ವಿಲೇವಾರಿಗೆ ಕಾದಿವೆ 14 ಸಾವಿರ ಅರ್ಜಿ
ತರೀಕೆರೆ: ತಾಲ್ಲೂಕು ಕಚೇರಿಯಲ್ಲಿರುವ 75 ಹುದ್ದೆಗಳ ಪೈಕಿ 58 ಹುದ್ದೆಗಳು ಭರ್ತಿಯಾಗಿದ್ದು 17 ಹುದ್ದೆಗಳು ಖಾಲಿ ಇವೆ. ತಾಲ್ಲೂಕಿನಲ್ಲಿ ಬಗರ್ ಹುಕ್ಕಂ ಅರ್ಜಿಗಳು ನಮೂನೆ 53ರಲ್ಲಿ 139 ಅರ್ಜಿಗಳು ಉಳಿದಿವೆ. 57ರಲ್ಲಿ 17170 ಅರ್ಜಿ ಸಲ್ಲಿಕೆಯಾಗಿದ್ದು ಇನ್ನೂ 14 ಸಾವಿರ ಅರ್ಜಿ ಪರಿಶೀಲನೆ ಬಾಕಿ ಇದೆ. ಋಷಿಪುರ ತ್ಯಾಗದಬಾಗಿ ಸುಣ್ಣದಹಳ್ಳಿ ನಂದಿ ಮಸ್ಕಲ್ ಮರಡಿ ಸಿದ್ದರಹಳ್ಳಿ ಕೆಂಚಾಪುರ ಸಂತವೇರಿ ಭಾಗಗಳಲ್ಲಿ ಬಗರ್ ಹುಕ್ಕಂ ಸಾಗುವಳಿದಾರರು ಅರಣ್ಯದಂಚಿನಲ್ಲಿ ಸಾಗುವಳಿ ಮಾಡುತ್ತಿದ್ದು ಕಂದಾಯ ಇಲಾಖೆ ರೈತರ ಜಮೀನು ಗುರುತಿಸಲು ಸಾದ್ಯವಾಗುತ್ತಿಲ್ಲ.