಿಂದ ಈರುಳ್ಳಿ, ಆಲೂಗಡ್ಡೆ, ಬೆಳ್ಳೂಳ್ಳಿ, ಹೈದರಾಬಾದ್ನಿಂದ ಮೆಣಸಿನಕಾಯಿ, ಗಜ್ಜರಿ, ಬೀನ್ಸ್, ಬಿಟ್ರೂಟ್, ತೊಂಡೆಕಾಯಿ ಬಂದಿವೆ. ಔರಂಗಾಬಾದ್ ಜಿಲ್ಲೆಯಲ್ಲಿ ಬೆಳೆದಿರುವ ಮೆಂತೆ ಸೊಪ್ಪು ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗಿದೆ.</p>.<p>ಜಿಲ್ಲೆಯ ಭಾಲ್ಕಿ, ಚಿಟಗುಪ್ಪ ಹಾಗೂ ಬೀದರ್ ತಾಲ್ಲೂಕಿನಲ್ಲಿ ಬೆಳೆದ ಕೊತಂಬರಿ, ಕರಿಬೇವು, ಸಬ್ಬಸಗಿ, ಹೂಕೋಸು, ಎಲೆಕೋಸು, ಬದನೆಕಾಯಿ ಮಾರುಕಟ್ಟೆಗೆ ಬಂದಿದೆ.</p>.<p>‘ಬೀದರ್ ಜಿಲ್ಲೆಯಲ್ಲಿ ಬರ ಇರುವ ಕಾರಣ ತರಕಾರಿ ಕಡಿಮೆ ಬಂದಿದೆ. ನೀರಾವರಿ ಸೌಲಭ್ಯ ಮಾಡಿಕೊಂಡಿರುವ ಹಾಗೂ ಪಾಲಿಹೌಸ್ನಲ್ಲಿ ತರಕಾರಿ ಬೆಳೆದ ರೈತರು ಮಾತ್ರ ಬೀದರ್ ಮಾರುಕಟ್ಟೆಗೆ ತರಕಾರಿ ಕಳಿಸುತ್ತಿದ್ದಾರೆ’ ಎಂದು ಭಾರತ ವೆಜಿಟೇಬಲ್ ಮಾಲೀಕ ಅಬ್ದುಲ್ ಗನಿ ಹೇಳುತ್ತಾರೆ.</p>.<p>‘ಜಿಲ್ಲೆಯಲ್ಲಿ ಈಗಲೂ ಸಾಧಾರಣ ಚಳಿ ಇದೆ. ಹೀಗಾಗಿ ಫೆಬ್ರುವರಿ ಅಂತ್ಯದ ವರೆಗೂ ಗ್ರಾಮೀಣ ಪ್ರದೇಶದಿಂದ ಸ್ವಲ್ಪ ಮಟ್ಟಿಗೆ ತರಕಾರಿ ಬರಲಿದೆ’ ಎಂದು ಅವರು ತಿಳಿಸುತ್ತಾರೆ.</p>.<p>..................................................................................<br />ಬೀದರ್ ತರಕಾರಿ ಸಗಟು ಮಾರುಕಟ್ಟೆ<br />..................................................................................<br />ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ<br />ಈರುಳ್ಳಿ, 1,000-1,500, 1,200-1,500<br />ಮೆಣಸಿನಕಾಯಿ 2,500-3,000, 2,500-3,000<br />ಆಲೂಗಡ್ಡೆ 1,200-1,500, 1,500-2,000<br />ಎಲೆಕೋಸು 1,000-1,500, 1,200-1,500<br />ಬೆಳ್ಳೂಳ್ಳಿ 2,500-3,000, 3,000-3,500<br />ಗಜ್ಜರಿ 3,000-3,500, 3,000-3,500<br />ಬೀನ್ಸ್ 4,500-5,000, 4,500-5,000<br />ಬದನೆಕಾಯಿ 3,000-3,500, 3,500-4,000<br />ಮೆಂತೆ ಸೊಪ್ಪು 2,500-3,000, 2,000-2,500<br />ಹೂಕೋಸು 3,000-3,500, 2,000-2,500<br />ಸಬ್ಬಸಗಿ 3,000-3,500, 2,500-3,000<br />ಬಿಟ್ರೂಟ್ 3,500-4,000, 3,500-4,000</p>.<p>ತೊಂಡೆಕಾಯಿ 3,500-4,000, 3,500-4,000<br />ಕರಿಬೇವು 3,500-4,000, 3,000-3,500<br />ಕೊತಂಬರಿ 3,000-3,500, 2,000-3,000<br />ಟೊಮೆಟೊ, 1,200-1,500, 1,000-1,200<br />ಪಾಲಕ್ 2,000-2,500, 2,000-2,500<br />ಬೆಂಡೆಕಾಯಿ 4,000–4,500, 2,500-3,000<br />ಹಿರೇಕಾಯಿ 5,000–5,500, 3,000-3,500</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>