<p><strong>ಚಿಕ್ಕಮಗಳೂರು</strong>: ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಮಾಡುವ ಮೂಲಕ ಹಗಲಿರುಳು ಶ್ರಮಿಸುವ ಶುಶ್ರೂಷಕಿಯರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನ್ಕುಮಾರ್ ಹೇಳಿದರು.</p>.<p>ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಸರ್ಕಾರಿ ಶುಶ್ರೂಷಕರ ಸಂಘದ ವತಿಯಿಂದ ಪ್ಲಾರೆನ್ಸ್ ನೈಟಿಂಗೇಲ್ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಶುಶ್ರೂಷಕರ ಹಬ್ಬ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕೋವಿಡ್ ತಲ್ಲಣದ ಕಾಲದಲ್ಲಿ ಯೋಧರಂತೆ ದುಡಿದ ದಾದಿಯರು ನೂರಾರು ಜೀವಗಳನ್ನು ರಕ್ಷಿಸಿದ್ದಾರೆ. ಕುಟುಂಬ ಹಾಗೂ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಿದ್ದಾರೆ ಎಂದು ಸ್ಮರಿಸಿದರು.</p>.<p>ಡಾ.ಚಂದ್ರಶೇಖರ್ ಮಾತನಾಡಿ ಶುಶ್ರೂಷಕಿಯರ ವೃತ್ತಿ ನಿಜಕ್ಕೂ ಸವಾಲಿನ ಕೆಲಸ ಇದ್ದಂತೆ. ಒಬ್ಬ ರೋಗಿಗೆ ವೈದ್ಯರು ದೈಹಿಕ, ಆರೋಗ್ಯ ಸುಧಾರಣೆಗೆ ಔಷಧಿಗಳನ್ನು ನೀಡಿದರೂ ಆತನನ್ನು ಮಾನಸಿಕವಾಗಿ ಉಪಚರಿಸಿ ಸನ್ನದ್ಧಗೊಳಿಸುವಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.</p>.<p>ಸಂಘದ ಜಿಲ್ಲಾಧ್ಯಕ್ಷೆ ಜ್ಯೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯರು ರೋಗಿಯ ಪಾಲಿಗೆ ದೇವರಿದ್ದಂತೆ. ಆದರೆ ಶುಶ್ರೂಷಕರು ಆ ರೋಗಿಗಳನ್ನು ಪೋಷಿಸುವ, ತಾಯಿ ಮತ್ತು ಸಹೋದರಿಯಂತೆ. ದಾದಿಯರು ಇಲ್ಲದಿದ್ದರೆ ರೋಗಿಯ ಸ್ಥಿತಿ ಊಹಿಸಲು ಅಸಾಧ್ಯ ಎಂದರು.</p>.<p>ಈ ವೇಳೆ ವೈದ್ಯರಾದ ಲೋಹಿತ್ಕುಮಾರ್, ಡಾ.ಕಲ್ಪನಾ, ಡಾ.ಲಾವಣ್ಯ, ಸಂಘದ ಕಾರ್ಯದರ್ಶಿ ಕೆ.ಎಸ್.ರಂಗನಾಥ್, ಖಜಾಂಚಿ ಪದ್ಮಮ್ಮ, ಗೌರವಾಧ್ಯಕ್ಷೆ ಶಶಿಕಲಾವತಿ ಪಾಲ್ಗೊಂಡಿದ್ದರು.</p>.<p><strong>ರೋಗಿಗಳ ಗುಣಪಡಿಸುವಲ್ಲಿ ವೈದ್ಯರಂತೆ ದಾದಿಯರ ಸೇವೆಯೂ ಮುಖ್ಯ. ದಾದಿಯರು ಸದಾ ಯಾವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. -ಡಾ.ಮೋಹನ್ಕುಮಾರ್ ಜಿಲ್ಲಾ ಶಸ್ತ್ರಚಿಕಿತ್ಸಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಮಾಡುವ ಮೂಲಕ ಹಗಲಿರುಳು ಶ್ರಮಿಸುವ ಶುಶ್ರೂಷಕಿಯರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನ್ಕುಮಾರ್ ಹೇಳಿದರು.</p>.<p>ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಸರ್ಕಾರಿ ಶುಶ್ರೂಷಕರ ಸಂಘದ ವತಿಯಿಂದ ಪ್ಲಾರೆನ್ಸ್ ನೈಟಿಂಗೇಲ್ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಶುಶ್ರೂಷಕರ ಹಬ್ಬ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕೋವಿಡ್ ತಲ್ಲಣದ ಕಾಲದಲ್ಲಿ ಯೋಧರಂತೆ ದುಡಿದ ದಾದಿಯರು ನೂರಾರು ಜೀವಗಳನ್ನು ರಕ್ಷಿಸಿದ್ದಾರೆ. ಕುಟುಂಬ ಹಾಗೂ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಿದ್ದಾರೆ ಎಂದು ಸ್ಮರಿಸಿದರು.</p>.<p>ಡಾ.ಚಂದ್ರಶೇಖರ್ ಮಾತನಾಡಿ ಶುಶ್ರೂಷಕಿಯರ ವೃತ್ತಿ ನಿಜಕ್ಕೂ ಸವಾಲಿನ ಕೆಲಸ ಇದ್ದಂತೆ. ಒಬ್ಬ ರೋಗಿಗೆ ವೈದ್ಯರು ದೈಹಿಕ, ಆರೋಗ್ಯ ಸುಧಾರಣೆಗೆ ಔಷಧಿಗಳನ್ನು ನೀಡಿದರೂ ಆತನನ್ನು ಮಾನಸಿಕವಾಗಿ ಉಪಚರಿಸಿ ಸನ್ನದ್ಧಗೊಳಿಸುವಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.</p>.<p>ಸಂಘದ ಜಿಲ್ಲಾಧ್ಯಕ್ಷೆ ಜ್ಯೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯರು ರೋಗಿಯ ಪಾಲಿಗೆ ದೇವರಿದ್ದಂತೆ. ಆದರೆ ಶುಶ್ರೂಷಕರು ಆ ರೋಗಿಗಳನ್ನು ಪೋಷಿಸುವ, ತಾಯಿ ಮತ್ತು ಸಹೋದರಿಯಂತೆ. ದಾದಿಯರು ಇಲ್ಲದಿದ್ದರೆ ರೋಗಿಯ ಸ್ಥಿತಿ ಊಹಿಸಲು ಅಸಾಧ್ಯ ಎಂದರು.</p>.<p>ಈ ವೇಳೆ ವೈದ್ಯರಾದ ಲೋಹಿತ್ಕುಮಾರ್, ಡಾ.ಕಲ್ಪನಾ, ಡಾ.ಲಾವಣ್ಯ, ಸಂಘದ ಕಾರ್ಯದರ್ಶಿ ಕೆ.ಎಸ್.ರಂಗನಾಥ್, ಖಜಾಂಚಿ ಪದ್ಮಮ್ಮ, ಗೌರವಾಧ್ಯಕ್ಷೆ ಶಶಿಕಲಾವತಿ ಪಾಲ್ಗೊಂಡಿದ್ದರು.</p>.<p><strong>ರೋಗಿಗಳ ಗುಣಪಡಿಸುವಲ್ಲಿ ವೈದ್ಯರಂತೆ ದಾದಿಯರ ಸೇವೆಯೂ ಮುಖ್ಯ. ದಾದಿಯರು ಸದಾ ಯಾವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. -ಡಾ.ಮೋಹನ್ಕುಮಾರ್ ಜಿಲ್ಲಾ ಶಸ್ತ್ರಚಿಕಿತ್ಸಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>