ಗೋಶಾಲೆಗಳಿಗೆ ಬೇಕು ಸರ್ಕಾರದ ನೆರವು
ಬೀಡಾಡಿ ದನಗಳನ್ನು ಹಿಡಿದು ರಕ್ಷಣೆ ಮಾಡಲು ಗೋಶಾಲೆಗಳಿವೆ. ಅವುಗಳ ನಿರ್ವಹಣೆಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಕಾಮಧೇನು ಗೋಶಾಲೆ ಟ್ರಸ್ಟ್ನ ಸಂಘಟನಾ ಕಾರ್ಯದರ್ಶಿ ವಿ.ಟಿ. ಲಕ್ಷ್ಮಣ್ ಒತ್ತಾಯಿಸಿದರು. ‘ಇಂದಾವರದ ಕಾಮಧೇನು ಗೋಶಾಲೆಯಲ್ಲಿ 170ಕ್ಕೂ ಹೆಚ್ಚು ಗೋವುಗಳು ಬೀಡಾಡಿ ದನಗಳು ಇವೆ. ಸರ್ಕಾರದ ಯಾವುದೇ ಅನುದಾನವಿಲ್ಲದೇ ದಾನಿಗಳ ನೆರವಿನಿಂದಲೇ ಮುನ್ನಡೆಸಿಕೊಂಡು ಬಂದಿದ್ದೇವೆ. ಸದ್ಯ ಮೇವಿನ ಕೊರತೆ ಇದ್ದು ನಿಭಾಯಿಸುವುದೇ ಕಷ್ಟವಾಗುತ್ತಿದೆ. ಸರ್ಕಾರ ಗೋಶಾಲೆಗೆ ಅನುದಾನ ನೀಡಿದಲ್ಲಿ ಸಹಕಾರಿಯಾಗಲಿದೆ’ ಎಂದು ಅವರು ಮನವಿ ಮಾಡಿದರು.