ಪಾಳು ಕಟ್ಟಡಗಳಾದ ಆರ್ಒ ಘಟಕಗಳು ನೀರು ಪೂರೈಕೆ ಇಲ್ಲ, ವಿದ್ಯುತ್ ಬಿಲ್ ಬಾಕಿ ಕೆಟ್ಟು ಹೋದ ಯಂತ್ರಗಳು, ಬಾರದ ನೀರು
ಆರ್ಒ ಘಟಕಗಳ ನಿರ್ವಹಣೆ ಮಾಡುತ್ತಿದ್ದ ಏಜೆನ್ಸಿಗಳ ಅವಧಿ ಮುಗಿದಿದೆ. ಮುಂದೆ ಅವುಗಳ ನಿರ್ವಹಣೆ ಕುರಿತಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗಿದೆ.ದಯಾನಂದ್ ಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ದುರಸ್ತಿ ಇಲ್ಲದೇ ಕೆಲ ಆರ್ಒ ಘಟಕಗಳು ಪಾಳು ಬಿದ್ದಿವೆ. ಇನ್ನು ಕೆಲವು ಅನೈತಿಕ ಚಟುವಟಿಕೆಯ ಕೇಂದ್ರವಾಗಿ ಮಾರ್ಪಟ್ಟಿವೆ. ಸರ್ಕಾರ ವೆಚ್ಚ ಮಾಡಿದ ಲಕ್ಷಾಂತರ ರೂಪಾಯಿ ಹೊಳೆಯಲ್ಲಿ ಹಾಕಿದಂತಾಗಿದೆ.ನಿಂಗಮ್ಮ ಚಳ್ಳಕೆರೆ
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶೇ 40ಕ್ಕೂ ಹೆಚ್ಚು ಘಟಕಗಳು ಕೆಟ್ಟು ನಿಂತಿವೆ. ಉಪ್ಪಿನಾಂಶ ಹೆಚ್ಚು ನೀರು ಇರುವುದರಿಂದ ಫಿಲ್ಟರ್ಗಳು ಬೇಗ ಹಾಳಾಗುತ್ತಿದ್ದು ಗುಣಮಟ್ಟದ ಸಾಮಗ್ರಿ ಬಳಸದಿರುವುದು ಘಟಕಗಳು ಹಾಳಾಗಲು ಕಾರಣ.ರವಿಕುಮಾರ್ ಮೊಳಕಾಲ್ಮುರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.