<p><strong>ಕಡೂರು:</strong> ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆದಿರುವ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ರೈತರು ಮುಗಿಬಿದ್ದಿದ್ದಾರೆ. ದಿನವಿಡೀ ಸರದಿಯಲ್ಲಿ ನಿಲ್ಲುವ ರೈತರು ಸುಡುಬಿಸಿಲಿಗೆ ಹೈರಾಣಾಗುತ್ತಿದ್ದಾರೆ. </p>.<p>ಬರಗಾಲದಲ್ಲಿ ತೀವ್ರ ಬೆಲೆ ಕುಸಿತ ಕಂಡಿದ್ದ ಕೊಬ್ಬರಿಗೆ ಬೆಂಬಲ ಬೆಲೆ ನೀಡಿ ನಾಫೆಡ್ ಮೂಲಕ ಸರ್ಕಾರ ಖರೀದಿ ಪ್ರಕ್ರಿಯೆ ಆರಂಭಿಸಿದ್ದು, ರೈತರಿಗೆ ತುಸು ಸಮಾಧಾನ ತಂದಿದೆ.</p>.<p>ನಾಫೆಡ್ ಮೂಲಕ ಖರೀದಿಸುವ ಒಂದು ಕ್ವಿಂಟಲ್ ಕೊಬ್ಬರಿಗೆ ಕೇಂದ್ರ ಸರ್ಕಾರದಿಂದ ₹ 12ಸಾವಿರ, ರಾಜ್ಯ ಸರ್ಕಾರದಿಂದ ₹1,500 ಸೇರಿ ಒಟ್ಟು ₹13,500 ದರ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಪ್ರಸ್ತುತ ಕೊಬ್ಬರಿ ಬೆಲೆ ಕ್ವಿಂಟಲ್ಗೆ ₹ 11ಸಾವಿರ ಇದೆ. ಹೀಗಾಗಿ, ರೈತರು ನಾಫೆಡ್ ಮೂಲಕ ಮಾರಾಟ ಮಾಡಲು ಉತ್ಸುಕರಾಗಿದ್ದಾರೆ. </p>.<p>ರೈತರು ಬೆಳೆದಿರುವ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ ವೇಳೆ ರೈತರು ಪಹಣಿ, ಫ್ರುಟ್ಸ್ ಐಡಿ ಜೊತೆ ಬೆರಳಚ್ಚು ಕೊಡಬೇಕಾಗುತ್ತದೆ. ರೈತರ ಹೆಸರಲ್ಲಿ ವರ್ತಕರು ಕೊಬ್ಬರಿ ಬೆಂಬಲ ಬೆಲೆಯ ಪ್ರಯೋಜನ ಪಡೆಯುವುದನ್ನು ತಡೆಗಟ್ಟಲು ಈ ಬಾರಿಯಿಂದ ಈ ಪದ್ಧತಿ ಅಳವಡಿಸಲಾಗಿದೆ.</p>.<p>ಖರೀದಿ ಕೇಂದ್ರಕ್ಕೆ ಹೆಸರು ನೋಂದಾಯಿಸಲು ಬರುವವರಲ್ಲಿ ಬಹಳಷ್ಟು ಜನ ವೃದ್ಧರು, ವಯಸ್ಸಾದ ಮಹಿಳೆಯರು ಇರುತ್ತಾರೆ. ದೂರದ ಪಂಚನಹಳ್ಳಿ ಸೇರಿದಂತೆ 50 ಕಿ.ಮೀ. ದೂರದಿಂದ ಬಂದು ಸರದಿಯಲ್ಲಿ ನಿಲ್ಲುತ್ತಾರೆ. ಕೆಲವರು ಹಿಂದಿನ ದಿನ ರಾತ್ರಿಯೇ ಬಂದು, ಬೆಳಿಗ್ಗೆ 7 ಗಂಟೆಗೆ ಸರದಿಯಲ್ಲಿ ನಿಲ್ಲುತ್ತಾರೆ. ಹೆಸರು ನೋಂದಣಿಗೆ ಒಂದು ಕಂಪ್ಯೂಟರ್ ಮಾತ್ರ ಇದ್ದು, ಬೆರಳಚ್ಚು ಪಡೆಯುವ ಯಂತ್ರವೂ ಒಂದೇ ಇದೆ. ಇದರಿಂದ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದೆ. ಆದರೆ, ಊಟ– ತಿಂಡಿಗೆ ಅರ್ಧ ಕಿ.ಮೀ. ದೂರ ಹೋಗಬೇಕಾಗುತ್ತದೆ ಎನ್ನುತ್ತಾರೆ ಸುಡುಬಿಸಿಲಿನಲ್ಲಿ ಕಾದು ನಿಲ್ಲುವ ರೈತರು. </p>.<p>ನೋಂದಣಿಗೆ ಒಂದು ಗವಾಕ್ಷಿ ಸಾಲದು. ಕನಿಷ್ಠ ನಾಲ್ಕು ಕಂಪ್ಯೂಟರ್ ಅಳವಡಿಸಿದರೆ ಪ್ರಕ್ರಿಯೆ ವೇಗವಾಗುತ್ತದೆ. ದೂರದಿಂದ ಬಂದವರು ಹೆಚ್ಚು ಹೊತ್ತು ಬಿಸಿಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಎಲ್ಲ ಹೋಬಳಿ ಕೇಂದ್ರಗಳಲ್ಲಿ ನೋಂದಣಿ ಕೇಂದ್ರ ತೆರೆದರೆ ರೈತರು ಇಲ್ಲಿಗೆ ಬರುವುದನ್ನು ತಪ್ಪಿಸಬಹುದಾಗಿದೆ. ವೃದ್ಧರಿಗೆ ಬಹಳ ಅನುಕೂಲವಾಗುತ್ತದೆ ಎನ್ನುತ್ತಾರೆ ಪಂಚನಹಳ್ಳಿಯ ರೈತ ಪರಮೇಶ್ವರಪ್ಪ.</p>.<p>ಫೆ.5ರಿಂದ ನೋಂದಣಿ ಆರಂಭವಾದರೂ ಬಯೊಮೆಟ್ರಿಕ್ ಯಂತ್ರದ ದೋಷದಿಂದ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಮಂಗಳವಾರದಿಂದ ಮತ್ತೆ ನೋಂದಣಿ ಆರಂಭವಾಗಿದೆ. ಒಟ್ಟು 829 ರೈತರು 12,529 ಕ್ವಿಂಟಾಲ್ ಕೊಬ್ಬರಿ ಮಾರಾಟ ಮಾಡಲು ಹೆಸರು ನೋಂದಾಯಿಸಿದ್ದಾರೆ. </p>.<p> ಒಂದು ಕಂಪ್ಯೂಟರ್ ಒಂದು ಬೆರಳಚ್ಚು ಯಂತ್ರ ಉಪಯೋಗಿಸಿ ನೋಂದಣಿ ಮಾಡಬೇಕೆಂಬ ನಿಯಮವಿದೆ. ಮಾರ್ಗಸೂಚಿ ಪ್ರಕಾರವೇ ಕಾರ್ಯನಿರ್ವಹಿಸಲಾಗುತ್ತಿದೆ. </p><p><strong>–ಉದಯ್ ಕುಮಾರ್ ವ್ಯವಸ್ಥಾಪಕ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು:</strong> ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆದಿರುವ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ರೈತರು ಮುಗಿಬಿದ್ದಿದ್ದಾರೆ. ದಿನವಿಡೀ ಸರದಿಯಲ್ಲಿ ನಿಲ್ಲುವ ರೈತರು ಸುಡುಬಿಸಿಲಿಗೆ ಹೈರಾಣಾಗುತ್ತಿದ್ದಾರೆ. </p>.<p>ಬರಗಾಲದಲ್ಲಿ ತೀವ್ರ ಬೆಲೆ ಕುಸಿತ ಕಂಡಿದ್ದ ಕೊಬ್ಬರಿಗೆ ಬೆಂಬಲ ಬೆಲೆ ನೀಡಿ ನಾಫೆಡ್ ಮೂಲಕ ಸರ್ಕಾರ ಖರೀದಿ ಪ್ರಕ್ರಿಯೆ ಆರಂಭಿಸಿದ್ದು, ರೈತರಿಗೆ ತುಸು ಸಮಾಧಾನ ತಂದಿದೆ.</p>.<p>ನಾಫೆಡ್ ಮೂಲಕ ಖರೀದಿಸುವ ಒಂದು ಕ್ವಿಂಟಲ್ ಕೊಬ್ಬರಿಗೆ ಕೇಂದ್ರ ಸರ್ಕಾರದಿಂದ ₹ 12ಸಾವಿರ, ರಾಜ್ಯ ಸರ್ಕಾರದಿಂದ ₹1,500 ಸೇರಿ ಒಟ್ಟು ₹13,500 ದರ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಪ್ರಸ್ತುತ ಕೊಬ್ಬರಿ ಬೆಲೆ ಕ್ವಿಂಟಲ್ಗೆ ₹ 11ಸಾವಿರ ಇದೆ. ಹೀಗಾಗಿ, ರೈತರು ನಾಫೆಡ್ ಮೂಲಕ ಮಾರಾಟ ಮಾಡಲು ಉತ್ಸುಕರಾಗಿದ್ದಾರೆ. </p>.<p>ರೈತರು ಬೆಳೆದಿರುವ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ ವೇಳೆ ರೈತರು ಪಹಣಿ, ಫ್ರುಟ್ಸ್ ಐಡಿ ಜೊತೆ ಬೆರಳಚ್ಚು ಕೊಡಬೇಕಾಗುತ್ತದೆ. ರೈತರ ಹೆಸರಲ್ಲಿ ವರ್ತಕರು ಕೊಬ್ಬರಿ ಬೆಂಬಲ ಬೆಲೆಯ ಪ್ರಯೋಜನ ಪಡೆಯುವುದನ್ನು ತಡೆಗಟ್ಟಲು ಈ ಬಾರಿಯಿಂದ ಈ ಪದ್ಧತಿ ಅಳವಡಿಸಲಾಗಿದೆ.</p>.<p>ಖರೀದಿ ಕೇಂದ್ರಕ್ಕೆ ಹೆಸರು ನೋಂದಾಯಿಸಲು ಬರುವವರಲ್ಲಿ ಬಹಳಷ್ಟು ಜನ ವೃದ್ಧರು, ವಯಸ್ಸಾದ ಮಹಿಳೆಯರು ಇರುತ್ತಾರೆ. ದೂರದ ಪಂಚನಹಳ್ಳಿ ಸೇರಿದಂತೆ 50 ಕಿ.ಮೀ. ದೂರದಿಂದ ಬಂದು ಸರದಿಯಲ್ಲಿ ನಿಲ್ಲುತ್ತಾರೆ. ಕೆಲವರು ಹಿಂದಿನ ದಿನ ರಾತ್ರಿಯೇ ಬಂದು, ಬೆಳಿಗ್ಗೆ 7 ಗಂಟೆಗೆ ಸರದಿಯಲ್ಲಿ ನಿಲ್ಲುತ್ತಾರೆ. ಹೆಸರು ನೋಂದಣಿಗೆ ಒಂದು ಕಂಪ್ಯೂಟರ್ ಮಾತ್ರ ಇದ್ದು, ಬೆರಳಚ್ಚು ಪಡೆಯುವ ಯಂತ್ರವೂ ಒಂದೇ ಇದೆ. ಇದರಿಂದ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದೆ. ಆದರೆ, ಊಟ– ತಿಂಡಿಗೆ ಅರ್ಧ ಕಿ.ಮೀ. ದೂರ ಹೋಗಬೇಕಾಗುತ್ತದೆ ಎನ್ನುತ್ತಾರೆ ಸುಡುಬಿಸಿಲಿನಲ್ಲಿ ಕಾದು ನಿಲ್ಲುವ ರೈತರು. </p>.<p>ನೋಂದಣಿಗೆ ಒಂದು ಗವಾಕ್ಷಿ ಸಾಲದು. ಕನಿಷ್ಠ ನಾಲ್ಕು ಕಂಪ್ಯೂಟರ್ ಅಳವಡಿಸಿದರೆ ಪ್ರಕ್ರಿಯೆ ವೇಗವಾಗುತ್ತದೆ. ದೂರದಿಂದ ಬಂದವರು ಹೆಚ್ಚು ಹೊತ್ತು ಬಿಸಿಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಎಲ್ಲ ಹೋಬಳಿ ಕೇಂದ್ರಗಳಲ್ಲಿ ನೋಂದಣಿ ಕೇಂದ್ರ ತೆರೆದರೆ ರೈತರು ಇಲ್ಲಿಗೆ ಬರುವುದನ್ನು ತಪ್ಪಿಸಬಹುದಾಗಿದೆ. ವೃದ್ಧರಿಗೆ ಬಹಳ ಅನುಕೂಲವಾಗುತ್ತದೆ ಎನ್ನುತ್ತಾರೆ ಪಂಚನಹಳ್ಳಿಯ ರೈತ ಪರಮೇಶ್ವರಪ್ಪ.</p>.<p>ಫೆ.5ರಿಂದ ನೋಂದಣಿ ಆರಂಭವಾದರೂ ಬಯೊಮೆಟ್ರಿಕ್ ಯಂತ್ರದ ದೋಷದಿಂದ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಮಂಗಳವಾರದಿಂದ ಮತ್ತೆ ನೋಂದಣಿ ಆರಂಭವಾಗಿದೆ. ಒಟ್ಟು 829 ರೈತರು 12,529 ಕ್ವಿಂಟಾಲ್ ಕೊಬ್ಬರಿ ಮಾರಾಟ ಮಾಡಲು ಹೆಸರು ನೋಂದಾಯಿಸಿದ್ದಾರೆ. </p>.<p> ಒಂದು ಕಂಪ್ಯೂಟರ್ ಒಂದು ಬೆರಳಚ್ಚು ಯಂತ್ರ ಉಪಯೋಗಿಸಿ ನೋಂದಣಿ ಮಾಡಬೇಕೆಂಬ ನಿಯಮವಿದೆ. ಮಾರ್ಗಸೂಚಿ ಪ್ರಕಾರವೇ ಕಾರ್ಯನಿರ್ವಹಿಸಲಾಗುತ್ತಿದೆ. </p><p><strong>–ಉದಯ್ ಕುಮಾರ್ ವ್ಯವಸ್ಥಾಪಕ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>