<p>ಹಿರಿಯೂರು: ‘ಅಕ್ಷರದ ಅರಿವು ಮೂಡಿಸುವ ಮೂಲಕ ಬದುಕಿಗೆ ಭದ್ರ ಅಡಿಪಾಯ ಹಾಕಿಕೊಡುವ ಗುರುಗಳನ್ನು ಸ್ಮರಿಸುವುದು ದೇವರ ಸ್ಮರಣೆಗೆ ಸಮ’ ಎಂದು ಗಿರೀಶ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ರಾಜಶೇಖರಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ನಗರದ ಗಿರೀಶ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ 1990–91ನೇ ಸಾಲಿನಲ್ಲಿ ಗಿರೀಶ ಪ್ರಾಥಮಿಕ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹ ಬಂಧ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ನಿವೃತ್ತಿಯ ನಂತರವೂ ಗೌರವ ಗಳಿಸಿರುವ ಏಕೈಕ ವೃತ್ತಿ ಎಂದರೆ ಗುರುಗಳದ್ದು. ಹೀಗಾಗಿಯೇ 35 ವರ್ಷಗಳ ಹಿಂದೆ ಕಲಿತವರೆಲ್ಲ ಒಟ್ಟಾಗಿ ಒಂದೆಡೆ ಸೇರಿ ಗುರುವಂದನೆ ಕಾರ್ಯಕ್ರಮ ನಡೆಸುತ್ತಿರುವುದೇ ಅದಕ್ಕೆ ನಿದರ್ಶನ. ನಿವೃತ್ತಿಯ ನಂತರವೂ ಕಲಿಸುವುದನ್ನು ಶಿಕ್ಷಕರು ಮುಂದುವರಿಸಬೇಕು’ ಎಂದು ಅವರು ಮನವಿ ಮಾಡಿದರು.</p>.<p>ಗುರುಗಳಾಗಿದ್ದ ಸಾವಿತ್ರಮ್ಮ, ರಂಗಸ್ವಾಮಿ, ಸುರೇಶ್ ಬಾಬು, ಲಿಂಗರಾಜು, ಪ್ರಕಾಶ್ ಕುಮಾರ್, ತನುಜಾ, ಜಯಂತಿ, ತಿಪ್ಪೀರಮ್ಮ, ಮುದ್ದುರಂಗಮ್ಮ ಅವರಿಗೆ ಹಳೆಯ ವದ್ಯಾರ್ಥಿಗಳು ಗೌರವ ಸಮರ್ಪಿಸಿದರು.</p>.<p>ಗಿರೀಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕಾಂತೇಶ್ವರ ಸ್ವಾಮಿ, ನಿರ್ದೇಶಕ ಬಸವರಾಜ್, ಹಳೆಯ ವಿದ್ಯಾರ್ಥಿಗಳಾದ ಎಂ.ವಿ.ದಿನೇಶ್, ನರೇಂದ್ರ, ಜಗದೀಶ್, ರಾಘವೇಂದ್ರ, ಅವಿನಾಶ್, ಧನಂಜಯ, ಖಲೀಲ್, ಚಂದ್ರಶೇಖರ್, ಕವಿತಾ, ಲತಾ, ಸೌಮ್ಯ ಲತಾ, ದೀಪಾ, ಮೀನಾಕ್ಷಿ, ರೂಪಕಲಾ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರಿಯೂರು: ‘ಅಕ್ಷರದ ಅರಿವು ಮೂಡಿಸುವ ಮೂಲಕ ಬದುಕಿಗೆ ಭದ್ರ ಅಡಿಪಾಯ ಹಾಕಿಕೊಡುವ ಗುರುಗಳನ್ನು ಸ್ಮರಿಸುವುದು ದೇವರ ಸ್ಮರಣೆಗೆ ಸಮ’ ಎಂದು ಗಿರೀಶ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ರಾಜಶೇಖರಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ನಗರದ ಗಿರೀಶ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ 1990–91ನೇ ಸಾಲಿನಲ್ಲಿ ಗಿರೀಶ ಪ್ರಾಥಮಿಕ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹ ಬಂಧ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ನಿವೃತ್ತಿಯ ನಂತರವೂ ಗೌರವ ಗಳಿಸಿರುವ ಏಕೈಕ ವೃತ್ತಿ ಎಂದರೆ ಗುರುಗಳದ್ದು. ಹೀಗಾಗಿಯೇ 35 ವರ್ಷಗಳ ಹಿಂದೆ ಕಲಿತವರೆಲ್ಲ ಒಟ್ಟಾಗಿ ಒಂದೆಡೆ ಸೇರಿ ಗುರುವಂದನೆ ಕಾರ್ಯಕ್ರಮ ನಡೆಸುತ್ತಿರುವುದೇ ಅದಕ್ಕೆ ನಿದರ್ಶನ. ನಿವೃತ್ತಿಯ ನಂತರವೂ ಕಲಿಸುವುದನ್ನು ಶಿಕ್ಷಕರು ಮುಂದುವರಿಸಬೇಕು’ ಎಂದು ಅವರು ಮನವಿ ಮಾಡಿದರು.</p>.<p>ಗುರುಗಳಾಗಿದ್ದ ಸಾವಿತ್ರಮ್ಮ, ರಂಗಸ್ವಾಮಿ, ಸುರೇಶ್ ಬಾಬು, ಲಿಂಗರಾಜು, ಪ್ರಕಾಶ್ ಕುಮಾರ್, ತನುಜಾ, ಜಯಂತಿ, ತಿಪ್ಪೀರಮ್ಮ, ಮುದ್ದುರಂಗಮ್ಮ ಅವರಿಗೆ ಹಳೆಯ ವದ್ಯಾರ್ಥಿಗಳು ಗೌರವ ಸಮರ್ಪಿಸಿದರು.</p>.<p>ಗಿರೀಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕಾಂತೇಶ್ವರ ಸ್ವಾಮಿ, ನಿರ್ದೇಶಕ ಬಸವರಾಜ್, ಹಳೆಯ ವಿದ್ಯಾರ್ಥಿಗಳಾದ ಎಂ.ವಿ.ದಿನೇಶ್, ನರೇಂದ್ರ, ಜಗದೀಶ್, ರಾಘವೇಂದ್ರ, ಅವಿನಾಶ್, ಧನಂಜಯ, ಖಲೀಲ್, ಚಂದ್ರಶೇಖರ್, ಕವಿತಾ, ಲತಾ, ಸೌಮ್ಯ ಲತಾ, ದೀಪಾ, ಮೀನಾಕ್ಷಿ, ರೂಪಕಲಾ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>