ಒಂದು ತೊಟ್ಟು ನೀರು ಕೊಡುವುದಿಲ್ಲ
‘ತಮಿಳುನಾಡಿಗೆ ಕದ್ದು ಮುಚ್ಚಿ ಕಾವೇರಿ ನೀರು ಬಿಡಲಾಗುತ್ತಿದೆ’ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ‘ಇದೆಲ್ಲ ಸುಳ್ಳು. ತಮಿಳುನಾಡಿಗೆ ಒಂದು ತೊಟ್ಟು ನೀರು ಕೊಡುವುದಿಲ್ಲ. ನಮಗೇ ನೀರು ಇಲ್ಲ. ಅವರಿಗೆ ಹೇಗೆ ಕೊಡುವುದು. ತಮಿಳುನಾಡಿನವರೂ ನೀರು ಕೇಳಿಲ್ಲ. ನೀರು ಕೊಡುವ ಪ್ರಶ್ನೆಯೇ ಇಲ್ಲ. ತಮಿಳುನಾಡಿನವರು ಕೇಳಿದರೂ ಕೊಡುವುದಿಲ್ಲ ಕೇಂದ್ರದವರು ಹೇಳಿದರೂ ಕೊಡುವುದಿಲ್ಲ’ ಎಂದರು.