<p><strong>ಗುಂಡ್ಲುಪೇಟೆ</strong>: ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದಿದ್ದ ಆಂಬುಲೆನ್ಸ್ ಕೆಟ್ಟು ನಿಂತ ಘಟನೆ ಬಂಡೀಪುರ ಕಾಡಂಚಿನ ಕುಂದಕೆರೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಇದರಿಂದ ಚಿಕಿತ್ಸೆಗೆ ತೆರಳಬೇಕಿದ್ದ ರೋಗಿಯೊಬ್ಬರು ಪರದಾಡುವಂತಾಯಿತು.</p>.<p>ತಾಲ್ಲೂಕಿನ ಕುಂದಕೆರೆ ಗ್ರಾಮದ ಈರಯ್ಯ (50) ಎಂಬ ವ್ಯಕ್ತಿಗೆ ತೀವ್ರ ಜ್ವರ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಗಂಭೀರ ಪರಿಸ್ಥಿತಿ ಅರಿತ ಸಂಬಂಧಿಕರು 108 ಆಂಬುಲೆನ್ಸ್ಗೆ ದೂರವಾಣಿ ಕರೆ ಮಾಡಿದ್ದಾರೆ. ಆಗ ಬಂದ ಆಂಬುಲೆನ್ಸ್ ಅನತಿ ದೂರ ಸಾಗುವ ಮುನ್ನವೇ ಕೆಟ್ಟು ನಿಂತಿತು. ಚಾಲಕ ಎಷ್ಟೇ ಪ್ರಯತ್ನಪಟ್ಟರು ಚಾಲು ಆಗದ ಪರಿಣಾಮ ರೋಗಿಯನ್ನು ಖಾಸಗಿ ವಾಹನದ ಮೂಲಕ ಕರೆ ತಂದು ಚಾಮರಾಜನಗರದ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು.</p>.<p>ಚಕ್ರಗಳು ಕೂಡ ಪಂಕ್ಚರ್: ‘ಆಂಬುಲೆನ್ಸ್ ಕೆಟ್ಟು ನಿಲ್ಲುವ ಜೊತೆಗೆ ಚಕ್ರಗಳು ಕೂಡ ಸವೆದು ಪಂಕ್ಚರ್ ಆಗಿವೆ. ತುರ್ತು ವಾಹನಗಳು ಹೋಗುವ ವೇಗಕ್ಕೆ ಟೈರ್ ಸ್ಫೋಟಗೊಂಡರೇ ಅಪಾಯಕ್ಕೆ ಒಳಗಾಗುವವರು ಬಡಜನರು. ಆದ್ದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ರೀತಿ ನಿರ್ಲಕ್ಷ್ಯವನ್ನು ಬಿಡಬೇಕು’ ಎಂದು ರೈತ ಮುಖಂಡ ಕುಂದಕೆರೆ ಸಂಪತ್ತು ಆಕ್ರೋಶ ಹೊರ ಹಾಕಿದರು.</p>.<p>ಸ್ಥಳೀಯರ ಆಕ್ರೋಶ: ಕುಂದಕೆರೆ ಬಂಡೀಪುರದ ಕಾಡಂಚಿನ ಗ್ರಾಮವಾಗಿದ್ದು, ತುರ್ತು ಸಂದರ್ಭದಲ್ಲಿ 180 ಆಂಬುಲೆನ್ಸ್ ಅವಲಂಬಿಸಿದ್ದೇವೆ. ಆದರೆ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಂಬುಲೆನ್ಸ್ ವಾಹನವೇ ಕೆಟ್ಟು ನಿಂತಿರುವುದು ದುರದೃಷ್ಟಕರ. ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ವಾಹನಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ದುಸ್ಥಿತಿಯಲ್ಲಿದೆ. ಹೀಗಿದ್ದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಬಾರದ ಆಂಬುಲೆನ್ಸ್ ಏಕೆ ಓಡಾಟ ನಡೆಸುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಹೆಚ್ಚುವರಿ ಅಂಬ್ಯುಲೆನ್ಸ್ ಸೇವೆಗೆ ಒತ್ತಾಯ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು 108 ಆಂಬುಲೆನ್ಸ್ ಸೇರಿದಂತೆ 6 ವಾಹನಗಳಿದ್ದು, ಅದರಲ್ಲಿ ಒಂದು ವಾಹನ ರಿಪೇರಿಯಾಗಿದೆ. ಉಳಿದ ವಾಹನಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಕಾರಣ ಕೆಟ್ಟು ನಿಲ್ಲುವ ಪರಿಸ್ಥಿತಿ ಬಂದೊದಗಿದೆ. ಗುಂಡ್ಲುಪೇಟೆ ತಾಲ್ಲೂಕು ಕೇರಳ ಹಾಗೂ ತಮಿಳುನಾಡು ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ್ದು, ಅಪಘಾತ ಪ್ರಕರಣಗಳು ಹೆಚ್ಚಿನ ರೀತಿಯಲ್ಲಿ ಸಂಭವಿಸುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಆಂಬುಲೆನ್ಸ್ ಸಿಗದೆ ಪರದಾಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳು ಹಾಗೂ ಶಾಸಕ ಎಚ್.ಎಂ.ಗಣೇಶಪ್ರಸಾದ್ ಕೂಡಲೇ ಕ್ರಮವಹಿಸಿ ಹೆಚ್ಚುವರಿ ಆಂಬುಲೆನ್ಸ್ ವಾಹನ ವ್ಯವಸ್ಥೆ ಕಲ್ಪಿಸುವಂತೆ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ</strong>: ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದಿದ್ದ ಆಂಬುಲೆನ್ಸ್ ಕೆಟ್ಟು ನಿಂತ ಘಟನೆ ಬಂಡೀಪುರ ಕಾಡಂಚಿನ ಕುಂದಕೆರೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಇದರಿಂದ ಚಿಕಿತ್ಸೆಗೆ ತೆರಳಬೇಕಿದ್ದ ರೋಗಿಯೊಬ್ಬರು ಪರದಾಡುವಂತಾಯಿತು.</p>.<p>ತಾಲ್ಲೂಕಿನ ಕುಂದಕೆರೆ ಗ್ರಾಮದ ಈರಯ್ಯ (50) ಎಂಬ ವ್ಯಕ್ತಿಗೆ ತೀವ್ರ ಜ್ವರ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಗಂಭೀರ ಪರಿಸ್ಥಿತಿ ಅರಿತ ಸಂಬಂಧಿಕರು 108 ಆಂಬುಲೆನ್ಸ್ಗೆ ದೂರವಾಣಿ ಕರೆ ಮಾಡಿದ್ದಾರೆ. ಆಗ ಬಂದ ಆಂಬುಲೆನ್ಸ್ ಅನತಿ ದೂರ ಸಾಗುವ ಮುನ್ನವೇ ಕೆಟ್ಟು ನಿಂತಿತು. ಚಾಲಕ ಎಷ್ಟೇ ಪ್ರಯತ್ನಪಟ್ಟರು ಚಾಲು ಆಗದ ಪರಿಣಾಮ ರೋಗಿಯನ್ನು ಖಾಸಗಿ ವಾಹನದ ಮೂಲಕ ಕರೆ ತಂದು ಚಾಮರಾಜನಗರದ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು.</p>.<p>ಚಕ್ರಗಳು ಕೂಡ ಪಂಕ್ಚರ್: ‘ಆಂಬುಲೆನ್ಸ್ ಕೆಟ್ಟು ನಿಲ್ಲುವ ಜೊತೆಗೆ ಚಕ್ರಗಳು ಕೂಡ ಸವೆದು ಪಂಕ್ಚರ್ ಆಗಿವೆ. ತುರ್ತು ವಾಹನಗಳು ಹೋಗುವ ವೇಗಕ್ಕೆ ಟೈರ್ ಸ್ಫೋಟಗೊಂಡರೇ ಅಪಾಯಕ್ಕೆ ಒಳಗಾಗುವವರು ಬಡಜನರು. ಆದ್ದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ರೀತಿ ನಿರ್ಲಕ್ಷ್ಯವನ್ನು ಬಿಡಬೇಕು’ ಎಂದು ರೈತ ಮುಖಂಡ ಕುಂದಕೆರೆ ಸಂಪತ್ತು ಆಕ್ರೋಶ ಹೊರ ಹಾಕಿದರು.</p>.<p>ಸ್ಥಳೀಯರ ಆಕ್ರೋಶ: ಕುಂದಕೆರೆ ಬಂಡೀಪುರದ ಕಾಡಂಚಿನ ಗ್ರಾಮವಾಗಿದ್ದು, ತುರ್ತು ಸಂದರ್ಭದಲ್ಲಿ 180 ಆಂಬುಲೆನ್ಸ್ ಅವಲಂಬಿಸಿದ್ದೇವೆ. ಆದರೆ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಂಬುಲೆನ್ಸ್ ವಾಹನವೇ ಕೆಟ್ಟು ನಿಂತಿರುವುದು ದುರದೃಷ್ಟಕರ. ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ವಾಹನಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ದುಸ್ಥಿತಿಯಲ್ಲಿದೆ. ಹೀಗಿದ್ದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಬಾರದ ಆಂಬುಲೆನ್ಸ್ ಏಕೆ ಓಡಾಟ ನಡೆಸುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಹೆಚ್ಚುವರಿ ಅಂಬ್ಯುಲೆನ್ಸ್ ಸೇವೆಗೆ ಒತ್ತಾಯ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು 108 ಆಂಬುಲೆನ್ಸ್ ಸೇರಿದಂತೆ 6 ವಾಹನಗಳಿದ್ದು, ಅದರಲ್ಲಿ ಒಂದು ವಾಹನ ರಿಪೇರಿಯಾಗಿದೆ. ಉಳಿದ ವಾಹನಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಕಾರಣ ಕೆಟ್ಟು ನಿಲ್ಲುವ ಪರಿಸ್ಥಿತಿ ಬಂದೊದಗಿದೆ. ಗುಂಡ್ಲುಪೇಟೆ ತಾಲ್ಲೂಕು ಕೇರಳ ಹಾಗೂ ತಮಿಳುನಾಡು ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ್ದು, ಅಪಘಾತ ಪ್ರಕರಣಗಳು ಹೆಚ್ಚಿನ ರೀತಿಯಲ್ಲಿ ಸಂಭವಿಸುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಆಂಬುಲೆನ್ಸ್ ಸಿಗದೆ ಪರದಾಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳು ಹಾಗೂ ಶಾಸಕ ಎಚ್.ಎಂ.ಗಣೇಶಪ್ರಸಾದ್ ಕೂಡಲೇ ಕ್ರಮವಹಿಸಿ ಹೆಚ್ಚುವರಿ ಆಂಬುಲೆನ್ಸ್ ವಾಹನ ವ್ಯವಸ್ಥೆ ಕಲ್ಪಿಸುವಂತೆ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>