<p>ಬೀದರ್: ರೋಟರಿ ಕ್ಲಬ್ನಿಂದ ನಗರದ ಐಎಂಎ ಸಭಾಂಗಣದಲ್ಲಿ ಶನಿವಾರ ಮಹಿಳಾ ದಿನ ಆಚರಿಸಲಾಯಿತು.</p>.<p>ಜ್ಞಾನ ಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ. ಜಿ. ಉದ್ಘಾಟಿಸಿ, 'ಮಹಿಳೆಯರಲ್ಲಿ ಹೂಡಿಕೆ ಮಾಡುವ ಮೂಲಕ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ನಾಯಕತ್ವ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಲಿಂಗ ಸಮಾನತೆ ತರಬೇಕು' ಎಂದು ಅಭಿಪ್ರಾಯಪಟ್ಟರು.</p>.<p>'ಹಿಂದಿನ ಕಾಲದಲ್ಲಿ ಹೆಣ್ಣು, ಹೊನ್ನು,ಮಣ್ಣು ಮಾಯೆಯೆಂದು ಪರಿಗಣಿಸಿ ಅವಳನ್ನು ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಿದರು. ಆದರೆ, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ನಾಲ್ಕು ಗೋಡೆಗಳನ್ನು ದಾಟಿ ಹೊರಬಂದಿದ್ದಾಳೆ. ಮೊದಲಿನ ಹಾಗೆ ತನ್ನಲ್ಲಿರುವ ಸಾಮರ್ಥ್ಯವನ್ನು ಪ್ರದರ್ಶಿಸಲು ಹಿಂಜರಿಯುತಿಲ್ಲ. ಹೀಗೆ ಗಂಡಿಗೆ ಸಮನಾಗಿ ಹೆಗಲಿಗೆ -ಹೆಗಲು ಕೊಟ್ಟು ದುಡಿದು ತನ್ನ ಅಸ್ಥಿತ್ವವನ್ನು ತೋರಿಸಿಕೊಂಡಿದಾಳೆ' ಎಂದು ಹೇಳಿದರು.</p>.<p>ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಶಾರದಾ ಮಾಳಗೆ, ಸಬ್ ಇನ್ಸ್ಪೆಕ್ಟರ್ ಶೀಲಾದೇವಿ ಎಸ್. ಎನ್., ಸಮಾಜ ಸೇವಕಿ ಕವಿತಾ ಹುಷಾರೆ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕಿ ಉಮಾದೇವಿ ಚಿಲ್ಲರ್ಗಿ ಮಾತನಾಡಿದರು.</p>.<p>ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಯಿಪ್ರಿಯಾ ಚಿದ್ರಿ , ನಾಗವೇಣಿ ಕೊಳಾರ, ಭಾನುಪ್ರಿಯ ಅರಳಿ, ಉಷಾ ಪ್ರಭಾಕರ, ಆಶಾರಾಣಿ ಸಾಗರ, ಶ್ವೇತಾ ಗೌಡ , ಕೆಕೆಆರ್ ಟಿಸಿಯ ನಿರ್ವಾಹಕಿ ವಿಮಲಾ ದುರ್ಗೆ, ಶುಶ್ರೂಷಕಿ ಕಪಿಲಾ ಮಡಿವಾಳ, ವಿಜಯಲಕ್ಷ್ಮಿ ಚೊಂಡೆ ಅವರನ್ನು ಸನ್ಮಾನಿಸಲಾಯಿತು.<br /><br />ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಕಾಂತ ಕಾಡಾದಿ ಅಧ್ಯಕ್ಷತೆ, ನಿಕಟಪೂರ್ವ ಅಧ್ಯಕ್ಷ ರವಿ ಮೂಲಗೆ, ಕಾರ್ಯದರ್ಶಿ ಸೋಮಶೇಖರ ಪಾಟೀಲ, ಸುರೇಶ ಚನಶೆಟ್ಟಿ, ಅನಿಲ ಮಸೂದಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ರೋಟರಿ ಕ್ಲಬ್ನಿಂದ ನಗರದ ಐಎಂಎ ಸಭಾಂಗಣದಲ್ಲಿ ಶನಿವಾರ ಮಹಿಳಾ ದಿನ ಆಚರಿಸಲಾಯಿತು.</p>.<p>ಜ್ಞಾನ ಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ. ಜಿ. ಉದ್ಘಾಟಿಸಿ, 'ಮಹಿಳೆಯರಲ್ಲಿ ಹೂಡಿಕೆ ಮಾಡುವ ಮೂಲಕ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ನಾಯಕತ್ವ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಲಿಂಗ ಸಮಾನತೆ ತರಬೇಕು' ಎಂದು ಅಭಿಪ್ರಾಯಪಟ್ಟರು.</p>.<p>'ಹಿಂದಿನ ಕಾಲದಲ್ಲಿ ಹೆಣ್ಣು, ಹೊನ್ನು,ಮಣ್ಣು ಮಾಯೆಯೆಂದು ಪರಿಗಣಿಸಿ ಅವಳನ್ನು ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಿದರು. ಆದರೆ, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ನಾಲ್ಕು ಗೋಡೆಗಳನ್ನು ದಾಟಿ ಹೊರಬಂದಿದ್ದಾಳೆ. ಮೊದಲಿನ ಹಾಗೆ ತನ್ನಲ್ಲಿರುವ ಸಾಮರ್ಥ್ಯವನ್ನು ಪ್ರದರ್ಶಿಸಲು ಹಿಂಜರಿಯುತಿಲ್ಲ. ಹೀಗೆ ಗಂಡಿಗೆ ಸಮನಾಗಿ ಹೆಗಲಿಗೆ -ಹೆಗಲು ಕೊಟ್ಟು ದುಡಿದು ತನ್ನ ಅಸ್ಥಿತ್ವವನ್ನು ತೋರಿಸಿಕೊಂಡಿದಾಳೆ' ಎಂದು ಹೇಳಿದರು.</p>.<p>ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಶಾರದಾ ಮಾಳಗೆ, ಸಬ್ ಇನ್ಸ್ಪೆಕ್ಟರ್ ಶೀಲಾದೇವಿ ಎಸ್. ಎನ್., ಸಮಾಜ ಸೇವಕಿ ಕವಿತಾ ಹುಷಾರೆ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕಿ ಉಮಾದೇವಿ ಚಿಲ್ಲರ್ಗಿ ಮಾತನಾಡಿದರು.</p>.<p>ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಯಿಪ್ರಿಯಾ ಚಿದ್ರಿ , ನಾಗವೇಣಿ ಕೊಳಾರ, ಭಾನುಪ್ರಿಯ ಅರಳಿ, ಉಷಾ ಪ್ರಭಾಕರ, ಆಶಾರಾಣಿ ಸಾಗರ, ಶ್ವೇತಾ ಗೌಡ , ಕೆಕೆಆರ್ ಟಿಸಿಯ ನಿರ್ವಾಹಕಿ ವಿಮಲಾ ದುರ್ಗೆ, ಶುಶ್ರೂಷಕಿ ಕಪಿಲಾ ಮಡಿವಾಳ, ವಿಜಯಲಕ್ಷ್ಮಿ ಚೊಂಡೆ ಅವರನ್ನು ಸನ್ಮಾನಿಸಲಾಯಿತು.<br /><br />ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಕಾಂತ ಕಾಡಾದಿ ಅಧ್ಯಕ್ಷತೆ, ನಿಕಟಪೂರ್ವ ಅಧ್ಯಕ್ಷ ರವಿ ಮೂಲಗೆ, ಕಾರ್ಯದರ್ಶಿ ಸೋಮಶೇಖರ ಪಾಟೀಲ, ಸುರೇಶ ಚನಶೆಟ್ಟಿ, ಅನಿಲ ಮಸೂದಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>