<p>ಚಿಟಗುಪ್ಪ: ’ವೃಷ್ಠಿ ಜಪ ಯಜ್ಞ ಮಾಡುವುದರಿಂದ ಭೂಮಿಗೆ ಮಳೆ ಸುರಿಯುತ್ತದೆ, ಯಜ್ಞದಿಂದ ಬರುವ ಹೊಗೆಯಿಂದ ಮೋಡ ಚದುರುತ್ತವೆʼ ಎಂದು ಅರ್ಚಕ ವಿವೇಕಾನಂದ ಹೇಳಿದರು.</p>.<p>ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದ ಹೊರವಲಯದಲ್ಲಿರುವ ಹನುಮಾನ ಲಂಕಾದಲ್ಲಿ ಭಾನುವಾರ ವೃಷ್ಠಿ ಜಪ ಯಜ್ಞ ಆರಂಭಿಸಿ ಅವರು ಮಾತನಾಡಿದರು.</p>.<p>ಐದು ದಿನಗಳವರೆಗೆ ನಿರಂತರವಾಗಿ ಜಪ ಯಜ್ಞ ಮಾಡುವುದರಿಂದ ಮಳೆ ಬಂದು ಧರೆ ತಂಪಾಗಿಸುತ್ತದೆ. ರೈತರು ಬಿತ್ತನೆ ಕಾರ್ಯ ಆರಂಭಿಸಲು ಸಹಕಾರಿಯಾಗುತ್ತದೆ, ಜಾನುವಾರುಗಳಿಗೆ ಹುಲ್ಲು ಬೆಳೆದು ಅನುಕೂಲವಾಗುತ್ತದೆ, ಕುಡಿಯಲು ನೀರು ಲಭ್ಯವಾಗುತ್ತದೆ. ಹೀಗಾಗಿ ಎಲ್ಲರೂ ಯಜ್ಞಪೂಜೆಯಲ್ಲಿ ಭಕ್ತಿಯಿಂದ ಪಾಲ್ಗೊಂಡು ಸೇವೆ ಸಲ್ಲಿಸಬೇಕು ಎಂದರು.</p>.<p>ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಪೂಜೆ ನಡೆಯಿತು. ನಂತರ ಪುಷ್ಪಾರ್ಚನೆ ಮಾಡಿ ಮಂಗಳಾರತಿ ಮುಗಿಸಿ ಎಲ್ಲ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.</p>.<p>ಜಗನ್ನಾಥ ಪಂಡಿತಜಿ, ಸಂಜುಕುಮಾರ್ ಪಂಚಾಳ, ಸಂದೀಪ, ವಿಜಯಕುಮಾರ್, ಜಗನ್ನಾಥ ಉಪ್ಪಾರ, ಶಿವಕುಮಾರ್ ಇತರರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಟಗುಪ್ಪ: ’ವೃಷ್ಠಿ ಜಪ ಯಜ್ಞ ಮಾಡುವುದರಿಂದ ಭೂಮಿಗೆ ಮಳೆ ಸುರಿಯುತ್ತದೆ, ಯಜ್ಞದಿಂದ ಬರುವ ಹೊಗೆಯಿಂದ ಮೋಡ ಚದುರುತ್ತವೆʼ ಎಂದು ಅರ್ಚಕ ವಿವೇಕಾನಂದ ಹೇಳಿದರು.</p>.<p>ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದ ಹೊರವಲಯದಲ್ಲಿರುವ ಹನುಮಾನ ಲಂಕಾದಲ್ಲಿ ಭಾನುವಾರ ವೃಷ್ಠಿ ಜಪ ಯಜ್ಞ ಆರಂಭಿಸಿ ಅವರು ಮಾತನಾಡಿದರು.</p>.<p>ಐದು ದಿನಗಳವರೆಗೆ ನಿರಂತರವಾಗಿ ಜಪ ಯಜ್ಞ ಮಾಡುವುದರಿಂದ ಮಳೆ ಬಂದು ಧರೆ ತಂಪಾಗಿಸುತ್ತದೆ. ರೈತರು ಬಿತ್ತನೆ ಕಾರ್ಯ ಆರಂಭಿಸಲು ಸಹಕಾರಿಯಾಗುತ್ತದೆ, ಜಾನುವಾರುಗಳಿಗೆ ಹುಲ್ಲು ಬೆಳೆದು ಅನುಕೂಲವಾಗುತ್ತದೆ, ಕುಡಿಯಲು ನೀರು ಲಭ್ಯವಾಗುತ್ತದೆ. ಹೀಗಾಗಿ ಎಲ್ಲರೂ ಯಜ್ಞಪೂಜೆಯಲ್ಲಿ ಭಕ್ತಿಯಿಂದ ಪಾಲ್ಗೊಂಡು ಸೇವೆ ಸಲ್ಲಿಸಬೇಕು ಎಂದರು.</p>.<p>ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಪೂಜೆ ನಡೆಯಿತು. ನಂತರ ಪುಷ್ಪಾರ್ಚನೆ ಮಾಡಿ ಮಂಗಳಾರತಿ ಮುಗಿಸಿ ಎಲ್ಲ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.</p>.<p>ಜಗನ್ನಾಥ ಪಂಡಿತಜಿ, ಸಂಜುಕುಮಾರ್ ಪಂಚಾಳ, ಸಂದೀಪ, ವಿಜಯಕುಮಾರ್, ಜಗನ್ನಾಥ ಉಪ್ಪಾರ, ಶಿವಕುಮಾರ್ ಇತರರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>