<p><strong>ಯಳಂದೂರು</strong>: ತಾಲ್ಲೂಕಿನ ಗುಂಬಳ್ಳಿಯಲ್ಲಿ ಬುಧವಾರ ಹಾಗೂ ಗುರುವಾರ ಕಲುಷಿತ ನೀರು ಸೇವಿಸಿ ಇಬ್ಬರು ಬಾಲಕರು ಸೇರಿ 9 ಜನ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.</p>.<p>ಗ್ರಾಮದ ಬಡಾವಣೆಯೊಂದರ ತೊಂಬೆಯಿಂದ ಪೂರೈಕೆಯಾದ ನೀರಿನಲ್ಲಿ ಹಾವು ಕೊಳೆತು, ನೀರು ಕಲುಷಿತಗೊಂಡಿತ್ತು ಎನ್ನಲಾಗಿದೆ. ಈ ವಿಷಯವನ್ನು ಪಂಚಾಯಿತಿ ಮುಚ್ಚಿಟ್ಟು, ನೀರು ಪೂರೈಸಿದ ಪರಿಣಾಮ ಅಸ್ವಸ್ಥಗೊಳ್ಳುವಂತಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮಸ್ಥರು ತಿಳಿಸಿದರು.</p>.<p>ಬುಧವಾರ ಇಬ್ಬರು ಇದೇ ನೀರು ಸೇವಿಸಿ ವಾಂತಿ ಮಾಡಿಕೊಂಡಿದ್ದರು. ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗುರುವಾರ ಮತ್ತೆ ವಾಂತಿ, ಬೇದಿಯಾಗಿ ಎರಡನೆ ಬಾರಿಗೆ ಚಿಕಿತ್ಸೆ ಪಡೆದರು.</p>.<p>ಸತೀಶ್, ಪುಟ್ಟತಾಯಮ್ಮ, ಪರಶಿವ, ಶರತ್, ಕುಮಾರ್, ಗೀತಾ, ಮಹೇಶ್, ನಿಖಿಲ್ ಮತ್ತು ಶಾರದ ಅಸ್ವಸ್ಥಗೊಂಡವರು. </p>.<p>‘ಇವರಲ್ಲಿ ನಿಖಿಲ್, ಶರತ್ ತಾಲ್ಲೂಕು ಆಸ್ಪತ್ರೆಯಲ್ಲಿ, ಸತೀಶ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 5 ಮಂದಿ ಗುಣಮುಖರಾಗಿದ್ದಾರೆ. ಎಲ್ಲರೂ ಆರೋಗ್ಯದಿಂದ ಇದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಾ.ನಾಗೇಂದ್ರಪ್ರಸಾದ್ ತಿಳಿಸಿದರು.</p>.<p>ತಹಶೀಲ್ದಾರ್ ಭೇಟಿ: ‘ಕುಡಿಯುವ ನೀರು ಪೂರೈಕೆಯಾಗುವ ಮೂಲಗಳನ್ನು ಪರಿಶೀಲಿಸಿ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿ ನೌಕರರಿಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಹೇಳೀದರು. ರಾಜಸ್ವ ನಿರೀಕ್ಷಕ ಯದುಗಿರಿ.ಎಂ.ಎಸ್. ಮತ್ತು ಗ್ರಾಮಲೆಕ್ಕಿಗ ಶರತ್ ಹಾಗೂ ಗ್ರಾಮಸ್ಥರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು</strong>: ತಾಲ್ಲೂಕಿನ ಗುಂಬಳ್ಳಿಯಲ್ಲಿ ಬುಧವಾರ ಹಾಗೂ ಗುರುವಾರ ಕಲುಷಿತ ನೀರು ಸೇವಿಸಿ ಇಬ್ಬರು ಬಾಲಕರು ಸೇರಿ 9 ಜನ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.</p>.<p>ಗ್ರಾಮದ ಬಡಾವಣೆಯೊಂದರ ತೊಂಬೆಯಿಂದ ಪೂರೈಕೆಯಾದ ನೀರಿನಲ್ಲಿ ಹಾವು ಕೊಳೆತು, ನೀರು ಕಲುಷಿತಗೊಂಡಿತ್ತು ಎನ್ನಲಾಗಿದೆ. ಈ ವಿಷಯವನ್ನು ಪಂಚಾಯಿತಿ ಮುಚ್ಚಿಟ್ಟು, ನೀರು ಪೂರೈಸಿದ ಪರಿಣಾಮ ಅಸ್ವಸ್ಥಗೊಳ್ಳುವಂತಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮಸ್ಥರು ತಿಳಿಸಿದರು.</p>.<p>ಬುಧವಾರ ಇಬ್ಬರು ಇದೇ ನೀರು ಸೇವಿಸಿ ವಾಂತಿ ಮಾಡಿಕೊಂಡಿದ್ದರು. ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗುರುವಾರ ಮತ್ತೆ ವಾಂತಿ, ಬೇದಿಯಾಗಿ ಎರಡನೆ ಬಾರಿಗೆ ಚಿಕಿತ್ಸೆ ಪಡೆದರು.</p>.<p>ಸತೀಶ್, ಪುಟ್ಟತಾಯಮ್ಮ, ಪರಶಿವ, ಶರತ್, ಕುಮಾರ್, ಗೀತಾ, ಮಹೇಶ್, ನಿಖಿಲ್ ಮತ್ತು ಶಾರದ ಅಸ್ವಸ್ಥಗೊಂಡವರು. </p>.<p>‘ಇವರಲ್ಲಿ ನಿಖಿಲ್, ಶರತ್ ತಾಲ್ಲೂಕು ಆಸ್ಪತ್ರೆಯಲ್ಲಿ, ಸತೀಶ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 5 ಮಂದಿ ಗುಣಮುಖರಾಗಿದ್ದಾರೆ. ಎಲ್ಲರೂ ಆರೋಗ್ಯದಿಂದ ಇದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಾ.ನಾಗೇಂದ್ರಪ್ರಸಾದ್ ತಿಳಿಸಿದರು.</p>.<p>ತಹಶೀಲ್ದಾರ್ ಭೇಟಿ: ‘ಕುಡಿಯುವ ನೀರು ಪೂರೈಕೆಯಾಗುವ ಮೂಲಗಳನ್ನು ಪರಿಶೀಲಿಸಿ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿ ನೌಕರರಿಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಹೇಳೀದರು. ರಾಜಸ್ವ ನಿರೀಕ್ಷಕ ಯದುಗಿರಿ.ಎಂ.ಎಸ್. ಮತ್ತು ಗ್ರಾಮಲೆಕ್ಕಿಗ ಶರತ್ ಹಾಗೂ ಗ್ರಾಮಸ್ಥರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>