<p><strong>ಪರಶುರಾಂಪುರ:</strong> ಪರಶುರಾಂಪುರದ ಹಳೆಕೆರೆ ಕೋಡಿಯ ನೀರು ಹರಿಯುವ ಕಾಲುವೆಗೆ ಸೇತುವೆ ನಿರ್ಮಿಸಲು ರಸ್ತೆಯಲ್ಲಿ ಗುಂಡಿ ತೆಗೆದು 2 ತಿಂಗಳು ಕಳೆದರೂ ಕಾಮಗಾರಿ ಆರಂಭಿಸದೆ ವಿಳಂಬ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. </p>.<p>ಅಂತರ ರಾಜ್ಯ ಮತ್ತು ತುಮಕೂರು ಜಿಲ್ಲೆಯನ್ನು ಸಂಪರ್ಕಿಸುವ ಚಿತ್ರದುರ್ಗ ಮತ್ತು ಪಾವಗಡದ ಮುಖ್ಯರಸ್ತೆಯಲ್ಲಿ ಸೇತುವೆ ನಿರ್ಮಿಸಲು ಗುಂಡಿ ತೆಗೆದಿದ್ದು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.</p>.<p>‘ವಾಹನಗಳು ಓಡಾಡಲು ಪಕ್ಕದಲ್ಲಿ ಮಣ್ಣಿನಿಂದ ತಾತ್ಕಲಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದು, ಅಕ್ಕ ಪಕ್ಕದ ಮನೆಗಳಿಗೆ ದೂಳು ರಾಚುತ್ತಿದೆ. ಇದರಿಂದ ಊಟ ಮಾಡುವುದೂ ಕಷ್ಟವಾಗಿದೆ’ ಎಂದು ಇಲ್ಲಿನ ನಿವಾಸಿಗಳಾದ ಲೋಕೇಶ್, ನಾಗೇಶ್, ರಾಧಸ್ವಾಮಿ, ಜಂಪಣ್ಣ, ರುದ್ರಣ್ಣ ಅಳಲು ತೋಡಿಕೊಂಡರು.</p>.<p>‘ಆಂಧ್ರಪ್ರದೇಶ ಮತ್ತು ತುಮಕೂರು ಕಡೆ ಓಡಾಡುವ ವಾಹನಗಳಿಗೆ ಇದೊಂದೇ ಮಾರ್ಗವಾಗಿರುವುದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ರಸ್ತೆ ಆಸುಪಾಸಿನ ಮನೆಯವರಿಗೆ ದೂಳಿನಿಂದ ತೊಂದರೆ ಉಂಟಾಗುತ್ತಿದೆ. ಹಲವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ಇಲ್ಲವೇ ಸರ್ವೀಸ್ ರಸ್ತೆಯನ್ನು ತೆರವು ಗೊಳಿಸಬೇಕು’ ಎಂಬುದು ಇಲ್ಲಿನ ನಿವಾಸಿ ಒತ್ತಾಯವಾಗಿದೆ.</p>.<p>₹ 2 ಕೋಟಿ ವೆಚ್ಚದಲ್ಲಿ ಇದೇ ರಸ್ತೆಯಲ್ಲಿ ಗೌರಿಪುರದ ಹತ್ತಿರ ಮತ್ತು ಪರಶುರಾಂಪುರದ ಹತ್ತಿರ ಎರಡು ಸೇತುವೆಗಳನ್ನು ನಿರ್ಮಿಸಲು ಯೋಜನಾ ವರದಿಯನ್ನು ತಯಾರಿಸಲಾಗಿತ್ತು. ಆದರೆ ಸೇತುವೆ ಜಾಗದ ಮಣ್ಣು ಪರೀಕ್ಷೆ ಮಾಡಿಸಿದ ನಂತರ ಒಂದೊಂದು ಸೇತುವೆಗೆ ₹ 2 ಕೊಟಿ ಬೇಕಾಗುತ್ತದೆ. ಆದ್ದರಿಂದ ಮತ್ತೊಂದು ಭಾರಿ ಯೋಜನಾ ವರದಿ ತಯಾರಿಸಿ ನಂತರ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ. ಈ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ರಾಜಪ್ಪ.</p>.<div><blockquote>ಕಾಮಗಾರಿ ವಿಳಂಬವಾದರೂ ಪರವಾಗಿಲ್ಲ. ಆದರೆ ಸರ್ವೀಸ್ ರಸ್ತೆಗೆ ದಿನಕ್ಕೆ ಎರಡು ಭಾರಿ ನೀರು ಹಾಕಿದರೆ ದೂಳು ಕಡಿಮೆಯಾಗುತ್ತದೆ. ಆ ಕೆಲಸವನ್ನಾದರೂ ಮಾಡಲಿ. </blockquote><span class="attribution">- ಲೋಕೇಶ್, ಸ್ಥಳಿಯ ನಿವಾಸಿ </span></div>.<div><blockquote>ಕಾಮಗಾರಿ ಪ್ರಾರಂಭಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ಆದರೆ ಯೋಜನಾ ವರದಿ ಬದಲಾಗಿದೆ ಎಂದು ಎಂಜಿನಿಯರ್ ತಿಳಿಸಿದ್ದರಿಂದ ವಿಳಂಬವಾಗಿದೆ.</blockquote><span class="attribution">- ಹನುಮಂತಪ್ಪ, ಗುತ್ತಿಗೆದಾರರು ಚಳ್ಳಕೆರೆ </span></div>.<div><blockquote>ಗುತ್ತಿಗೆದಾರರಿಗೆ ಹೇಳಿ ಕಾಮಗಾರಿ ಆರಂಭವಾಗುವವರೆಗೂ ಸರ್ವೀಸ್ ರಸ್ತೆಗೆ ನೀರು ಹಾಕಲು ಸೂಚಿಸುತ್ತೇವೆ. </blockquote><span class="attribution">- ರಾಜಪ್ಪ, ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಚಳ್ಳಕೆರೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪರಶುರಾಂಪುರ:</strong> ಪರಶುರಾಂಪುರದ ಹಳೆಕೆರೆ ಕೋಡಿಯ ನೀರು ಹರಿಯುವ ಕಾಲುವೆಗೆ ಸೇತುವೆ ನಿರ್ಮಿಸಲು ರಸ್ತೆಯಲ್ಲಿ ಗುಂಡಿ ತೆಗೆದು 2 ತಿಂಗಳು ಕಳೆದರೂ ಕಾಮಗಾರಿ ಆರಂಭಿಸದೆ ವಿಳಂಬ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. </p>.<p>ಅಂತರ ರಾಜ್ಯ ಮತ್ತು ತುಮಕೂರು ಜಿಲ್ಲೆಯನ್ನು ಸಂಪರ್ಕಿಸುವ ಚಿತ್ರದುರ್ಗ ಮತ್ತು ಪಾವಗಡದ ಮುಖ್ಯರಸ್ತೆಯಲ್ಲಿ ಸೇತುವೆ ನಿರ್ಮಿಸಲು ಗುಂಡಿ ತೆಗೆದಿದ್ದು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.</p>.<p>‘ವಾಹನಗಳು ಓಡಾಡಲು ಪಕ್ಕದಲ್ಲಿ ಮಣ್ಣಿನಿಂದ ತಾತ್ಕಲಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದು, ಅಕ್ಕ ಪಕ್ಕದ ಮನೆಗಳಿಗೆ ದೂಳು ರಾಚುತ್ತಿದೆ. ಇದರಿಂದ ಊಟ ಮಾಡುವುದೂ ಕಷ್ಟವಾಗಿದೆ’ ಎಂದು ಇಲ್ಲಿನ ನಿವಾಸಿಗಳಾದ ಲೋಕೇಶ್, ನಾಗೇಶ್, ರಾಧಸ್ವಾಮಿ, ಜಂಪಣ್ಣ, ರುದ್ರಣ್ಣ ಅಳಲು ತೋಡಿಕೊಂಡರು.</p>.<p>‘ಆಂಧ್ರಪ್ರದೇಶ ಮತ್ತು ತುಮಕೂರು ಕಡೆ ಓಡಾಡುವ ವಾಹನಗಳಿಗೆ ಇದೊಂದೇ ಮಾರ್ಗವಾಗಿರುವುದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ರಸ್ತೆ ಆಸುಪಾಸಿನ ಮನೆಯವರಿಗೆ ದೂಳಿನಿಂದ ತೊಂದರೆ ಉಂಟಾಗುತ್ತಿದೆ. ಹಲವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ಇಲ್ಲವೇ ಸರ್ವೀಸ್ ರಸ್ತೆಯನ್ನು ತೆರವು ಗೊಳಿಸಬೇಕು’ ಎಂಬುದು ಇಲ್ಲಿನ ನಿವಾಸಿ ಒತ್ತಾಯವಾಗಿದೆ.</p>.<p>₹ 2 ಕೋಟಿ ವೆಚ್ಚದಲ್ಲಿ ಇದೇ ರಸ್ತೆಯಲ್ಲಿ ಗೌರಿಪುರದ ಹತ್ತಿರ ಮತ್ತು ಪರಶುರಾಂಪುರದ ಹತ್ತಿರ ಎರಡು ಸೇತುವೆಗಳನ್ನು ನಿರ್ಮಿಸಲು ಯೋಜನಾ ವರದಿಯನ್ನು ತಯಾರಿಸಲಾಗಿತ್ತು. ಆದರೆ ಸೇತುವೆ ಜಾಗದ ಮಣ್ಣು ಪರೀಕ್ಷೆ ಮಾಡಿಸಿದ ನಂತರ ಒಂದೊಂದು ಸೇತುವೆಗೆ ₹ 2 ಕೊಟಿ ಬೇಕಾಗುತ್ತದೆ. ಆದ್ದರಿಂದ ಮತ್ತೊಂದು ಭಾರಿ ಯೋಜನಾ ವರದಿ ತಯಾರಿಸಿ ನಂತರ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ. ಈ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ರಾಜಪ್ಪ.</p>.<div><blockquote>ಕಾಮಗಾರಿ ವಿಳಂಬವಾದರೂ ಪರವಾಗಿಲ್ಲ. ಆದರೆ ಸರ್ವೀಸ್ ರಸ್ತೆಗೆ ದಿನಕ್ಕೆ ಎರಡು ಭಾರಿ ನೀರು ಹಾಕಿದರೆ ದೂಳು ಕಡಿಮೆಯಾಗುತ್ತದೆ. ಆ ಕೆಲಸವನ್ನಾದರೂ ಮಾಡಲಿ. </blockquote><span class="attribution">- ಲೋಕೇಶ್, ಸ್ಥಳಿಯ ನಿವಾಸಿ </span></div>.<div><blockquote>ಕಾಮಗಾರಿ ಪ್ರಾರಂಭಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ಆದರೆ ಯೋಜನಾ ವರದಿ ಬದಲಾಗಿದೆ ಎಂದು ಎಂಜಿನಿಯರ್ ತಿಳಿಸಿದ್ದರಿಂದ ವಿಳಂಬವಾಗಿದೆ.</blockquote><span class="attribution">- ಹನುಮಂತಪ್ಪ, ಗುತ್ತಿಗೆದಾರರು ಚಳ್ಳಕೆರೆ </span></div>.<div><blockquote>ಗುತ್ತಿಗೆದಾರರಿಗೆ ಹೇಳಿ ಕಾಮಗಾರಿ ಆರಂಭವಾಗುವವರೆಗೂ ಸರ್ವೀಸ್ ರಸ್ತೆಗೆ ನೀರು ಹಾಕಲು ಸೂಚಿಸುತ್ತೇವೆ. </blockquote><span class="attribution">- ರಾಜಪ್ಪ, ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಚಳ್ಳಕೆರೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>