<p><strong>ಚಾಮರಾಜನಗರ</strong>: ಕರ್ನಾಟಕ ಸುಗಮ ಪರಿಷತ್ ಜಿಲ್ಲಾ ಘಟಕವನ್ನು ಇನ್ನಷ್ಟು ಬಲಪಡಿಸುವುದು ಮತ್ತು ಸದಸ್ಯರನ್ನು ಸೇರ್ಪಡೆಗೊಳಿಸಲು ಅಭಿಯಾನ ನಡೆಸಲು ಪರಿಷತ್ನ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ. </p>.<p>ಇತ್ತೀಚೆಗೆ ನಗರದ ರೋಟರಿ ಭವನದಲ್ಲಿ ಸಭೆ ಸೇರಿದ್ದ ಪದಾಧಿಕಾರಿಗಳು ಹಾಗೂ ಸದಸ್ಯರು ಪರಿಷತ್ತಿನ ಪುನರುಜ್ಜೀವನಗೊಳಿಸುವ ಸಂಬಂಧ ಚರ್ಚಿಸಿದ್ದಾರೆ. ಜಿಲ್ಲೆಯಲ್ಲಿ ಪರಿಷತ್ತನ್ನು ಸಕ್ರಿಯ ಗೊಳಿಸುವ ನಿಟ್ಟಿನಲ್ಲಿ ಹಲವರು ಸಲಹೆಗಳನ್ನು ನೀಡಿದ್ದಾರೆ. </p>.<p>ಪರಿಷತ್ತಿನ ಮಾಜಿ ಅಧ್ಯಕ್ಷ ಅರುಣ್ಕುಮಾರ್ ಮಾತನಾಡಿ, ‘ಕೋವಿಡ್ಗೂ ಮುನ್ನ ಪರಿಷತ್ತಿನ ಅಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ. ಹಣಕಾಸಿನ ಕೊರತೆ, ಸಂಘಟನೆ ವೈಫಲ್ಯದಿಂದಾಗಿಯೂ ಚಟುವಟಿಕೆಗಳು ನಿಂತಿವೆ’ ಎಂದರು. </p>.<p>ಸಾಹಿತಿ ಸೋಮಶೇಖರ ಬಿಸಲವಾಡಿ ಮಾತನಾಡಿ, ‘ಪರಿಷತ್ ಅನ್ನು ಸಂಘಟನಾತ್ಮಕವಾಗಿ ಬೆಳೆಸಬೇಕಾಗಿದೆ. ಇದಕ್ಕಾಗಿ ಕಾರ್ಯಕಾರಿ ಸಮಿತಿ ರಚನೆಯಾಗಬೇಕು, ನಾಯಕತ್ವ ಬೆಳೆಸುವ ಮನಃಸ್ಥಿತಿಯುಳ್ಳವರು ಪರಿಷತ್ಗೆ ಅಗತ್ಯವಿದೆ’ ಎಂದು ಸಲಹೆ ನೀಡಿದರು. </p>.<p>ಜಿಲ್ಲಾ ಗೌರವಾಧ್ಯಕ್ಷ ಗಣೇಶ್ ದೀಕ್ಷಿತ್ ಮಾತನಾಡಿ, ‘ಚಾಮರಾಜನಗರದಲ್ಲಿ ಎಲ್ಲ ಬಗೆಯ ಕಲೆಗಳನ್ನು ಅಭಿನಯಿಸುವ ಕಲಾವಿದರಿದ್ದಾರೆ. ಅವರ ಕಲೆಗಳ ಪ್ರದರ್ಶನಕ್ಕೆ ಜಿಲ್ಲೆಯಲ್ಲಿ ಸುಗಮ ಪರಿಷತ್ ಪುನಶ್ಚೇತನಗೊಳಿಸಬೇಕಿದೆ. ಅದನ್ನು ಮುನ್ನಡೆಸಲು ಹೆಚ್ಚಿನ ಸದಸ್ಯರ ನೋಂದಾಯಿಸಬೇಕಿದೆ’ ಎಂದರು. </p>.<p>ಪರಿಷತ್ ಜಿಲ್ಲಾಧ್ಯಕ್ಷ ಬಸವರಾಜು ಮಾತನಾಡಿ, ‘ಪರಿಷತ್ ಪುನಶ್ಚೇತನಕ್ಕೆ ಅಧಿಕೃತವಾಗಿ ಸದಸ್ಯತ್ವ ನೋಂದಣಿ ಕಾರ್ಯ ನಡೆಯಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು. </p>.<p>ಕಾರ್ಯದರ್ಶಿ ಎನ್.ನಟರಾಜು, ಖಜಾಂಚಿ ಎಸ್.ಪಿ.ಮನೋಜ್, ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಮಾದಾಪುರ ರವಿಕುಮಾರ್, ಚೇತನಕಲಾವಾಹಿನಿ ಅಧ್ಯಕ್ಷ ರಾಜಪ್ಪ, ಕೆಂಪರಾಜು, ವೆಂಕಟೇಶ್, ದೊರೆಸ್ವಾಮಿ, ನಂಜರಾಜು ಇತರರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಕರ್ನಾಟಕ ಸುಗಮ ಪರಿಷತ್ ಜಿಲ್ಲಾ ಘಟಕವನ್ನು ಇನ್ನಷ್ಟು ಬಲಪಡಿಸುವುದು ಮತ್ತು ಸದಸ್ಯರನ್ನು ಸೇರ್ಪಡೆಗೊಳಿಸಲು ಅಭಿಯಾನ ನಡೆಸಲು ಪರಿಷತ್ನ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ. </p>.<p>ಇತ್ತೀಚೆಗೆ ನಗರದ ರೋಟರಿ ಭವನದಲ್ಲಿ ಸಭೆ ಸೇರಿದ್ದ ಪದಾಧಿಕಾರಿಗಳು ಹಾಗೂ ಸದಸ್ಯರು ಪರಿಷತ್ತಿನ ಪುನರುಜ್ಜೀವನಗೊಳಿಸುವ ಸಂಬಂಧ ಚರ್ಚಿಸಿದ್ದಾರೆ. ಜಿಲ್ಲೆಯಲ್ಲಿ ಪರಿಷತ್ತನ್ನು ಸಕ್ರಿಯ ಗೊಳಿಸುವ ನಿಟ್ಟಿನಲ್ಲಿ ಹಲವರು ಸಲಹೆಗಳನ್ನು ನೀಡಿದ್ದಾರೆ. </p>.<p>ಪರಿಷತ್ತಿನ ಮಾಜಿ ಅಧ್ಯಕ್ಷ ಅರುಣ್ಕುಮಾರ್ ಮಾತನಾಡಿ, ‘ಕೋವಿಡ್ಗೂ ಮುನ್ನ ಪರಿಷತ್ತಿನ ಅಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ. ಹಣಕಾಸಿನ ಕೊರತೆ, ಸಂಘಟನೆ ವೈಫಲ್ಯದಿಂದಾಗಿಯೂ ಚಟುವಟಿಕೆಗಳು ನಿಂತಿವೆ’ ಎಂದರು. </p>.<p>ಸಾಹಿತಿ ಸೋಮಶೇಖರ ಬಿಸಲವಾಡಿ ಮಾತನಾಡಿ, ‘ಪರಿಷತ್ ಅನ್ನು ಸಂಘಟನಾತ್ಮಕವಾಗಿ ಬೆಳೆಸಬೇಕಾಗಿದೆ. ಇದಕ್ಕಾಗಿ ಕಾರ್ಯಕಾರಿ ಸಮಿತಿ ರಚನೆಯಾಗಬೇಕು, ನಾಯಕತ್ವ ಬೆಳೆಸುವ ಮನಃಸ್ಥಿತಿಯುಳ್ಳವರು ಪರಿಷತ್ಗೆ ಅಗತ್ಯವಿದೆ’ ಎಂದು ಸಲಹೆ ನೀಡಿದರು. </p>.<p>ಜಿಲ್ಲಾ ಗೌರವಾಧ್ಯಕ್ಷ ಗಣೇಶ್ ದೀಕ್ಷಿತ್ ಮಾತನಾಡಿ, ‘ಚಾಮರಾಜನಗರದಲ್ಲಿ ಎಲ್ಲ ಬಗೆಯ ಕಲೆಗಳನ್ನು ಅಭಿನಯಿಸುವ ಕಲಾವಿದರಿದ್ದಾರೆ. ಅವರ ಕಲೆಗಳ ಪ್ರದರ್ಶನಕ್ಕೆ ಜಿಲ್ಲೆಯಲ್ಲಿ ಸುಗಮ ಪರಿಷತ್ ಪುನಶ್ಚೇತನಗೊಳಿಸಬೇಕಿದೆ. ಅದನ್ನು ಮುನ್ನಡೆಸಲು ಹೆಚ್ಚಿನ ಸದಸ್ಯರ ನೋಂದಾಯಿಸಬೇಕಿದೆ’ ಎಂದರು. </p>.<p>ಪರಿಷತ್ ಜಿಲ್ಲಾಧ್ಯಕ್ಷ ಬಸವರಾಜು ಮಾತನಾಡಿ, ‘ಪರಿಷತ್ ಪುನಶ್ಚೇತನಕ್ಕೆ ಅಧಿಕೃತವಾಗಿ ಸದಸ್ಯತ್ವ ನೋಂದಣಿ ಕಾರ್ಯ ನಡೆಯಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು. </p>.<p>ಕಾರ್ಯದರ್ಶಿ ಎನ್.ನಟರಾಜು, ಖಜಾಂಚಿ ಎಸ್.ಪಿ.ಮನೋಜ್, ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಮಾದಾಪುರ ರವಿಕುಮಾರ್, ಚೇತನಕಲಾವಾಹಿನಿ ಅಧ್ಯಕ್ಷ ರಾಜಪ್ಪ, ಕೆಂಪರಾಜು, ವೆಂಕಟೇಶ್, ದೊರೆಸ್ವಾಮಿ, ನಂಜರಾಜು ಇತರರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>