<p><strong>ಚಿಕ್ಕಮಗಳೂರು:</strong> ಮನೆಯ ಮುಂದೆ ಪ್ರಪಾತ, ಹಿಂದೆ ಮುಗಿಲೆತ್ತರದ ಗುಡ್ಡ, ಮನೆ ಬಾಗಿಲ ತನಕ ಬಂದು ನಿಂತ ಧರೆ ಕುಸಿತ, ರಾತ್ರಿ ಮಲಗಿದರೆ ಏಳುವುದು ಖಾತ್ರಿ ಇಲ್ಲ, ಮಳೆಗಾಲದಲ್ಲಿ ನೆಮ್ಮದಿಯ ನಿದ್ರೆಯನ್ನೇ ಮಾಡದ 17 ಕುಟುಂಬ...</p>.<p>ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಡ್ಡೇತೋಟ ಗ್ರಾಮದಲ್ಲಿ ಈ ಕುಟುಂಬಗಳು ಪ್ರತಿ ವರ್ಷ ಮಳೆಗಾಲದಲ್ಲಿ ಜೀವ ಪಣಕ್ಕಿಟ್ಟು ಬದುಕುತ್ತಿವೆ. ಜಾಗ ಗುರುತಿಸಿ ನಿವೇಶನ ನೀಡುವ ಪ್ರಸ್ತಾಪ 9 ವರ್ಷಗಳ ಹಿಂದೆ ಆರಂಭವಾಗಿದ್ದರೂ ಈವರೆಗೆ ಸ್ಥಳಾಂತರ ಆಗಿಲ್ಲ.</p>.<p>ಗ್ರಾಮ ಪಂಚಾಯಿತಿಯಿಂದ ಸ್ವಲ್ಪ ದೂರದ ಎತ್ತರದ ಪ್ರದೇಶದಲ್ಲಿ ಈ ಕುಟುಂಬಗಳು ನೆಲೆಸಿವೆ. ಬಹುತೇಕ ಎಲ್ಲರೂ ಕೂಲಿ ಕೆಲಸ ಮಾಡುತ್ತಿದ್ದು, ಸಣ್ಣ ಸಣ್ಣ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಮನೆ ತಲುಪಲು ಜೋಡಿಸಿಕೊಂಡಿರುವ ಕಡಿದಾದ ಕಲ್ಲುಗಳನ್ನು ಏರಿ ಸಾಗಬೇಕು. ಮನೆಯ ಹಿಂದೆ ಮುಗಿಲೆತ್ತರದ ಕಡಿದಾದ ಬೆಟ್ಟದಿಂದ ಹರಿದು ಬರುವ ನೀರು ಮನೆಗಳ ಮುಂದೆಯೇ ಹಾದು ಹೊಗುತ್ತಿದೆ. </p>.<p>ಯಾವ ಮನೆಯ ಮುಂದೆ ಹೋದರೂ ಅಲ್ಲಲ್ಲಿ ಸಣ್ಣದಾಗಿ ಧರೆ ಕುಸಿದಿರುವುದು ಕಾಣಿಸುತ್ತದೆ. ಸೋಮವಾರ ಸುರಿದ ಮಳೆಗೆ ಮನೆಯ ಮುಂದಿದ್ದ ತೆಂಗಿನ ಮರ ಸೇರಿ ಮಣ್ಣು ರಸ್ತೆಗೇ ಜರಿದಿದ್ದು, ಧರೆ ಕುಸಿತ ಮನೆಯ ಬಾಗಿಲ ತನಕ ಬಂದಿದೆ. ಕಾಲಿಟ್ಟಲ್ಲೆಲ್ಲಾ ಮಣ್ಣು ಜರಿಯುತ್ತಿದೆ. ಇನ್ನು ಒಂದು ಅಡಿ ಮಣ್ಣು ಜರಿದರೂ ಮನೆ ಕುಸಿದು ರಸ್ತೆಗೆ ಬೀಳುವುದರಲ್ಲಿ ಅನುಮಾನ ಇಲ್ಲ.</p>.<p>‘30 ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ರಸ್ತೆಗಳು ಅಗಲವಾದ ಬಳಿಕ ಕುಸಿತ ಹೆಚ್ಚಾಗಿದೆ. ಸ್ಥಳಾಂತರದ ಬಗ್ಗೆ 9 ವರ್ಷಗಳಿಂದ ಹೆಚ್ಚಿನ ಚರ್ಚೆಯಾಗುತ್ತಿದೆ. ಮಳೆಗಾಲ ಬಂದಾಗ ಅಧಿಕಾರಿಗಳು ಹೆಚ್ಚು ಮಾತನಾಡುತ್ತಾರೆ. ತಾತ್ಕಾಲಿಕವಾಗಿ ಶಾಲೆ, ಗ್ರಾಮ ಪಂಚಾಯಿತಿ ಕಟ್ಟಡಗಳನ್ನು ತೋರಿಸುತ್ತಾರೆ. ಬಳಿಕ ಸುಮ್ಮನಾಗುತ್ತಾರೆ’ ಎಂದು ನಿವಾಸಿ ನಾರಾಯಣ ಬೇಸರ ವ್ಯಕ್ತಪಡಿಸುತ್ತಾರೆ.</p>.<p>‘ಸರ್ಕಾರಿ ಆಸ್ತಿ ಒತ್ತುವರಿ ಮಾಡಿಕೊಂಡವರಿಗೆ, ಹಣ ಉಳ್ಳವರಿಗೆ ಸಮೀಪದ ಸರ್ಕಾರಿ ಜಾಗ ಬಿಟ್ಟುಕೊಡುತ್ತಾರೆ. ಆಗಲೋ ಈಗಲೇ ಗುಡ್ಡ ಜರಿದು ಕೊಚ್ಚಿ ಹೋಗುವ ಸ್ಥಿತಿಯಲ್ಲಿರುವ ನಮ್ಮನ್ನು ದೂರದ ಊರುಗಳಿಗೆ ಹೋಗಿ ಎನ್ನುತ್ತಾರೆ. ಸುತ್ತಮುತ್ತ ತೋಟಗಳ ಮಾಲೀಕರಿಂದ ಸಾಲ ಪಡೆದುಕೊಂಡಿದ್ದೇವೆ. ಬೇರೆ ಊರಿಗೆ ಹೋದರೆ ಅಲ್ಲಿಂದ ಬಂದು ಕೆಲಸ ಮಾಡಿ ಸಾಲ ತೀರಿಸುವುದು ಹೇಗೆ? ಆದ್ದರಿಂದ ಗಟ್ಟಿ ಮನಸು ಮಾಡಿ ಇಲ್ಲೇ ವಾಸವಿದ್ದೇವೆ’ ಎಂದು ಅವರು ಹೇಳುತ್ತಾರೆ.</p>.<p>ಇನ್ನೊಂದೆಡೆ ಮನೆಯಲ್ಲೇ ಮಲಗಿದ್ದ ಅಂಗವಿಕಲ ಮಹಿಳೆ ಲೀಲಾ ಅವರು ಕಡಿದಾದ ಪ್ರದೇಶದಿಂದ ರಸ್ತೆಗೆ ಇಳಿದು ಬರಲು ಸಾಧ್ಯವೇ ಆಗದ ಸ್ಥಿತಿಯಲ್ಲಿದ್ದಾರೆ. ‘ಮಳೆಗಾಲದಲ್ಲಿ ರಾತ್ರಿ ಮಲಗಿದರೆ ನಿದ್ರೆ ಬರುವುದಿಲ್ಲ. ಸ್ವಲ್ಪ ಜೋರು ಶಬ್ದವಾದರೂ ಇಂದಿಗೆ ಬದುಕು ಮುಗಿಯಿತು ಎನ್ನಿಸುತ್ತದೆ. ಯಾವ ಸಂದರ್ಭದಲ್ಲಿ ಕೊಚ್ಚಿ ಹೋಗುತ್ತೇವೋ ಗೊತ್ತಿಲ್ಲ’ ಎಂದು ಲೀಲಾ ಗದ್ಗದಿತರಾದರು.</p>.<p>‘ಆದರೂ ಬೇರೆ ಮಾರ್ಗವಿಲ್ಲದೆ ಇಲ್ಲೇ ವಾಸ ಮಾಡಬೇಕಿದೆ. ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡುವ ಹಲವು ವರ್ಷಗಳಿಂದ ಮಾತುಗಳು ನಡೆಯುತ್ತಿದೆ. 9 ವರ್ಷಗಳಿಂದ ಚರ್ಚೆ ಹೆಚ್ಚಾಗಿದೆ. ಆದರೆ, ಈವರೆಗೆ ಸೂಕ್ತ ಜಾಗ ನೀಡಿಲ್ಲ’ ಎಂದರು.</p>.<p>‘ಐದು ಕಿಲೋ ಮೀಟರ್ ದೂರದಲ್ಲಿ ಜಾಗ ಗುರುತಿಸಿ ಸ್ಥಳಾಂತರಕ್ಕೆ ಪ್ರಯತ್ನಿಸಲಾಯಿತು. ದೂರ ಎಂಬ ಕಾರಣಕ್ಕೆ ಅವರು ಒಪ್ಪುತ್ತಿಲ್ಲ. ಗುಡ್ಡ ಕುಸಿದು ಸತ್ತರೆ ನಮಗೆ ನಾವೇ ಜವಾಬ್ದಾರರು ಎಂದು ಬರೆದುಕೊಟ್ಟಿದ್ದಾರೆ. ಆದರೆ, ಮಳೆ ಜೋರಾದ ಸಂದರ್ಭದಲ್ಲಿ ಎರಡು ಕುಟುಂಬಗಳನ್ನು ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.</p>.<p><strong>ಸಮೀಪದಲ್ಲೇ ಜಾಗ ಗುರುತು</strong> </p><p>ದೂರಕ್ಕೆ ಸ್ಥಳಾಂತರ ಆಗಲು ನಿವಾಸಿಗಳು ಒಪ್ಪದ ಕಾರಣ ಈಗ ಸಮೀಪದಲ್ಲೇ 32 ಗುಂಟೆ ಸರ್ಕಾರಿ ಜಾಗ ಗುರುತಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಉಪವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದೇ ಕಿಲೋ ಮೀಟರ್ ದೂರ ಆಗಿರುವುದರಿಂದ ನಿವಾಸಿಗಳೂ ಒಪ್ಪಿದ್ದಾರೆ ಎಂದು ಹೇಳಿದರು. ‘ರಸ್ತೆ ಬದಿಯಿದ್ದರೂ ಸದ್ಯ ಅದು ಎಸ್ಟೇಟ್ ಒಳಗೆ ಸೇರಿಕೊಂಡಿದೆ. ರಾಜಕೀಯ ಒತ್ತಡಗಳ ನಡುವೆ ಒತ್ತುವರಿ ತೆರವುಗೊಳಿಸುವುದು ಸುಲಭ ಇಲ್ಲ. ಅಧಿಕಾರಿಗಳಿಗೆ ಸವಾಲಿನ ಕೆಲಸ’ ಎಂಬುದು ಸ್ಥಳೀಯರ ಅಭಿಪ್ರಾಯ.</p>.<div><blockquote>ಗುಡ್ಡೆತೋಟ ನಿವಾಸಿಗಳ ಸ್ಥಳಾಂತರಕ್ಕೆ ಎರಡು ಜಾಗ ಗುರುತಿಸಲಾಗಿದ್ದು ಅರಣ್ಯ–ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿಸಲಾಗುತ್ತಿದೆ. ಶೀಘ್ರವೇ ಸಮಸ್ಯೆ ಇತ್ಯರ್ಥಪಡಿಸಲಾಗುವುದು.</blockquote><span class="attribution"> –ಮೀನಾ ನಾಗರಾಜ್ ಜಿಲ್ಲಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಮನೆಯ ಮುಂದೆ ಪ್ರಪಾತ, ಹಿಂದೆ ಮುಗಿಲೆತ್ತರದ ಗುಡ್ಡ, ಮನೆ ಬಾಗಿಲ ತನಕ ಬಂದು ನಿಂತ ಧರೆ ಕುಸಿತ, ರಾತ್ರಿ ಮಲಗಿದರೆ ಏಳುವುದು ಖಾತ್ರಿ ಇಲ್ಲ, ಮಳೆಗಾಲದಲ್ಲಿ ನೆಮ್ಮದಿಯ ನಿದ್ರೆಯನ್ನೇ ಮಾಡದ 17 ಕುಟುಂಬ...</p>.<p>ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಡ್ಡೇತೋಟ ಗ್ರಾಮದಲ್ಲಿ ಈ ಕುಟುಂಬಗಳು ಪ್ರತಿ ವರ್ಷ ಮಳೆಗಾಲದಲ್ಲಿ ಜೀವ ಪಣಕ್ಕಿಟ್ಟು ಬದುಕುತ್ತಿವೆ. ಜಾಗ ಗುರುತಿಸಿ ನಿವೇಶನ ನೀಡುವ ಪ್ರಸ್ತಾಪ 9 ವರ್ಷಗಳ ಹಿಂದೆ ಆರಂಭವಾಗಿದ್ದರೂ ಈವರೆಗೆ ಸ್ಥಳಾಂತರ ಆಗಿಲ್ಲ.</p>.<p>ಗ್ರಾಮ ಪಂಚಾಯಿತಿಯಿಂದ ಸ್ವಲ್ಪ ದೂರದ ಎತ್ತರದ ಪ್ರದೇಶದಲ್ಲಿ ಈ ಕುಟುಂಬಗಳು ನೆಲೆಸಿವೆ. ಬಹುತೇಕ ಎಲ್ಲರೂ ಕೂಲಿ ಕೆಲಸ ಮಾಡುತ್ತಿದ್ದು, ಸಣ್ಣ ಸಣ್ಣ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಮನೆ ತಲುಪಲು ಜೋಡಿಸಿಕೊಂಡಿರುವ ಕಡಿದಾದ ಕಲ್ಲುಗಳನ್ನು ಏರಿ ಸಾಗಬೇಕು. ಮನೆಯ ಹಿಂದೆ ಮುಗಿಲೆತ್ತರದ ಕಡಿದಾದ ಬೆಟ್ಟದಿಂದ ಹರಿದು ಬರುವ ನೀರು ಮನೆಗಳ ಮುಂದೆಯೇ ಹಾದು ಹೊಗುತ್ತಿದೆ. </p>.<p>ಯಾವ ಮನೆಯ ಮುಂದೆ ಹೋದರೂ ಅಲ್ಲಲ್ಲಿ ಸಣ್ಣದಾಗಿ ಧರೆ ಕುಸಿದಿರುವುದು ಕಾಣಿಸುತ್ತದೆ. ಸೋಮವಾರ ಸುರಿದ ಮಳೆಗೆ ಮನೆಯ ಮುಂದಿದ್ದ ತೆಂಗಿನ ಮರ ಸೇರಿ ಮಣ್ಣು ರಸ್ತೆಗೇ ಜರಿದಿದ್ದು, ಧರೆ ಕುಸಿತ ಮನೆಯ ಬಾಗಿಲ ತನಕ ಬಂದಿದೆ. ಕಾಲಿಟ್ಟಲ್ಲೆಲ್ಲಾ ಮಣ್ಣು ಜರಿಯುತ್ತಿದೆ. ಇನ್ನು ಒಂದು ಅಡಿ ಮಣ್ಣು ಜರಿದರೂ ಮನೆ ಕುಸಿದು ರಸ್ತೆಗೆ ಬೀಳುವುದರಲ್ಲಿ ಅನುಮಾನ ಇಲ್ಲ.</p>.<p>‘30 ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ರಸ್ತೆಗಳು ಅಗಲವಾದ ಬಳಿಕ ಕುಸಿತ ಹೆಚ್ಚಾಗಿದೆ. ಸ್ಥಳಾಂತರದ ಬಗ್ಗೆ 9 ವರ್ಷಗಳಿಂದ ಹೆಚ್ಚಿನ ಚರ್ಚೆಯಾಗುತ್ತಿದೆ. ಮಳೆಗಾಲ ಬಂದಾಗ ಅಧಿಕಾರಿಗಳು ಹೆಚ್ಚು ಮಾತನಾಡುತ್ತಾರೆ. ತಾತ್ಕಾಲಿಕವಾಗಿ ಶಾಲೆ, ಗ್ರಾಮ ಪಂಚಾಯಿತಿ ಕಟ್ಟಡಗಳನ್ನು ತೋರಿಸುತ್ತಾರೆ. ಬಳಿಕ ಸುಮ್ಮನಾಗುತ್ತಾರೆ’ ಎಂದು ನಿವಾಸಿ ನಾರಾಯಣ ಬೇಸರ ವ್ಯಕ್ತಪಡಿಸುತ್ತಾರೆ.</p>.<p>‘ಸರ್ಕಾರಿ ಆಸ್ತಿ ಒತ್ತುವರಿ ಮಾಡಿಕೊಂಡವರಿಗೆ, ಹಣ ಉಳ್ಳವರಿಗೆ ಸಮೀಪದ ಸರ್ಕಾರಿ ಜಾಗ ಬಿಟ್ಟುಕೊಡುತ್ತಾರೆ. ಆಗಲೋ ಈಗಲೇ ಗುಡ್ಡ ಜರಿದು ಕೊಚ್ಚಿ ಹೋಗುವ ಸ್ಥಿತಿಯಲ್ಲಿರುವ ನಮ್ಮನ್ನು ದೂರದ ಊರುಗಳಿಗೆ ಹೋಗಿ ಎನ್ನುತ್ತಾರೆ. ಸುತ್ತಮುತ್ತ ತೋಟಗಳ ಮಾಲೀಕರಿಂದ ಸಾಲ ಪಡೆದುಕೊಂಡಿದ್ದೇವೆ. ಬೇರೆ ಊರಿಗೆ ಹೋದರೆ ಅಲ್ಲಿಂದ ಬಂದು ಕೆಲಸ ಮಾಡಿ ಸಾಲ ತೀರಿಸುವುದು ಹೇಗೆ? ಆದ್ದರಿಂದ ಗಟ್ಟಿ ಮನಸು ಮಾಡಿ ಇಲ್ಲೇ ವಾಸವಿದ್ದೇವೆ’ ಎಂದು ಅವರು ಹೇಳುತ್ತಾರೆ.</p>.<p>ಇನ್ನೊಂದೆಡೆ ಮನೆಯಲ್ಲೇ ಮಲಗಿದ್ದ ಅಂಗವಿಕಲ ಮಹಿಳೆ ಲೀಲಾ ಅವರು ಕಡಿದಾದ ಪ್ರದೇಶದಿಂದ ರಸ್ತೆಗೆ ಇಳಿದು ಬರಲು ಸಾಧ್ಯವೇ ಆಗದ ಸ್ಥಿತಿಯಲ್ಲಿದ್ದಾರೆ. ‘ಮಳೆಗಾಲದಲ್ಲಿ ರಾತ್ರಿ ಮಲಗಿದರೆ ನಿದ್ರೆ ಬರುವುದಿಲ್ಲ. ಸ್ವಲ್ಪ ಜೋರು ಶಬ್ದವಾದರೂ ಇಂದಿಗೆ ಬದುಕು ಮುಗಿಯಿತು ಎನ್ನಿಸುತ್ತದೆ. ಯಾವ ಸಂದರ್ಭದಲ್ಲಿ ಕೊಚ್ಚಿ ಹೋಗುತ್ತೇವೋ ಗೊತ್ತಿಲ್ಲ’ ಎಂದು ಲೀಲಾ ಗದ್ಗದಿತರಾದರು.</p>.<p>‘ಆದರೂ ಬೇರೆ ಮಾರ್ಗವಿಲ್ಲದೆ ಇಲ್ಲೇ ವಾಸ ಮಾಡಬೇಕಿದೆ. ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡುವ ಹಲವು ವರ್ಷಗಳಿಂದ ಮಾತುಗಳು ನಡೆಯುತ್ತಿದೆ. 9 ವರ್ಷಗಳಿಂದ ಚರ್ಚೆ ಹೆಚ್ಚಾಗಿದೆ. ಆದರೆ, ಈವರೆಗೆ ಸೂಕ್ತ ಜಾಗ ನೀಡಿಲ್ಲ’ ಎಂದರು.</p>.<p>‘ಐದು ಕಿಲೋ ಮೀಟರ್ ದೂರದಲ್ಲಿ ಜಾಗ ಗುರುತಿಸಿ ಸ್ಥಳಾಂತರಕ್ಕೆ ಪ್ರಯತ್ನಿಸಲಾಯಿತು. ದೂರ ಎಂಬ ಕಾರಣಕ್ಕೆ ಅವರು ಒಪ್ಪುತ್ತಿಲ್ಲ. ಗುಡ್ಡ ಕುಸಿದು ಸತ್ತರೆ ನಮಗೆ ನಾವೇ ಜವಾಬ್ದಾರರು ಎಂದು ಬರೆದುಕೊಟ್ಟಿದ್ದಾರೆ. ಆದರೆ, ಮಳೆ ಜೋರಾದ ಸಂದರ್ಭದಲ್ಲಿ ಎರಡು ಕುಟುಂಬಗಳನ್ನು ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.</p>.<p><strong>ಸಮೀಪದಲ್ಲೇ ಜಾಗ ಗುರುತು</strong> </p><p>ದೂರಕ್ಕೆ ಸ್ಥಳಾಂತರ ಆಗಲು ನಿವಾಸಿಗಳು ಒಪ್ಪದ ಕಾರಣ ಈಗ ಸಮೀಪದಲ್ಲೇ 32 ಗುಂಟೆ ಸರ್ಕಾರಿ ಜಾಗ ಗುರುತಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಉಪವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದೇ ಕಿಲೋ ಮೀಟರ್ ದೂರ ಆಗಿರುವುದರಿಂದ ನಿವಾಸಿಗಳೂ ಒಪ್ಪಿದ್ದಾರೆ ಎಂದು ಹೇಳಿದರು. ‘ರಸ್ತೆ ಬದಿಯಿದ್ದರೂ ಸದ್ಯ ಅದು ಎಸ್ಟೇಟ್ ಒಳಗೆ ಸೇರಿಕೊಂಡಿದೆ. ರಾಜಕೀಯ ಒತ್ತಡಗಳ ನಡುವೆ ಒತ್ತುವರಿ ತೆರವುಗೊಳಿಸುವುದು ಸುಲಭ ಇಲ್ಲ. ಅಧಿಕಾರಿಗಳಿಗೆ ಸವಾಲಿನ ಕೆಲಸ’ ಎಂಬುದು ಸ್ಥಳೀಯರ ಅಭಿಪ್ರಾಯ.</p>.<div><blockquote>ಗುಡ್ಡೆತೋಟ ನಿವಾಸಿಗಳ ಸ್ಥಳಾಂತರಕ್ಕೆ ಎರಡು ಜಾಗ ಗುರುತಿಸಲಾಗಿದ್ದು ಅರಣ್ಯ–ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿಸಲಾಗುತ್ತಿದೆ. ಶೀಘ್ರವೇ ಸಮಸ್ಯೆ ಇತ್ಯರ್ಥಪಡಿಸಲಾಗುವುದು.</blockquote><span class="attribution"> –ಮೀನಾ ನಾಗರಾಜ್ ಜಿಲ್ಲಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>