<p><strong>ಕೊಟ್ಟಿಗೆಹಾರ</strong>: ಮಳೆಯಿಂದ ಮನೆ ಕುಸಿದು ಹಾನಿಯಾಗಿರುವ ಬಣಕಲ್ ಹೋಬಳಿಯ ಬಿನ್ನಡಿಯ ದಿನೇಶ್, ಅಜಾದ್ ನಗರದ ಸುರೇಶ್, ಕುವೆಂಪುನಗರದ ಸುನೀತಾ, ಗುಡ್ಡಹಟ್ಟಿಯ ಲಿಲ್ಲಿ ಡಿಸೋಜ ,ಶಾಂತಿನಗರ ಹಮೀದ್, ಇಂದಿರಾನಗರದ ಕೆಂಚಮ್ಮ ಅವರ ನಿವಾಸಕ್ಕೆ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಭೇಟಿ ನೀಡಿದರು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹5ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.</p>.<p>ಬಿಜೆಪಿ ಸರ್ಕಾರ ಇದ್ದಾಗ ಮನೆ ಕಳೆದುಕೊಂಡವರಿಗೆ ₹5ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪರಿಹಾರವನ್ನು ₹1.20 ಲಕ್ಷಕ್ಕೆ ಇಳಿಸಿದ್ದಾರೆ’ ಎಂದು ದೂರಿದರು.</p>.<p>ಮೂಡಿಗೆರೆ ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ ಮಾತನಾಡಿ ‘ಸರ್ಕಾರ ಬಡವರ ಸಮಸ್ಯೆಗೆ ಸ್ಪಂದಿಸದೇ ಇರುವುದರಿಂದ ಜನರ ಸ್ಥಿತಿ ಶೋಚನೀಯವಾಗಿದೆ'ಎಂದರು .</p>.<p>ಗ್ರಾಮಸ್ಥ ಸಾಗರ್ ಗೌಡ ಮಾತನಾಡಿ' ತರುವೆ, ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತಲ ರೈತರು ಸಂಕಷ್ಟದಲ್ಲಿದ್ದಾರೆ. ಗುಡ್ಡ ಕುಸಿತ, ಕಾಫಿ ಬೆಳೆ ಹಾನಿ, ಪಹಣಿಯಲ್ಲಿ ಬೆಳೆ ಕಾಲಂ ಇಲ್ಲದೇ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಬೆಳೆ ನಷ್ಟವಾದ ರೈತರಿಗೆ ಪರಿಹಾರ ಸಿಗುತ್ತಿಲ್ಲ.ರೈತರ ಈ ಸಮಸ್ಯೆಗಳನ್ನು ಸ್ಥಳೀಯ ಕೃಷಿ, ತೋಟಗಾರಿಕೆ, ಕಂದಾಯ ಅಧಿಕಾರಿಗಳು ಶೀಘ್ರವೇ ಬಗೆಹರಿಸಬೇಕು' ಎಂದು ಒತ್ತಾಯಿಸಿದರು.</p>.<p>ಅರುಣ್ ಬಿನ್ನಡಿ, ಎ.ಆರ್.ಅಭಿಲಾಷ್, ಸಂಜಯ್ ಗೌಡ, ವೇಣುಗೋಪಾಲ್ ಪೈ, ಟಿ.ಎಂ.ನರೇಂದ್ರ ಗೌಡ, ಬಿ.ಎ.ಪ್ರದೀಪ್, ಪುಟ್ಟಸ್ವಾಮಿ, ಸಂದೀಪ್, ಬಿ.ವಿ.ಸುರೇಶ್, ಚಂದ್ರು, ಮಗ್ಗಲಮಕ್ಕಿ ಗಣೇಶ್, ದಿನೇಶ್, ಶಂಕರೇಗೌಡ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಟ್ಟಿಗೆಹಾರ</strong>: ಮಳೆಯಿಂದ ಮನೆ ಕುಸಿದು ಹಾನಿಯಾಗಿರುವ ಬಣಕಲ್ ಹೋಬಳಿಯ ಬಿನ್ನಡಿಯ ದಿನೇಶ್, ಅಜಾದ್ ನಗರದ ಸುರೇಶ್, ಕುವೆಂಪುನಗರದ ಸುನೀತಾ, ಗುಡ್ಡಹಟ್ಟಿಯ ಲಿಲ್ಲಿ ಡಿಸೋಜ ,ಶಾಂತಿನಗರ ಹಮೀದ್, ಇಂದಿರಾನಗರದ ಕೆಂಚಮ್ಮ ಅವರ ನಿವಾಸಕ್ಕೆ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಭೇಟಿ ನೀಡಿದರು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹5ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.</p>.<p>ಬಿಜೆಪಿ ಸರ್ಕಾರ ಇದ್ದಾಗ ಮನೆ ಕಳೆದುಕೊಂಡವರಿಗೆ ₹5ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪರಿಹಾರವನ್ನು ₹1.20 ಲಕ್ಷಕ್ಕೆ ಇಳಿಸಿದ್ದಾರೆ’ ಎಂದು ದೂರಿದರು.</p>.<p>ಮೂಡಿಗೆರೆ ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ ಮಾತನಾಡಿ ‘ಸರ್ಕಾರ ಬಡವರ ಸಮಸ್ಯೆಗೆ ಸ್ಪಂದಿಸದೇ ಇರುವುದರಿಂದ ಜನರ ಸ್ಥಿತಿ ಶೋಚನೀಯವಾಗಿದೆ'ಎಂದರು .</p>.<p>ಗ್ರಾಮಸ್ಥ ಸಾಗರ್ ಗೌಡ ಮಾತನಾಡಿ' ತರುವೆ, ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತಲ ರೈತರು ಸಂಕಷ್ಟದಲ್ಲಿದ್ದಾರೆ. ಗುಡ್ಡ ಕುಸಿತ, ಕಾಫಿ ಬೆಳೆ ಹಾನಿ, ಪಹಣಿಯಲ್ಲಿ ಬೆಳೆ ಕಾಲಂ ಇಲ್ಲದೇ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಬೆಳೆ ನಷ್ಟವಾದ ರೈತರಿಗೆ ಪರಿಹಾರ ಸಿಗುತ್ತಿಲ್ಲ.ರೈತರ ಈ ಸಮಸ್ಯೆಗಳನ್ನು ಸ್ಥಳೀಯ ಕೃಷಿ, ತೋಟಗಾರಿಕೆ, ಕಂದಾಯ ಅಧಿಕಾರಿಗಳು ಶೀಘ್ರವೇ ಬಗೆಹರಿಸಬೇಕು' ಎಂದು ಒತ್ತಾಯಿಸಿದರು.</p>.<p>ಅರುಣ್ ಬಿನ್ನಡಿ, ಎ.ಆರ್.ಅಭಿಲಾಷ್, ಸಂಜಯ್ ಗೌಡ, ವೇಣುಗೋಪಾಲ್ ಪೈ, ಟಿ.ಎಂ.ನರೇಂದ್ರ ಗೌಡ, ಬಿ.ಎ.ಪ್ರದೀಪ್, ಪುಟ್ಟಸ್ವಾಮಿ, ಸಂದೀಪ್, ಬಿ.ವಿ.ಸುರೇಶ್, ಚಂದ್ರು, ಮಗ್ಗಲಮಕ್ಕಿ ಗಣೇಶ್, ದಿನೇಶ್, ಶಂಕರೇಗೌಡ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>