ತುಂಗಾ–ಭದ್ರಾ ನದಿಯಿಂದಲೂ ಮನೆ–ಮನೆಗೆ ನೀರು
ಎನ್.ಆರ್.ಪುರ ಪಟ್ಟಣ ತಾಲ್ಲೂಕಿನ 175 ಜನವಸತಿ ಭದ್ರಾ ಜಲಾಶಯದ ಹಿನ್ನೀರಿನಲ್ಲಿ ಜಾಕ್ವೆಲ್ ಇರಿಸಿ ನೀರು ಪೂರೈಸಲು ಉದ್ದೇಶಿಸಲಾಗಿದೆ. ಕೊಪ್ಪ ಮತ್ತು ಶೃಂಗೇರಿ ತಾಲ್ಲೂಕಿನ 1208 ಹಳ್ಳಿಗಳಿಗೆ ತುಂಗಾ ನದಿಯಿಂದ ನೀರು ಮೇಲೆತ್ತಿ ಹಳ್ಳಿ ಮತ್ತು ಪಟ್ಟಣ ಪ್ರದೇಶಕ್ಕೆ ನೀರು ಪೂರೈಸುವುದೂ ಯೋಜನೆಯಲ್ಲಿ ಸೇರ್ಪಡೆಯಾಗಿದೆ. ಒಟ್ಟು ₹656 ಕೋಟಿ ಮೊತ್ತದ ಯೋಜನೆ ಇದಾಗಿದೆ. ಇದಲ್ಲದೇ ಆಲ್ದೂರು ಸುತ್ತಮುತ್ತಲ 18 ಹಳ್ಳಿಗಳಿಗೂ ಕುಡಿಯುವ ನೀರು ಪೂರೈಸಲು ₹30 ಕೋಟಿ ಮೊತ್ತದ ಯೋಜನೆಯೂ ಪ್ರತ್ಯೇಕವಾಗಿ ಕೈಗೆತ್ತಿಕೊಳ್ಳಲಾಗಿದೆ.