<p><strong>ಬದಿಯಡ್ಕ:</strong> ಎಣ್ಮಕಜೆ ಗ್ರಾಮ ಪಂಚಾಯಿತಿಗೆ ಸೇರಿದ, ಉಕ್ಕಿನಡ್ಕದಲ್ಲಿ ಇರುವ ಸರ್ಕಾರಿ ಸ್ಥಳಗಳನ್ನು ಗ್ರಾಮಾಧಿಕಾರಿಯು ಲಂಚದ ಅಮಿಷದಿಂದ ಅನರ್ಹರ ಹೆಸರಿನಲ್ಲಿ ದಾಖಲೆ ತಯಾರಿಸುತ್ತಿದ್ದ ಬಗ್ಗೆ ಮಂಜೇಶ್ವರ ತಾಲ್ಲೂಕಿನ ಭೂ ಹಂಚಿಕೆ ಸಭೆಗೆ ಫಲಾನುಭವಿಗಳು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರಿಂದ ಉಪ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.</p>.<p>ಸಭೆಗೆ ಮುತ್ತಿಗೆ ಹಾಕಿದ್ದ ವೇಳೆ ಶಾಸಕರ ಸಹಿತ ಸ್ಥಳದಲ್ಲಿದ್ದ ಜನಪ್ರತಿನಿಧಿಗಳು ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರು.</p>.<p>ಮಂಜೇಶ್ಚರದ ಉಪ ತಹಶೀಲ್ದಾರ್ ಶ್ರೀಜಿತ್, ಪೆರ್ಲ ಗ್ರಾಮಾಧಿಕಾರಿ ಹಮೀದ್ ಮತ್ತು ತಂಡ ಸ್ಥಳ ಪರಿಶೀಲನೆ ಮಾಡಿದ್ದಾರೆ. ಹೈಕೋರ್ಟ್ ಆದೇಶ ಹೊರಡಿಸುವವರೆಗೆ ವಿವಾದಿತ ಸ್ಥಳದಲ್ಲಿ ಭೂಮಿ ಹಂಚಿಕೆಯನ್ನು ತಡೆ ಹಿಡಿಯುವಂತೆ ಎಣ್ಮಕಜೆ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಸಮ್ಮುಖದಲ್ಲಿ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬದಿಯಡ್ಕ:</strong> ಎಣ್ಮಕಜೆ ಗ್ರಾಮ ಪಂಚಾಯಿತಿಗೆ ಸೇರಿದ, ಉಕ್ಕಿನಡ್ಕದಲ್ಲಿ ಇರುವ ಸರ್ಕಾರಿ ಸ್ಥಳಗಳನ್ನು ಗ್ರಾಮಾಧಿಕಾರಿಯು ಲಂಚದ ಅಮಿಷದಿಂದ ಅನರ್ಹರ ಹೆಸರಿನಲ್ಲಿ ದಾಖಲೆ ತಯಾರಿಸುತ್ತಿದ್ದ ಬಗ್ಗೆ ಮಂಜೇಶ್ವರ ತಾಲ್ಲೂಕಿನ ಭೂ ಹಂಚಿಕೆ ಸಭೆಗೆ ಫಲಾನುಭವಿಗಳು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರಿಂದ ಉಪ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.</p>.<p>ಸಭೆಗೆ ಮುತ್ತಿಗೆ ಹಾಕಿದ್ದ ವೇಳೆ ಶಾಸಕರ ಸಹಿತ ಸ್ಥಳದಲ್ಲಿದ್ದ ಜನಪ್ರತಿನಿಧಿಗಳು ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರು.</p>.<p>ಮಂಜೇಶ್ಚರದ ಉಪ ತಹಶೀಲ್ದಾರ್ ಶ್ರೀಜಿತ್, ಪೆರ್ಲ ಗ್ರಾಮಾಧಿಕಾರಿ ಹಮೀದ್ ಮತ್ತು ತಂಡ ಸ್ಥಳ ಪರಿಶೀಲನೆ ಮಾಡಿದ್ದಾರೆ. ಹೈಕೋರ್ಟ್ ಆದೇಶ ಹೊರಡಿಸುವವರೆಗೆ ವಿವಾದಿತ ಸ್ಥಳದಲ್ಲಿ ಭೂಮಿ ಹಂಚಿಕೆಯನ್ನು ತಡೆ ಹಿಡಿಯುವಂತೆ ಎಣ್ಮಕಜೆ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಸಮ್ಮುಖದಲ್ಲಿ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>