<p><strong>ಮಂಗಳೂರು</strong>: ‘ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ₹ 310 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಪಶ್ಚಿಮದ ಮುಖ್ಯ ದ್ವಾರದ ಜೊತೆ ಅತ್ತಾವರ ಕಡೆಯಿಂದ ಇನ್ನೊಂದು ಪ್ರವೇಶ ದ್ವಾರವನ್ನು ನಿರ್ಮಿಸಲಾಗುತ್ತದೆ’ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರುಣ ಕುಮಾರ್ ಚತುರ್ವೇದಿ ತಿಳಿಸಿದರು.</p>.<p>ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ದಕ್ಷಿಣ ರೈಲ್ವೆ, ನೈರುತ್ಯ ರೈಲ್ವೆ ಹಾಗೂ ಕೊಂಕಣ ರೈಲ್ವೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ನಡುವೆ ಸಮನ್ವಯ ಸಾಧಿಸಲು ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ರೈಲ್ವೆ ವಸತಿಗಳನ್ನು ಕೆಡವಿ, ಅಲ್ಲಿ 16,632 ಚ.ಮೀ ಜಾಗದಲ್ಲಿ 1200 ಕಾರುಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. 2ನೇ ಪ್ರವೇಶ ದ್ವಾರದಲ್ಲೂ ಟಿಕೆಟ್ ವಿತರಣೆ ಹಾಗೂ ತಪಾಸಣಾ ಸೌಲಭ್ಯವಿರಲಿದೆ. ಅಲ್ಲಿಂದ ಪ್ಲ್ಯಾಟ್ಫಾರಂಗಳಿಗೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗುತ್ತದೆ’ ಎಂದು ವಿವರಿಸಿದರು. </p>.<p>‘ಇಷ್ಟೆಲ್ಲ ವೆಚ್ಚ ಮಾಡಿ ಹೆಚ್ಚುವರಿ ಫ್ಲ್ಯಾಟ್ಫಾರಂ ನಿರ್ಮಿಸದಿದ್ದರೆ ಹೇಗೆ’ ಎಂದು ರೈಲ್ವೆ ಹೋರಾಟಗಾರ ಹನುಮಂತ ಕಾಮತ್ ಪ್ರಶ್ನಿಸಿದರು. ‘ಅದಕ್ಕೆ ಜಾಗ ಇಲ್ಲ’ ಎಂದು ಡಿಆರ್ಎಂ ಉತ್ತರಿಸಿದರು.</p>.<p>ನಿಲ್ದಾಣ ಅಭಿವೃದ್ಧಿಗೆ ಇಲಾಖೆ ನಾಲ್ಕು ಪ್ರತ್ಯೇಕ ವಿನ್ಯಾಸಗಳನ್ನು ರೂಪಿಸಿದೆ. ಅವುಗಳಲ್ಲಿ ನಗರದ ‘ಗಡಿಯಾರ ಗೋಪುರ’ವನ್ನು ಹೋಲುವ ನೀಲನಕ್ಷೆಯನ್ನು ಅಂತಿಮಗೊಳಿಸಬಹುದು ಎಂದು ಕ್ಯಾ.ಚೌಟ ಸಲಹೆ ನೀಡಿದರು.</p>.<p>‘ಪಾಂಡೇಶ್ವರ– ಸ್ಟೇಟ್ಬ್ಯಾಂಕ್ ನಡುವಿನ ಲೆವೆಲ್ ಕ್ರಾಸಿಂಗ್ನಲ್ಲಿ ಸಾರ್ವಜನಿಕ ವಾಹನಗಳ ಕಾಯುವ ಸಮಯ ಕಡಿತಗೊಳಿಸಲು ಕ್ರಮವಹಿಸುತ್ತೇವೆ. ನಗರದ 15 ಕಡೆ ರೈಲ್ವೆ ಆಸ್ತಿಗಳ ಬಳಿ ಪಾಲಿಕೆ ಕೈಗೆತ್ತಿಕೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ತ್ವರಿತವಾಗಿ ಅನುಮತಿ ನೀಡುತ್ತೇವೆ’ ಎಂದು ಚತುರ್ವೇದಿ ಭರವಸೆ ನೀಡಿದರು. </p>.<p>ಜಪ್ಪು– ಮಹಾಕಾಳಿ ಪಡ್ಪು ಕೆಳಸೇತುವೆ ನಿರ್ಮಾಣ ಸಂಕೀರ್ಣ ಕಾಮಗಾರಿ. ಇಲ್ಲಿ ನಾಳ್ಕು ಹಳಿಗಳು ಹಾದು ಹೋಗುತ್ತವೆ. ಕಾಂಕ್ರೀಟ್ ಬಾಕ್ಸ್ ರೂಪಿಸಲು ಪಾಲಿಕೆ ತಾತ್ಕಾಲಿಕವಾಗಿ 500 ಚ.ಮೀ ಜಾಗವನ್ನು ಒದಗಿಸಿದರೆ 2025ರ ಜನವರಿಯೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದರು. </p>.<p>ಜಾಗ ಒದಗಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಸೂಚಿಸಿದರು.</p>.<p>‘ಸುಬ್ರಹ್ಮಣ್ಯ ರೋಡ್ ನಿಲ್ದಾಣದ ಸ್ಟೇಬಲಿಂಗ್ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡ ಬಳಿಕ ಸುಬ್ರಹ್ಮಣ್ಯ ರೋಡ್– ಮಂಗಳೂರು ನಡುವೆ ನೇರ ರೈಲು ಸೇವೆ ಆರಂಭಿಸುತ್ತೇವೆ’ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಅಧಿಕಾರಿ ವಿಜಯಾ ತಿಳಿಸಿದರು.</p>.<p>‘ಜಿಲ್ಲೆಯ ರೈಲ್ವೆ ಕಾಮಗಾರಿಗಳ ಸಮನ್ವಯಕ್ಕೆ ಮೂರೂ ವಲಯಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಳಗಿಂಡ ಸಮಿತಿ ರಚಿಸಿದ್ದೇವೆ. ಈ ಸಮಿತಿ ಮೂರು ತಿಂಗಳಿಗೊಮ್ಮೆಸಭೆ ನಡೆಸಲಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ‘ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ₹ 310 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಪಶ್ಚಿಮದ ಮುಖ್ಯ ದ್ವಾರದ ಜೊತೆ ಅತ್ತಾವರ ಕಡೆಯಿಂದ ಇನ್ನೊಂದು ಪ್ರವೇಶ ದ್ವಾರವನ್ನು ನಿರ್ಮಿಸಲಾಗುತ್ತದೆ’ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರುಣ ಕುಮಾರ್ ಚತುರ್ವೇದಿ ತಿಳಿಸಿದರು.</p>.<p>ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ದಕ್ಷಿಣ ರೈಲ್ವೆ, ನೈರುತ್ಯ ರೈಲ್ವೆ ಹಾಗೂ ಕೊಂಕಣ ರೈಲ್ವೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ನಡುವೆ ಸಮನ್ವಯ ಸಾಧಿಸಲು ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ರೈಲ್ವೆ ವಸತಿಗಳನ್ನು ಕೆಡವಿ, ಅಲ್ಲಿ 16,632 ಚ.ಮೀ ಜಾಗದಲ್ಲಿ 1200 ಕಾರುಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. 2ನೇ ಪ್ರವೇಶ ದ್ವಾರದಲ್ಲೂ ಟಿಕೆಟ್ ವಿತರಣೆ ಹಾಗೂ ತಪಾಸಣಾ ಸೌಲಭ್ಯವಿರಲಿದೆ. ಅಲ್ಲಿಂದ ಪ್ಲ್ಯಾಟ್ಫಾರಂಗಳಿಗೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗುತ್ತದೆ’ ಎಂದು ವಿವರಿಸಿದರು. </p>.<p>‘ಇಷ್ಟೆಲ್ಲ ವೆಚ್ಚ ಮಾಡಿ ಹೆಚ್ಚುವರಿ ಫ್ಲ್ಯಾಟ್ಫಾರಂ ನಿರ್ಮಿಸದಿದ್ದರೆ ಹೇಗೆ’ ಎಂದು ರೈಲ್ವೆ ಹೋರಾಟಗಾರ ಹನುಮಂತ ಕಾಮತ್ ಪ್ರಶ್ನಿಸಿದರು. ‘ಅದಕ್ಕೆ ಜಾಗ ಇಲ್ಲ’ ಎಂದು ಡಿಆರ್ಎಂ ಉತ್ತರಿಸಿದರು.</p>.<p>ನಿಲ್ದಾಣ ಅಭಿವೃದ್ಧಿಗೆ ಇಲಾಖೆ ನಾಲ್ಕು ಪ್ರತ್ಯೇಕ ವಿನ್ಯಾಸಗಳನ್ನು ರೂಪಿಸಿದೆ. ಅವುಗಳಲ್ಲಿ ನಗರದ ‘ಗಡಿಯಾರ ಗೋಪುರ’ವನ್ನು ಹೋಲುವ ನೀಲನಕ್ಷೆಯನ್ನು ಅಂತಿಮಗೊಳಿಸಬಹುದು ಎಂದು ಕ್ಯಾ.ಚೌಟ ಸಲಹೆ ನೀಡಿದರು.</p>.<p>‘ಪಾಂಡೇಶ್ವರ– ಸ್ಟೇಟ್ಬ್ಯಾಂಕ್ ನಡುವಿನ ಲೆವೆಲ್ ಕ್ರಾಸಿಂಗ್ನಲ್ಲಿ ಸಾರ್ವಜನಿಕ ವಾಹನಗಳ ಕಾಯುವ ಸಮಯ ಕಡಿತಗೊಳಿಸಲು ಕ್ರಮವಹಿಸುತ್ತೇವೆ. ನಗರದ 15 ಕಡೆ ರೈಲ್ವೆ ಆಸ್ತಿಗಳ ಬಳಿ ಪಾಲಿಕೆ ಕೈಗೆತ್ತಿಕೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ತ್ವರಿತವಾಗಿ ಅನುಮತಿ ನೀಡುತ್ತೇವೆ’ ಎಂದು ಚತುರ್ವೇದಿ ಭರವಸೆ ನೀಡಿದರು. </p>.<p>ಜಪ್ಪು– ಮಹಾಕಾಳಿ ಪಡ್ಪು ಕೆಳಸೇತುವೆ ನಿರ್ಮಾಣ ಸಂಕೀರ್ಣ ಕಾಮಗಾರಿ. ಇಲ್ಲಿ ನಾಳ್ಕು ಹಳಿಗಳು ಹಾದು ಹೋಗುತ್ತವೆ. ಕಾಂಕ್ರೀಟ್ ಬಾಕ್ಸ್ ರೂಪಿಸಲು ಪಾಲಿಕೆ ತಾತ್ಕಾಲಿಕವಾಗಿ 500 ಚ.ಮೀ ಜಾಗವನ್ನು ಒದಗಿಸಿದರೆ 2025ರ ಜನವರಿಯೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದರು. </p>.<p>ಜಾಗ ಒದಗಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಸೂಚಿಸಿದರು.</p>.<p>‘ಸುಬ್ರಹ್ಮಣ್ಯ ರೋಡ್ ನಿಲ್ದಾಣದ ಸ್ಟೇಬಲಿಂಗ್ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡ ಬಳಿಕ ಸುಬ್ರಹ್ಮಣ್ಯ ರೋಡ್– ಮಂಗಳೂರು ನಡುವೆ ನೇರ ರೈಲು ಸೇವೆ ಆರಂಭಿಸುತ್ತೇವೆ’ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಅಧಿಕಾರಿ ವಿಜಯಾ ತಿಳಿಸಿದರು.</p>.<p>‘ಜಿಲ್ಲೆಯ ರೈಲ್ವೆ ಕಾಮಗಾರಿಗಳ ಸಮನ್ವಯಕ್ಕೆ ಮೂರೂ ವಲಯಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಳಗಿಂಡ ಸಮಿತಿ ರಚಿಸಿದ್ದೇವೆ. ಈ ಸಮಿತಿ ಮೂರು ತಿಂಗಳಿಗೊಮ್ಮೆಸಭೆ ನಡೆಸಲಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>