ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ ‘ಶಾಲೆಯಲ್ಲಿ ಮಕ್ಕಳಿಗೆ ಓದು ಬರಹ ಗಣಿತ ಕಲಿಸುವಿಕೆ ಬಹಳ ಮುಖ್ಯ. ಈ ಕಲ್ಪನೆಗಳನ್ನು ಮಕ್ಕಳಲ್ಲಿ ಬಿತ್ತುವ ನಿಟ್ಟಿನಲ್ಲಿ ಶಿಕ್ಷಕರು ಮುಂದಾಗಬೇಕು’ ಎಂದರು. ‘ಮೊದಲು ಮಕ್ಕಳ ಮನಸ್ಸನ್ನು ಗೆದ್ದು ಆ ನಂತರ ಕಲಿಕೆಗೆ ಪ್ರಯೋಗ ಮಾಡಬೇಕು. ಶಿಕ್ಷಕರ ಸಮಸ್ಯೆ ಶಾಲಾ ಕೊಠಡಿಗಳ ಸಮಸ್ಯೆ ಮೂಲ ಸೌಕರ್ಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.