<p><strong>ಕಳಸ</strong>: ತಾಲ್ಲೂಕಿನಾದ್ಯಂತ ಗುರುವಾರವೂ ಮಳೆ ಮುಂದುವರಿದಿದ್ದು ಜನರು ಸತತ ಮಳೆಯಿಂದ ರೋಸಿ ಹೋಗಿದ್ದಾರೆ. ಜುಲೈ 12ರಿಂದ ಆರಂಭವಾದ ಮಳೆ ಸತತ 20 ದಿನಗಳಿಂದ ಮುಂದುವರಿದಿದೆ. ಜುಲೈ ತಿಂಗಳಲ್ಲಿ 200 ಸೆಂ.ಮೀ(80 ಇಂಚು) ಮಳೆ ದಾಖಲಾಗಿದೆ. ಕಳಸ ಮಳೆ ಮಾಪನ ಕೇಂದ್ರದ ಅಂಕಿ ಅಂಶದಂತೆ ಕಳಸ ಪಟ್ಟಣದಲ್ಲಿ 285 ಸೆಂ.ಮೀ (114 ಇಂಚು) ಮಳೆ ಆಗಿದೆ.</p>.<p>ಕಳಸ ಆಸುಪಾಸಿನ ಸಂಸೆ, ಹೊರನಾಡು, ಮರಸಣಿಗೆ, ಕುದುರೆಮುಖ ಪ್ರದೇಶದಲ್ಲಿ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಗುರುವಾರ ಬೆಳಿಗ್ಗೆ ಸೂರ್ಯನ ದರ್ಶನ ಆದಾಗ ಕೃಷಿಕರೆಲ್ಲ ನಿಟ್ಟುಸಿರು ಬಿಟ್ಟರು. ಆದರೆ, ಮಧ್ಯಾಹ್ನ ಜಡಿಮಳೆ ಸುರಿದು ಬೆಳೆಗಾರರ ಮುಖದಲ್ಲಿ ಚಿಂತೆಯ ಗೆರೆ ಮೂಡಿತು. ಮಳೆ ಹೆಚ್ಚಿದಂತೆ ತೋಟಗಾರಿಕಾ ಬೆಳೆಗಳಿಗೆ ಹಾನಿ ಹೆಚ್ಚುತ್ತಿದೆ.ಕಾಫಿ ಬೆಳೆಯು ಈಗಾಗಲೇ ನೆಲಕಚ್ಚಿದ್ದು ಅಲ್ಲಲ್ಲಿ ಕಾಳುಮೆಣಸು ಮತ್ತು ಅಡಿಕೆ ಫಸಲಿಗೂ ಕೊಳೆರೋಗ ಶುರು ಆಗುತ್ತಿದೆ ಎಂದು ಬೆಳೆಗಾರರು ನೋವಿನಿಂದ ನುಡಿದರು. ಅಡಿಕೆ, ಮೆಣಸು ಮತ್ತು ಕಾಫಿಗೆ ಔಷಧಿ ಸಿಂಪಡಿಸಲು ಮಳೆಯು ಅವಕಾಶ ನೀಡದಿರುವುದು ಇನ್ನಷ್ಟು ಹಾನಿಯ ಆತಂಕ ಹೆಚ್ಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಳಸ</strong>: ತಾಲ್ಲೂಕಿನಾದ್ಯಂತ ಗುರುವಾರವೂ ಮಳೆ ಮುಂದುವರಿದಿದ್ದು ಜನರು ಸತತ ಮಳೆಯಿಂದ ರೋಸಿ ಹೋಗಿದ್ದಾರೆ. ಜುಲೈ 12ರಿಂದ ಆರಂಭವಾದ ಮಳೆ ಸತತ 20 ದಿನಗಳಿಂದ ಮುಂದುವರಿದಿದೆ. ಜುಲೈ ತಿಂಗಳಲ್ಲಿ 200 ಸೆಂ.ಮೀ(80 ಇಂಚು) ಮಳೆ ದಾಖಲಾಗಿದೆ. ಕಳಸ ಮಳೆ ಮಾಪನ ಕೇಂದ್ರದ ಅಂಕಿ ಅಂಶದಂತೆ ಕಳಸ ಪಟ್ಟಣದಲ್ಲಿ 285 ಸೆಂ.ಮೀ (114 ಇಂಚು) ಮಳೆ ಆಗಿದೆ.</p>.<p>ಕಳಸ ಆಸುಪಾಸಿನ ಸಂಸೆ, ಹೊರನಾಡು, ಮರಸಣಿಗೆ, ಕುದುರೆಮುಖ ಪ್ರದೇಶದಲ್ಲಿ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಗುರುವಾರ ಬೆಳಿಗ್ಗೆ ಸೂರ್ಯನ ದರ್ಶನ ಆದಾಗ ಕೃಷಿಕರೆಲ್ಲ ನಿಟ್ಟುಸಿರು ಬಿಟ್ಟರು. ಆದರೆ, ಮಧ್ಯಾಹ್ನ ಜಡಿಮಳೆ ಸುರಿದು ಬೆಳೆಗಾರರ ಮುಖದಲ್ಲಿ ಚಿಂತೆಯ ಗೆರೆ ಮೂಡಿತು. ಮಳೆ ಹೆಚ್ಚಿದಂತೆ ತೋಟಗಾರಿಕಾ ಬೆಳೆಗಳಿಗೆ ಹಾನಿ ಹೆಚ್ಚುತ್ತಿದೆ.ಕಾಫಿ ಬೆಳೆಯು ಈಗಾಗಲೇ ನೆಲಕಚ್ಚಿದ್ದು ಅಲ್ಲಲ್ಲಿ ಕಾಳುಮೆಣಸು ಮತ್ತು ಅಡಿಕೆ ಫಸಲಿಗೂ ಕೊಳೆರೋಗ ಶುರು ಆಗುತ್ತಿದೆ ಎಂದು ಬೆಳೆಗಾರರು ನೋವಿನಿಂದ ನುಡಿದರು. ಅಡಿಕೆ, ಮೆಣಸು ಮತ್ತು ಕಾಫಿಗೆ ಔಷಧಿ ಸಿಂಪಡಿಸಲು ಮಳೆಯು ಅವಕಾಶ ನೀಡದಿರುವುದು ಇನ್ನಷ್ಟು ಹಾನಿಯ ಆತಂಕ ಹೆಚ್ಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>