<p><strong>ನರಸಿಂಹರಾಜಪುರ</strong>: ತಾಲ್ಲೂಕಿನಾದ್ಯಂತ ಬುಧವಾರವೂ ಸಹ ಪುನರ್ವಸು ಮಳೆಯ ಅಬ್ಬರ ಮುಂದುವರೆದಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ.</p>.<p>ಮಂಗಳವಾರ ತುಸು ಕಡಿಮೆಯಾಗಿದ್ದ ಮಳೆ ಪುನಃ ರಾತ್ರಿ 10ರ ನಂತರ ಭಾರಿ ಪ್ರಮಾಣದಲ್ಲಿ ಸುರಿಯಿತು. ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕ್ಸೆ ಗ್ರಾಮದ ಗೋಣಿಕೊಪ್ಪ ಎನ್.ಕೆ.ವಿಜಯ ಎಂಬುವರ ಮನೆ ಮುಂಭಾಗದ ಶೆಡ್ ಕುಸಿದು ಬಿದ್ದ ಪರಿಣಾಮ ಶೆಡ್ನೊಳಗಿದ್ದ ಕಾರಿಗೆ ಹಾನಿಯಾಗಿದೆ.</p>.<p>ಪಟ್ಟಣದ ಹಳೇಪೇಟೆಯ 10ನೇ ವಾರ್ಡ್ನ ಸತ್ಯನ್ ನಾಯರ್ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮೇಗರಮಕ್ಕಿ ಗ್ರಾಮದ ಕಿಚ್ಚಬ್ಬಿ ನಿವಾಸಿ ಸುಭಾಷ್ ಎಂಬುವರ ಮನೆಯ ಕೆಳ ಭಾಗದ ಧರೆ ಜರಿದಿದೆ.</p>.<p>ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಬೈಲು ಗ್ರಾಮದ ಮುರುಗನಕೆರೆಯ ನಿವಾಸಿ ಉಮಾ ಎಂಬುವರ ಮನೆಯ ಮೇಲೆ ಮರ ಬಿದ್ದು, ಶೀಟುಗಳು ಪುಡಿಯಾಗಿವೆ. ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಲೆ ಕೊಪ್ಪ ಗ್ರಾಮದ ಸಂದೇಶ್ ಅವರ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಕೆಲವು ಕಡೆ ತಹಶೀಲ್ದಾರ್ ತನುಜಾ ಟಿ ಸವದತ್ತಿ, ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಸಾನಿಯಾ ತಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬುಧವಾರ ಬೆಳಿಗ್ಗೆ 11ರ ವೇಳೆಗೆ ಹಾಗೂ ಮಧ್ಯಾಹ್ನ 3ರ ವೇಳೆಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಸಿಂಹರಾಜಪುರ</strong>: ತಾಲ್ಲೂಕಿನಾದ್ಯಂತ ಬುಧವಾರವೂ ಸಹ ಪುನರ್ವಸು ಮಳೆಯ ಅಬ್ಬರ ಮುಂದುವರೆದಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ.</p>.<p>ಮಂಗಳವಾರ ತುಸು ಕಡಿಮೆಯಾಗಿದ್ದ ಮಳೆ ಪುನಃ ರಾತ್ರಿ 10ರ ನಂತರ ಭಾರಿ ಪ್ರಮಾಣದಲ್ಲಿ ಸುರಿಯಿತು. ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕ್ಸೆ ಗ್ರಾಮದ ಗೋಣಿಕೊಪ್ಪ ಎನ್.ಕೆ.ವಿಜಯ ಎಂಬುವರ ಮನೆ ಮುಂಭಾಗದ ಶೆಡ್ ಕುಸಿದು ಬಿದ್ದ ಪರಿಣಾಮ ಶೆಡ್ನೊಳಗಿದ್ದ ಕಾರಿಗೆ ಹಾನಿಯಾಗಿದೆ.</p>.<p>ಪಟ್ಟಣದ ಹಳೇಪೇಟೆಯ 10ನೇ ವಾರ್ಡ್ನ ಸತ್ಯನ್ ನಾಯರ್ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮೇಗರಮಕ್ಕಿ ಗ್ರಾಮದ ಕಿಚ್ಚಬ್ಬಿ ನಿವಾಸಿ ಸುಭಾಷ್ ಎಂಬುವರ ಮನೆಯ ಕೆಳ ಭಾಗದ ಧರೆ ಜರಿದಿದೆ.</p>.<p>ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಬೈಲು ಗ್ರಾಮದ ಮುರುಗನಕೆರೆಯ ನಿವಾಸಿ ಉಮಾ ಎಂಬುವರ ಮನೆಯ ಮೇಲೆ ಮರ ಬಿದ್ದು, ಶೀಟುಗಳು ಪುಡಿಯಾಗಿವೆ. ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಲೆ ಕೊಪ್ಪ ಗ್ರಾಮದ ಸಂದೇಶ್ ಅವರ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಕೆಲವು ಕಡೆ ತಹಶೀಲ್ದಾರ್ ತನುಜಾ ಟಿ ಸವದತ್ತಿ, ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಸಾನಿಯಾ ತಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬುಧವಾರ ಬೆಳಿಗ್ಗೆ 11ರ ವೇಳೆಗೆ ಹಾಗೂ ಮಧ್ಯಾಹ್ನ 3ರ ವೇಳೆಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>