<p><strong>ಹಿರಿಯೂರು:</strong> ರಸ್ತೆ ಅವ್ಯವಸ್ಥೆ ಖಂಡಿಸಿ ತಾಲ್ಲೂಕಿನ ಸೂರಪ್ಪನಹಟ್ಟಿಯ ಗ್ರಾಮಸ್ಥರು ಊರಿನ ರಸ್ತೆಯ ಕೆಸರಿನಲ್ಲಿ ಶನಿವಾರ ಹೂವು, ತರಕಾರಿ, ಸೊಪ್ಪಿನ ಸಸಿ ನೆಟ್ಟು ಪ್ರತಿಭಟನೆ ನಡೆಸಿದರು.</p>.<p>‘ನಮ್ಮೂರಿಗೆ ಚರಂಡಿ ಹಾಗೂ ಮನುಷ್ಯರು ಓಡಾಡಲು ಸಾಧ್ಯವಾಗುವಂತಹ ರಸ್ತೆ ನಿರ್ಮಿಸಿಕೊಡಿ ಎಂದು ನಲವತ್ತು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ, ಬೇಡಿಕೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಮಳೆಗಾಲದಲ್ಲಿ ಊರಿನಲ್ಲಿ ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗಲು ಆಗದಷ್ಟು ರಸ್ತೆ ಕೆಸರಾಗುತ್ತದೆ. ಡೆಂಗಿ ಹೆಚ್ಚುತ್ತಿರುವ ಕಾರಣ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಆರೋಗ್ಯ ಇಲಾಖೆಯವರು ಕರಪತ್ರ ಹಂಚಿ ತಮ್ಮ ಕೆಲಸ ಮುಗಿಯಿತು ಎಂದು ಹೋಗುತ್ತಾರೆ. ನಮ್ಮೂರಿನಲ್ಲಿ ಚರಂಡಿಯೇ ಇಲ್ಲದ ಕಾರಣ ಮಳೆಗಾಲದಲ್ಲಿ ತಿಂಗಳುಗಟ್ಟಲೆ ಮಳೆಯ ನೀರು, ಮನೆಯ ತ್ಯಾಜ್ಯ ರಸ್ತೆಯಲ್ಲಿಯೇ ನಿಲ್ಲುತ್ತದೆ. ಈ ಜಾಗ ಸೊಳ್ಳೆಗಳ ಕಾರ್ಖಾನೆಯಾಗಿದೆ’ ಎಂದು ಗ್ರಾಮದ ಯುವಕ ಕೃಷ್ಣ ಆರೋಪಿಸಿದರು.</p>.<p>‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವುದೇ ಯೋಜನೆಗಳು ನಮ್ಮೂರಿಗೆ ಲಭಿಸುತ್ತಿಲ್ಲ. ನಮ್ಮ ಊರು ನಮ್ಮ ರಸ್ತೆ, ನಮ್ಮ ಹೊಲ ನಮ್ಮ ರಸ್ತೆ, ಸ್ವಚ್ಛ ಗ್ರಾಮ, ಬಹುಗ್ರಾಮ ಕುಡಿಯುವ ನೀರು ಒಳಗೊಂಡಂತೆ ಯಾವುದೇ ಯೋಜನೆಗಳು ನಮ್ಮೂರಿನತ್ತ ಸುಳಿದಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ನಾವು ಅನುಭವಿಸುವ ಯಾತನೆ ನಮ್ಮ ಶತ್ರುಗಳಿಗೂ ಬರುವುದು ಬೇಡ. ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಬದುಕಿದೆಯಾ? ಎಂಬ ಅನುಮಾನ ಕಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಸ್ತೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಮಾಡಿದ್ದೇವೆ. ತಾಲ್ಲೂಕು ಆಡಳಿತ ಎಚ್ಚೆತ್ತು ಸೂರಪ್ಪನಹಟ್ಟಿಗೆ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರು ಒದಗಿಸಬೇಕು’ ಎಂದು ಮುಖಂಡರಾದ ಶಶಿ ಕುಮಾರ್, ಈಶ್ವರ್, ರವಿ, ಕೃಷ್ಣಪ್ಪ, ಯರಪ್ಪ, ಚಿಕ್ಕಣ್ಣ, ವಿಜಯಕುಮಾರ್, ವಿಜಿ, ಚಿತ್ತಪ್ಪ, ಕಾಂತರಾಜ್, ಮಂಜು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ರಸ್ತೆ ಅವ್ಯವಸ್ಥೆ ಖಂಡಿಸಿ ತಾಲ್ಲೂಕಿನ ಸೂರಪ್ಪನಹಟ್ಟಿಯ ಗ್ರಾಮಸ್ಥರು ಊರಿನ ರಸ್ತೆಯ ಕೆಸರಿನಲ್ಲಿ ಶನಿವಾರ ಹೂವು, ತರಕಾರಿ, ಸೊಪ್ಪಿನ ಸಸಿ ನೆಟ್ಟು ಪ್ರತಿಭಟನೆ ನಡೆಸಿದರು.</p>.<p>‘ನಮ್ಮೂರಿಗೆ ಚರಂಡಿ ಹಾಗೂ ಮನುಷ್ಯರು ಓಡಾಡಲು ಸಾಧ್ಯವಾಗುವಂತಹ ರಸ್ತೆ ನಿರ್ಮಿಸಿಕೊಡಿ ಎಂದು ನಲವತ್ತು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ, ಬೇಡಿಕೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಮಳೆಗಾಲದಲ್ಲಿ ಊರಿನಲ್ಲಿ ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗಲು ಆಗದಷ್ಟು ರಸ್ತೆ ಕೆಸರಾಗುತ್ತದೆ. ಡೆಂಗಿ ಹೆಚ್ಚುತ್ತಿರುವ ಕಾರಣ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಆರೋಗ್ಯ ಇಲಾಖೆಯವರು ಕರಪತ್ರ ಹಂಚಿ ತಮ್ಮ ಕೆಲಸ ಮುಗಿಯಿತು ಎಂದು ಹೋಗುತ್ತಾರೆ. ನಮ್ಮೂರಿನಲ್ಲಿ ಚರಂಡಿಯೇ ಇಲ್ಲದ ಕಾರಣ ಮಳೆಗಾಲದಲ್ಲಿ ತಿಂಗಳುಗಟ್ಟಲೆ ಮಳೆಯ ನೀರು, ಮನೆಯ ತ್ಯಾಜ್ಯ ರಸ್ತೆಯಲ್ಲಿಯೇ ನಿಲ್ಲುತ್ತದೆ. ಈ ಜಾಗ ಸೊಳ್ಳೆಗಳ ಕಾರ್ಖಾನೆಯಾಗಿದೆ’ ಎಂದು ಗ್ರಾಮದ ಯುವಕ ಕೃಷ್ಣ ಆರೋಪಿಸಿದರು.</p>.<p>‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವುದೇ ಯೋಜನೆಗಳು ನಮ್ಮೂರಿಗೆ ಲಭಿಸುತ್ತಿಲ್ಲ. ನಮ್ಮ ಊರು ನಮ್ಮ ರಸ್ತೆ, ನಮ್ಮ ಹೊಲ ನಮ್ಮ ರಸ್ತೆ, ಸ್ವಚ್ಛ ಗ್ರಾಮ, ಬಹುಗ್ರಾಮ ಕುಡಿಯುವ ನೀರು ಒಳಗೊಂಡಂತೆ ಯಾವುದೇ ಯೋಜನೆಗಳು ನಮ್ಮೂರಿನತ್ತ ಸುಳಿದಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ನಾವು ಅನುಭವಿಸುವ ಯಾತನೆ ನಮ್ಮ ಶತ್ರುಗಳಿಗೂ ಬರುವುದು ಬೇಡ. ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಬದುಕಿದೆಯಾ? ಎಂಬ ಅನುಮಾನ ಕಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಸ್ತೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಮಾಡಿದ್ದೇವೆ. ತಾಲ್ಲೂಕು ಆಡಳಿತ ಎಚ್ಚೆತ್ತು ಸೂರಪ್ಪನಹಟ್ಟಿಗೆ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರು ಒದಗಿಸಬೇಕು’ ಎಂದು ಮುಖಂಡರಾದ ಶಶಿ ಕುಮಾರ್, ಈಶ್ವರ್, ರವಿ, ಕೃಷ್ಣಪ್ಪ, ಯರಪ್ಪ, ಚಿಕ್ಕಣ್ಣ, ವಿಜಯಕುಮಾರ್, ವಿಜಿ, ಚಿತ್ತಪ್ಪ, ಕಾಂತರಾಜ್, ಮಂಜು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>