<p><strong>ಹೊಸದುರ್ಗ:</strong> ತಾಲ್ಲೂಕಿನ ಕಸಬಾ ಹೋಬಳಿ ಭಾಗದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಲಾಗುತ್ತದೆ. 15 ದಿನಗಳಿಂದಲೂ ತೇವಾಂಶ ಹೆಚ್ಚಾಗಿದ್ದು, ಬೆಳವಣಿಗೆ ಹಂತದಲ್ಲಿದ್ದ ಈರುಳ್ಳಿ ಬೆಳೆಗೆ ಕೊಳೆ ರೋಗ ಆವರಿಸಿದೆ. ಇದರಿಂದ ರೈತರು ಆತಂಕದಲ್ಲಿದ್ದಾರೆ.</p>.<p>ಕಳೆದ ವರ್ಷ ಈರುಳ್ಳಿಗೆ ಉತ್ತಮ ಧಾರಣೆ ಬಂದಿದ್ದರಿಂದ, ಈ ಬಾರಿ ಬಹುತೇಕ ರೈತರು ಈರುಳ್ಳಿ ಬೆಳೆಯತ್ತ ಮುಖಮಾಡಿದ್ದಾರೆ. 15 ದಿನಗಳಿಂದಲೂ ತಾಲ್ಲೂಕಿನಾದ್ಯಂತ ಜಿಟಿಜಿಟಿ ಮಳೆಯಾಗಿದೆ. ಭೂಮಿಯಲ್ಲಿ ತೇವಾಂಶ ಅಧಿಕವಾಗಿದೆ. ಬೆಳೆಯ ಮೆಲ್ಭಾಗದಲ್ಲಿ ಕೆಂಪು ಮಿಶ್ರಿತ ಕಂದು ಬಣ್ಣ ಆವರಿಸಿದೆ. </p>.<p>‘ಐದು ಎಕರೆ ಭೂಮಿಯಲ್ಲಿ ಈರುಳ್ಳಿ ಬೀಜ ಹಾಕಲಾಗಿದೆ. ಈರುಳ್ಳಿಗೆ ಕೊಳೆ ರೋಗ ಹೆಚ್ಚಾಗಿದೆ. ಬಿಸಿಲು ಬಂದರೆ ಬೆಳೆ ಸುಧಾರಿಸಬಹುದು. 15 ದಿನಗಳು ಕಳೆದರೂ ಯಾವ ಅಧಿಕಾರಿಗಳೂ ಇತ್ತ ಗಮನಹರಿಸಿಲ್ಲ. ತೋಟಗಾರಿಕೆ ಇಲಾಖೆಗೆ ಹೋದರೆ ಔಷಧಿ ಹೇಳಿ ಕಳುಹಿಸುತ್ತಾರೆ. ರೋಗ ತಗುಲಿರುವ ಈರುಳ್ಳಿ ಬೆಳೆ ತನ್ನಿ ಎನ್ನುತ್ತಾರೆ. ಒಮ್ಮೆ ಅವರು ಜಮೀನುಗಳಿಗೆ ಭೇಟಿ ನೀಡಿದರೆ ವಾಸ್ತವ ಅರಿವಾಗುತ್ತದೆ. ಗುಂಪಿನಲ್ಲಿ ರೈತರಿಗೆ ಸಲಹೆ ನೀಡಿದರೆ ಅನುಕೂಲವಾಗುತ್ತದೆ. ಇಲಾಖೆಯು ರೈತರೊಂದಿಗೆ ಸಂಪರ್ಕದಲ್ಲಿಲ್ಲ’ ಎಂದು ಬಾಗೂರಿನ ಪ್ರಗತಿಪರ ರೈತ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ತೇವಾಂಶ ಅಧಿಕವಾಗಿ, ಈರುಳ್ಳಿ ಬೆಳೆ ಮೇಲ್ಭಾಗದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕೆಲ ದಿನಗಳ ನಂತರ ಗಡ್ಡೆ ಕೆಟ್ಟು, ದುರ್ವಾಸನೆ ಬರುತ್ತದೆ. ಈ ರೋಗ ಅಧಿಕವಾದರೆ ಬೆಳೆ ಉಳಿಸಿಕೊಳ್ಳುವುದು ಕಷ್ಟ. ಇಲಾಖೆಗೆ ಬಂದು ಕೇಳಿದವರಿಗೆ ರೋಗ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದ್ದೇವೆ. ಅಗತ್ಯವಿದ್ದಲ್ಲಿ ಜಮೀನುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ’ ಎಂದು ಕಸಬಾ ತೋಟಗಾರಿಕೆ ಅಧಿಕಾರಿ ಪುಟ್ಟಣ್ಣ ಸಿ. ಹೇಳಿದರು.</p>.<p>‘ಮ್ಯಾಂಕೊಝೆಬ್ 2 ಗ್ರಾಂ ಅಥವಾ ಟೆಬುಕೋನೋಜೋಲ್ 1 ಎಂ.ಎಲ್ ಅನ್ನು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಮ್ಯಾಂಕೊಝೆಬ್ ಔಷಧಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಮಳೆಯಾಶ್ರಿತ ಈರುಳ್ಳಿ ಬೆಳೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಲು ಜುಲೈ 31 ಕೊನೆಯ ದಿನವಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ:</strong> ತಾಲ್ಲೂಕಿನ ಕಸಬಾ ಹೋಬಳಿ ಭಾಗದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಲಾಗುತ್ತದೆ. 15 ದಿನಗಳಿಂದಲೂ ತೇವಾಂಶ ಹೆಚ್ಚಾಗಿದ್ದು, ಬೆಳವಣಿಗೆ ಹಂತದಲ್ಲಿದ್ದ ಈರುಳ್ಳಿ ಬೆಳೆಗೆ ಕೊಳೆ ರೋಗ ಆವರಿಸಿದೆ. ಇದರಿಂದ ರೈತರು ಆತಂಕದಲ್ಲಿದ್ದಾರೆ.</p>.<p>ಕಳೆದ ವರ್ಷ ಈರುಳ್ಳಿಗೆ ಉತ್ತಮ ಧಾರಣೆ ಬಂದಿದ್ದರಿಂದ, ಈ ಬಾರಿ ಬಹುತೇಕ ರೈತರು ಈರುಳ್ಳಿ ಬೆಳೆಯತ್ತ ಮುಖಮಾಡಿದ್ದಾರೆ. 15 ದಿನಗಳಿಂದಲೂ ತಾಲ್ಲೂಕಿನಾದ್ಯಂತ ಜಿಟಿಜಿಟಿ ಮಳೆಯಾಗಿದೆ. ಭೂಮಿಯಲ್ಲಿ ತೇವಾಂಶ ಅಧಿಕವಾಗಿದೆ. ಬೆಳೆಯ ಮೆಲ್ಭಾಗದಲ್ಲಿ ಕೆಂಪು ಮಿಶ್ರಿತ ಕಂದು ಬಣ್ಣ ಆವರಿಸಿದೆ. </p>.<p>‘ಐದು ಎಕರೆ ಭೂಮಿಯಲ್ಲಿ ಈರುಳ್ಳಿ ಬೀಜ ಹಾಕಲಾಗಿದೆ. ಈರುಳ್ಳಿಗೆ ಕೊಳೆ ರೋಗ ಹೆಚ್ಚಾಗಿದೆ. ಬಿಸಿಲು ಬಂದರೆ ಬೆಳೆ ಸುಧಾರಿಸಬಹುದು. 15 ದಿನಗಳು ಕಳೆದರೂ ಯಾವ ಅಧಿಕಾರಿಗಳೂ ಇತ್ತ ಗಮನಹರಿಸಿಲ್ಲ. ತೋಟಗಾರಿಕೆ ಇಲಾಖೆಗೆ ಹೋದರೆ ಔಷಧಿ ಹೇಳಿ ಕಳುಹಿಸುತ್ತಾರೆ. ರೋಗ ತಗುಲಿರುವ ಈರುಳ್ಳಿ ಬೆಳೆ ತನ್ನಿ ಎನ್ನುತ್ತಾರೆ. ಒಮ್ಮೆ ಅವರು ಜಮೀನುಗಳಿಗೆ ಭೇಟಿ ನೀಡಿದರೆ ವಾಸ್ತವ ಅರಿವಾಗುತ್ತದೆ. ಗುಂಪಿನಲ್ಲಿ ರೈತರಿಗೆ ಸಲಹೆ ನೀಡಿದರೆ ಅನುಕೂಲವಾಗುತ್ತದೆ. ಇಲಾಖೆಯು ರೈತರೊಂದಿಗೆ ಸಂಪರ್ಕದಲ್ಲಿಲ್ಲ’ ಎಂದು ಬಾಗೂರಿನ ಪ್ರಗತಿಪರ ರೈತ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ತೇವಾಂಶ ಅಧಿಕವಾಗಿ, ಈರುಳ್ಳಿ ಬೆಳೆ ಮೇಲ್ಭಾಗದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕೆಲ ದಿನಗಳ ನಂತರ ಗಡ್ಡೆ ಕೆಟ್ಟು, ದುರ್ವಾಸನೆ ಬರುತ್ತದೆ. ಈ ರೋಗ ಅಧಿಕವಾದರೆ ಬೆಳೆ ಉಳಿಸಿಕೊಳ್ಳುವುದು ಕಷ್ಟ. ಇಲಾಖೆಗೆ ಬಂದು ಕೇಳಿದವರಿಗೆ ರೋಗ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದ್ದೇವೆ. ಅಗತ್ಯವಿದ್ದಲ್ಲಿ ಜಮೀನುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ’ ಎಂದು ಕಸಬಾ ತೋಟಗಾರಿಕೆ ಅಧಿಕಾರಿ ಪುಟ್ಟಣ್ಣ ಸಿ. ಹೇಳಿದರು.</p>.<p>‘ಮ್ಯಾಂಕೊಝೆಬ್ 2 ಗ್ರಾಂ ಅಥವಾ ಟೆಬುಕೋನೋಜೋಲ್ 1 ಎಂ.ಎಲ್ ಅನ್ನು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಮ್ಯಾಂಕೊಝೆಬ್ ಔಷಧಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಮಳೆಯಾಶ್ರಿತ ಈರುಳ್ಳಿ ಬೆಳೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಲು ಜುಲೈ 31 ಕೊನೆಯ ದಿನವಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>