<p><strong>ಚಿಕ್ಕಬಳ್ಳಾಪುರ:</strong> ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಕೆರೆ ಕಟ್ಟೆಗಳು ಕೋಡಿ ಬಿದ್ದಿವೆ. ಭೂ ಕುಸಿತಗಳಾಗಿವೆ. ಜಲಾಶಯಗಳು ಭರ್ತಿಯಾಗುತ್ತಿವೆ. ಮಳೆಯ ಕಾರಣದಿಂದ ಸಾವು ನೋವುಗಳು ಸಂಭವಿಸಿವೆ. ಉತ್ತಮ ಮಳೆ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಹೀಗೆ ರಾಜ್ಯದ ಬಹಳಷ್ಟು ಜಿಲ್ಲೆಗಳು ಉತ್ತಮ ಮಳೆಯಿಂದ ತೊಯ್ಯುತ್ತಿವೆ. </p>.<p>ಆದರೆ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಂತರ್ಜಲ ಮಟ್ಟ ಕುಸಿದಿದೆ. ಕಳೆದ ಮೂರ್ನಾಲ್ಕು ವರ್ಷಗಳ ಮಳೆ ಮತ್ತು ಅಂತರ್ಜಲ ಮಟ್ಟದ ಅಂಕಿ ಅಂಶಗಳು ಗಮನಿಸಿದರೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಸುಸ್ಥಿರ ಬದುಕಿಗೆ ನೆರವಾಗಬಲ್ಲ ಸ್ಥಿರ ಅಂರ್ತಜಲ ಮಟ್ಟ ಇಲ್ಲ ಎನ್ನುವುದು ಸಾಬೀತಾಗುತ್ತಿದೆ. </p>.<p>ಚಿಕ್ಕಬಳ್ಳಾಪುರ ಜಿಲ್ಲೆಗೆ ಯಾವುದೇ ನದಿ, ನಾಲೆಗಳ ಮೂಲಗಳಿಂದ ನೀರು ಹರಿದು ಬರುತ್ತಿಲ್ಲ. ಕೆರೆ, ಕಟ್ಟೆಗಳೇ ನೀರಿಗೆ ಮತ್ತು ಅಂತರ್ಜಲ ಅಭಿವೃದ್ಧಿಗೆ ಜೀವಾಳ. ಮಳೆಯೇ ಆಧಾರ.</p>.<p>ಭೂಜಲ ಇಲಾಖೆಯ ಅಂಕಿ ಅಂಶಗಳು ಜಿಲ್ಲೆಯಲ್ಲಿ ಈ ವರ್ಷ ಅಂತರ್ಜಲ ಮಟ್ಟ ಕುಸಿದಿರುವುದನ್ನು ಸಾರುತ್ತಿವೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಬಾರದಿದ್ದರೆ ಅಂತರ್ಜಲ ಮತ್ತಷ್ಟು ಕುಸಿಯುವ ಆತಂಕವೂ ಜಿಲ್ಲೆಯ ರೈತರಲ್ಲಿದೆ. ಎರಡು ವರ್ಷಗಳ ಹಿಂದೆ ಅಂತರ್ಜಲ ಮಟ್ಟ ಏರಿಕೆ ಕಂಡಿದ್ದ ಜಿಲ್ಲೆಯಲ್ಲಿ ಈಗ ಕುಸಿತ ಆರಂಭವಾಗಿದೆ.</p>.<p>2023ರ ಜೂನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 21.95 ಮೀಟರ್ಗಳಲ್ಲಿ ಇತ್ತು. 2024ರ ಜೂನ್ ಅವಧಿಯಲ್ಲಿ 42.17 ಮೀಟರ್ ಇದೆ. ಸರಾಸರಿ 20.21 ಮೀಟರ್ ಅಂತರ್ಜಲ ಮಟ್ಟ ಕುಸಿದಿದೆ.</p>.<p>ಜಿಲ್ಲೆಯಲ್ಲಿ 2020ರಿಂದ 22ರ ಅವಧಿಯಲ್ಲಿ ದಾಖಲೆಯ ಮಳೆ ಸುರಿಯಿತು. ರಾಜ್ಯದಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಮಳೆ ಸುರಿದ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ಆದರೆ 2023ನೇ ಸಾಲಿನಲ್ಲಿ ತೀವ್ರ ಮಳೆ ಕೊರತೆ ಆಯಿತು. ಜಿಲ್ಲೆಯ ಆರೂ ತಾಲ್ಲೂಕುಗಳು ಸಹ ತೀವ್ರ ಬರದ ಪಟ್ಟಿಗೆ ಸೇರಿದವು. </p>.<p>ಹೀಗೆ ಮಳೆ ಕೊರತೆಯ ಕಾರಣ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದ ಕುಸಿಯಿತು. ಜಿಲ್ಲಾ ಭೂಜಲ ಇಲಾಖೆಯ ಅಧ್ಯಯನಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಏರಿಕೆ ಕಂಡಿದ್ದ ಅಂತರ್ಜಲ ಮಟ್ಟ 2023ರಲ್ಲಿ ಕುಸಿದಿದೆ. 2023ಕ್ಕೆ ಹೋಲಿಸಿದರೆ 2024ರ ಜೂನ್ ವೇಳೆ ಈ ಕುಸಿತ ಮತ್ತಷ್ಟು ಹೆಚ್ಚಿದೆ.</p>.<p>ಜಿಲ್ಲೆಯ ಭೂಜಲ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 163 ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳು ಇವೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳು ಇವೆ. ಈ ಕೊಳವೆ ಬಾವಿಗಳಲ್ಲಿ ಪ್ರತಿ ತಿಂಗಳು ಜಲಮಟ್ಟವನ್ನು ಮಾಪನ ಮಾಡುತ್ತದೆ. ಈ ಹಿಂದೆ 51 ನಿರೀಕ್ಷಣಾ ಕೊಳವೆ ಬಾವಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿತ್ತು. ಈಗ 163 ಕೊಳವೆ ಬಾವಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಆಯಾ ವರ್ಷದ ಸರಾಸರಿಯ ಮಳೆ ಪ್ರಮಾಣ ಪರಿಗಣಿಸಿ ಅಂತರ್ಜಲ ಮಟ್ಟ ನಿರ್ಧರಿಸಲಾಗುತ್ತದೆ.</p>.<p>ಈ ಕೊಳವೆ ಬಾವಿಗಳಲ್ಲಿನ ಅಂತರ್ಜಲ ಮಟ್ಟವನ್ನು ಆಧರಿಸಿ ಜಿಲ್ಲೆಯಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಿದೆಯಾ? ಕುಸಿದಿದೆಯಾ? ಎನ್ನುವ ಲೆಕ್ಕಾಚಾರ ಮಾಡಲಾಗುತ್ತದೆ. ಇದು ಜಿಲ್ಲೆಯ ಅಂತರ್ಜಲ ಮಟ್ಟಕ್ಕೆ ಕೈಗನ್ನಡಿಯಾಗಿದೆ. </p>.<p>ಕಳೆದ ಮೂರು ದಶಕಗಳಲ್ಲಿಯೇ ಸುರಿಯದಷ್ಟು ಮಳೆ 2021 ಮತ್ತು 22ರಲ್ಲಿ ಜಿಲ್ಲೆಯಲ್ಲಿ ಸುರಿಯಿತು. ಜಲಾಶಯಗಳು, ಕೆರೆ, ಕಟ್ಟೆಗಳಲ್ಲಿ ನೀರು ತುಂಬಿ ಕೋಡಿ ಹರಿದವು. ಈ ಪರಿಣಾಮ ಬರದ ನಾಡು ಎನಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿತ್ತು. ಬತ್ತಿದ ಕೊಳವೆ ಬಾವಿಗಳಲ್ಲಿ ನೀರು ದೊರೆಯುತ್ತಿತ್ತು. ಹೀಗೆ ಸಮೃದ್ಧವಾಗಿದ್ದ ಅಂತರ್ಜಲ ಮಳೆ ಕೊರತೆಯ ಕಾರಣ ಕುಸಿಯುತ್ತಿದೆ.</p>.<p>ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 736 ಮಿ.ಮೀ ಇದೆ. ಈ ವರ್ಷ ಜಲವೈಭವ ಜಿಲ್ಲೆಯಲ್ಲಿ ಇಲ್ಲ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಕೆರೆ ಕಟ್ಟೆಗಳು ಕೋಡಿ ಬಿದ್ದಿವೆ. ಭೂ ಕುಸಿತಗಳಾಗಿವೆ. ಜಲಾಶಯಗಳು ಭರ್ತಿಯಾಗುತ್ತಿವೆ. ಮಳೆಯ ಕಾರಣದಿಂದ ಸಾವು ನೋವುಗಳು ಸಂಭವಿಸಿವೆ. ಉತ್ತಮ ಮಳೆ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಹೀಗೆ ರಾಜ್ಯದ ಬಹಳಷ್ಟು ಜಿಲ್ಲೆಗಳು ಉತ್ತಮ ಮಳೆಯಿಂದ ತೊಯ್ಯುತ್ತಿವೆ. </p>.<p>ಆದರೆ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಂತರ್ಜಲ ಮಟ್ಟ ಕುಸಿದಿದೆ. ಕಳೆದ ಮೂರ್ನಾಲ್ಕು ವರ್ಷಗಳ ಮಳೆ ಮತ್ತು ಅಂತರ್ಜಲ ಮಟ್ಟದ ಅಂಕಿ ಅಂಶಗಳು ಗಮನಿಸಿದರೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಸುಸ್ಥಿರ ಬದುಕಿಗೆ ನೆರವಾಗಬಲ್ಲ ಸ್ಥಿರ ಅಂರ್ತಜಲ ಮಟ್ಟ ಇಲ್ಲ ಎನ್ನುವುದು ಸಾಬೀತಾಗುತ್ತಿದೆ. </p>.<p>ಚಿಕ್ಕಬಳ್ಳಾಪುರ ಜಿಲ್ಲೆಗೆ ಯಾವುದೇ ನದಿ, ನಾಲೆಗಳ ಮೂಲಗಳಿಂದ ನೀರು ಹರಿದು ಬರುತ್ತಿಲ್ಲ. ಕೆರೆ, ಕಟ್ಟೆಗಳೇ ನೀರಿಗೆ ಮತ್ತು ಅಂತರ್ಜಲ ಅಭಿವೃದ್ಧಿಗೆ ಜೀವಾಳ. ಮಳೆಯೇ ಆಧಾರ.</p>.<p>ಭೂಜಲ ಇಲಾಖೆಯ ಅಂಕಿ ಅಂಶಗಳು ಜಿಲ್ಲೆಯಲ್ಲಿ ಈ ವರ್ಷ ಅಂತರ್ಜಲ ಮಟ್ಟ ಕುಸಿದಿರುವುದನ್ನು ಸಾರುತ್ತಿವೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಬಾರದಿದ್ದರೆ ಅಂತರ್ಜಲ ಮತ್ತಷ್ಟು ಕುಸಿಯುವ ಆತಂಕವೂ ಜಿಲ್ಲೆಯ ರೈತರಲ್ಲಿದೆ. ಎರಡು ವರ್ಷಗಳ ಹಿಂದೆ ಅಂತರ್ಜಲ ಮಟ್ಟ ಏರಿಕೆ ಕಂಡಿದ್ದ ಜಿಲ್ಲೆಯಲ್ಲಿ ಈಗ ಕುಸಿತ ಆರಂಭವಾಗಿದೆ.</p>.<p>2023ರ ಜೂನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 21.95 ಮೀಟರ್ಗಳಲ್ಲಿ ಇತ್ತು. 2024ರ ಜೂನ್ ಅವಧಿಯಲ್ಲಿ 42.17 ಮೀಟರ್ ಇದೆ. ಸರಾಸರಿ 20.21 ಮೀಟರ್ ಅಂತರ್ಜಲ ಮಟ್ಟ ಕುಸಿದಿದೆ.</p>.<p>ಜಿಲ್ಲೆಯಲ್ಲಿ 2020ರಿಂದ 22ರ ಅವಧಿಯಲ್ಲಿ ದಾಖಲೆಯ ಮಳೆ ಸುರಿಯಿತು. ರಾಜ್ಯದಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಮಳೆ ಸುರಿದ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ಆದರೆ 2023ನೇ ಸಾಲಿನಲ್ಲಿ ತೀವ್ರ ಮಳೆ ಕೊರತೆ ಆಯಿತು. ಜಿಲ್ಲೆಯ ಆರೂ ತಾಲ್ಲೂಕುಗಳು ಸಹ ತೀವ್ರ ಬರದ ಪಟ್ಟಿಗೆ ಸೇರಿದವು. </p>.<p>ಹೀಗೆ ಮಳೆ ಕೊರತೆಯ ಕಾರಣ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದ ಕುಸಿಯಿತು. ಜಿಲ್ಲಾ ಭೂಜಲ ಇಲಾಖೆಯ ಅಧ್ಯಯನಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಏರಿಕೆ ಕಂಡಿದ್ದ ಅಂತರ್ಜಲ ಮಟ್ಟ 2023ರಲ್ಲಿ ಕುಸಿದಿದೆ. 2023ಕ್ಕೆ ಹೋಲಿಸಿದರೆ 2024ರ ಜೂನ್ ವೇಳೆ ಈ ಕುಸಿತ ಮತ್ತಷ್ಟು ಹೆಚ್ಚಿದೆ.</p>.<p>ಜಿಲ್ಲೆಯ ಭೂಜಲ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 163 ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳು ಇವೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳು ಇವೆ. ಈ ಕೊಳವೆ ಬಾವಿಗಳಲ್ಲಿ ಪ್ರತಿ ತಿಂಗಳು ಜಲಮಟ್ಟವನ್ನು ಮಾಪನ ಮಾಡುತ್ತದೆ. ಈ ಹಿಂದೆ 51 ನಿರೀಕ್ಷಣಾ ಕೊಳವೆ ಬಾವಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿತ್ತು. ಈಗ 163 ಕೊಳವೆ ಬಾವಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಆಯಾ ವರ್ಷದ ಸರಾಸರಿಯ ಮಳೆ ಪ್ರಮಾಣ ಪರಿಗಣಿಸಿ ಅಂತರ್ಜಲ ಮಟ್ಟ ನಿರ್ಧರಿಸಲಾಗುತ್ತದೆ.</p>.<p>ಈ ಕೊಳವೆ ಬಾವಿಗಳಲ್ಲಿನ ಅಂತರ್ಜಲ ಮಟ್ಟವನ್ನು ಆಧರಿಸಿ ಜಿಲ್ಲೆಯಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಿದೆಯಾ? ಕುಸಿದಿದೆಯಾ? ಎನ್ನುವ ಲೆಕ್ಕಾಚಾರ ಮಾಡಲಾಗುತ್ತದೆ. ಇದು ಜಿಲ್ಲೆಯ ಅಂತರ್ಜಲ ಮಟ್ಟಕ್ಕೆ ಕೈಗನ್ನಡಿಯಾಗಿದೆ. </p>.<p>ಕಳೆದ ಮೂರು ದಶಕಗಳಲ್ಲಿಯೇ ಸುರಿಯದಷ್ಟು ಮಳೆ 2021 ಮತ್ತು 22ರಲ್ಲಿ ಜಿಲ್ಲೆಯಲ್ಲಿ ಸುರಿಯಿತು. ಜಲಾಶಯಗಳು, ಕೆರೆ, ಕಟ್ಟೆಗಳಲ್ಲಿ ನೀರು ತುಂಬಿ ಕೋಡಿ ಹರಿದವು. ಈ ಪರಿಣಾಮ ಬರದ ನಾಡು ಎನಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿತ್ತು. ಬತ್ತಿದ ಕೊಳವೆ ಬಾವಿಗಳಲ್ಲಿ ನೀರು ದೊರೆಯುತ್ತಿತ್ತು. ಹೀಗೆ ಸಮೃದ್ಧವಾಗಿದ್ದ ಅಂತರ್ಜಲ ಮಳೆ ಕೊರತೆಯ ಕಾರಣ ಕುಸಿಯುತ್ತಿದೆ.</p>.<p>ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 736 ಮಿ.ಮೀ ಇದೆ. ಈ ವರ್ಷ ಜಲವೈಭವ ಜಿಲ್ಲೆಯಲ್ಲಿ ಇಲ್ಲ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>