‘ಈ ವರ್ಷ ಹೆಚ್ಚು ಅರ್ಜಿ ಸಲ್ಲಿಕೆ’
ಗಣಿಗಾರಿಕೆಗೆ ಸಂಬಂಧಿಸಿದಂತೆ ನಿರಾಕ್ಷೇಪಣೆ ಕೋರಿ ಈ ವರ್ಷ ನಮಗೆ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗುತ್ತಿವೆ. ಇದು ಅರಣ್ಯವೊ ಇಲ್ಲವೇ ಎನ್ನುವ ಬಗ್ಗೆ ದೃಢೀಕರಿಸುತ್ತೇವೆ ಎಂದು ಜಿಲ್ಲಾ ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ಗಣಿಗಾರಿಕೆ ನಡೆಸುವವರು ನಮಗೆ ಅರ್ಜಿಗಳನ್ನು ಸಲ್ಲಿಸುವರು. ಈ ಬಗ್ಗೆ ಆರ್ಎಫ್ಒ ಡಿಆರ್ಎಫ್ಒ ಅವರಿಂದ ವರದಿ ಪಡೆಯುತ್ತೇವೆ. ಗಣಿಗಾರಿಕೆಗೆ ಕೋರಿರುವ ಪ್ರದೇಶದಲ್ಲಿ ಗಿಡ ಮರಗಳು ಇವೆಯೇ ಪ್ರಾಣಿಗಳ ವಾಸಸ್ಥಾನವೇ ಎನ್ನುವ ಮಾಹಿತಿ ಪಡೆಯುತ್ತೇವೆ. ಈ ಹಿಂದೆ ಒಮ್ಮೆ 150 ಅರ್ಜಿಗಳನ್ನು ತಿರಸ್ಕರಿಸಿದ್ದೆವು ಎಂದು ತಿಳಿಸಿದರು.