<p><strong>ಬೆಳ್ತಂಗಡಿ:</strong> ಶ್ರೀಗುರುದೇವ ವಿವಿದೋದ್ಧೇಶ ಸಹಕಾರ ಸಂಘದ 2023-24ನೇ ವಾರ್ಷಿಕ ಮಹಾಸಭೆ ಸಂಘದ ಸಭಾಭವನದಲ್ಲಿ ಉಪಾಧ್ಯಕ್ಷ ಭಗೀರಥ ಜಿ.ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.</p>.<p>2023- 24ನೇ ಸಾಲಿನಲ್ಲಿ ₹ 1,200 ಕೋಟಿ ವ್ಯವಹಾರ ನಡೆಸಿ ₹ 3.84 ಕೋಟಿ ನಿವ್ವಳ ಲಾಭ ಗಳಿಸಿದೆ. ಈಗಾಗಲೇ ಸಂಘವು 22 ಶಾಖೆ ಹೊಂದಿದ್ದು, ಪ್ರಸ್ತುತ 82 ಮಂದಿ ಸಿಬ್ಬಂದಿ ಇದ್ದಾರೆ. ಸುಮಾರು 42 ಸಾವಿರ ಮಿಕ್ಕಿ ಸದಸ್ಯತ್ವ ಹೊಂದಿದೆ. ₹ 193 ಕೋಟಿ ಠೇವಣಿ ಸಂಗ್ರಹಿಸಿ, ₹ 167 ಕೋಟಿ ಸಾಲ ವಿತರಿಸಲಾಗಿದೆ. ₹ 212 ಕೋಟಿ ದುಡಿಯುವ ಬಂಡವಾಳದೊಂದಿಗೆ, ಸದಸ್ಯರಿಗೆ ನಿರಂತರ ಶೇ 15ರಷ್ಟು ಲಾಭಾಂಶ ನೀಡುತ್ತಿರುವ ಎ ಶ್ರೇಣಿಯ ಸಂಘವಾಗಿದೆ ಎಂದರು.</p>.<p>2024-25ರಲ್ಲಿ ಹೊಸದಾಗಿ 3 ಶಾಖೆಗಳು ಆರಂಭಗೊಳ್ಳಲಿವೆ. ಈಗಾಗಲೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿ ತಂತ್ರಜ್ಞಾನದೊಂದಿಗೆ ಬ್ಯಾಂಕಿಂಗ್ ಕ್ಷೇತ್ರದ ಎಲ್ಲ ಸೇವೆ ನೀಡಲಾಗುತ್ತಿದೆ. ಗ್ರಾಹಕರಿಗೆ ಆರ್ಟಿಜಿಎಸ್, ನೆಫ್ಟ್, ಇಸ್ಟ್ಯಾಂಪ್, ಆರ್ಟಿಸಿ, ಗ್ರಾಹಕರಿಗೆ ಲಾಕರ್ ಸೇವೆ ನೀಡಲಾಗುತ್ತಿದೆ. ತಾಲ್ಲೂಕಿನಲ್ಲೇ ಪ್ರಥಮವಾಗಿ ಸಂಘದ ಹೆಸರಿನಲ್ಲಿ ತನ್ನದೇ ಆದ ಐಎಫ್ಎಸ್ಸಿ ಕೋಡ್ ಹೊಂದಿದ್ದು, ಇನ್ನು ಮುಂದಿನ ದಿನಗಳಲ್ಲಿ ಕ್ಯೂಆರ್ ಕೋಡ್, ನ್ಯಾಚ್, ಇ-ಕಲೆಕ್ಷನ್ ತಂತ್ರಾಜ್ಞಾನವನ್ನು ಅಳವಡಿಸಲಾಗುವುದು ಎಂದರು.</p>.<p>ಸಂಘವು ದತ್ತು ಸ್ವೀಕಾರ ಕಾರ್ಯಕ್ರಮದಡಿ 3 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೂರ್ಣ ವೆಚ್ಚ ಭರಿಸುತ್ತಿದೆ. ಓರ್ವ ಮೆಡಿಕಲ್ ವಿದ್ಯಾರ್ಥಿಯ ವ್ಯಾಸಂಗದ ಆಂಶಿಕ ವೆಚ್ಚ ಹಾಗೂ ಗುರುದೇವ ಕಾಲೇಜಿನ ಪದವಿ ವ್ಯಾಸಂಗ ಮಾಡುತ್ತಿರುವ 111 ಪದವಿ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಪ್ರತಿ ವರ್ಷ ₹ 6 ರಿಂದ 7 ಲಕ್ಷದವರೆಗೆ ನೆರವು ನೀಡುತ್ತಿದೆ ಎಂದರು.</p>.<p>ಸಂಘದ ವಿಶೇಷಾಧಿಕಾರಿ ಎಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಮಹಾ ಸಭೆಯ ವಿವರ ಮಂಡಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವತ್ಥ್ ಕುಮಾರ್ ಸಾಧಕರ ವಿವರ ನೀಡಿದರು.</p>.<p>ನಿರ್ದೇಶಕರಾದ ಸುಜಿತಾ ವಿ.ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ.ದಿವಾಕರ, ಜಗದೀಶ್ಚಂದ್ರ ಡಿ.ಕೆ., ಚಂದ್ರಶೇಖರ್, ಎಚ್.ಧರ್ಣಪ್ಪ ಪೂಜಾರಿ, ಗಂಗಾಧರ ಮಿತ್ತಮಾರು, ಜಯವಿಕ್ರಮ್ ಪಿ., ಧರಣೇಂದ್ರ ಕುಮಾರ್, ಆನಂದ ಪೂಜಾರಿ ಕೆ. ಭಾಗವಹಿಸಿದ್ದರು.</p>.<p>ಮಾಜಿ ಶಾಸಕ, ಸಂಘದ ಆರಂಭದ ಮುಖ್ಯ ಪ್ರವರ್ತಕ ಕೆ.ವಸಂತ ಬಂಗೇರ, ನಿರ್ದೇಶಕ ಶೇಖರ ಬಂಗೇರ, ಸಿಬ್ಬಂದಿ ಲತನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>.<p>ವ್ಯವಹಾರದಲ್ಲಿ ಸಾಧನೆ ಮಾಡಿದ ಶಾಖೆಗಳನ್ನು, ಹೆಚ್ಚು ಮೊತ್ತ ದೈನಿಕ ಠೇವಣಿ ಸಂಗ್ರಾಹಕರನ್ನು, ವೈಯಕ್ತಿಕ ಸಾಧಕ ಸಿಬ್ಬಂದಿಯನ್ನು ಗೌರವಿಸಲಾಯಿತು. ನಿರ್ದೇಶಕ ಡಾ.ರಾಜಾರಾಮ ಕೆ.ಬಿ.ಸ್ವಾಗತಿಸಿದರು. ನಿರ್ದೇಶಕ ಜಯವಿಕ್ರಮ್ ವಂದಿಸಿದರು, ಸಿಬ್ಬಂದಿ ಸ್ವಾತಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳ್ತಂಗಡಿ:</strong> ಶ್ರೀಗುರುದೇವ ವಿವಿದೋದ್ಧೇಶ ಸಹಕಾರ ಸಂಘದ 2023-24ನೇ ವಾರ್ಷಿಕ ಮಹಾಸಭೆ ಸಂಘದ ಸಭಾಭವನದಲ್ಲಿ ಉಪಾಧ್ಯಕ್ಷ ಭಗೀರಥ ಜಿ.ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.</p>.<p>2023- 24ನೇ ಸಾಲಿನಲ್ಲಿ ₹ 1,200 ಕೋಟಿ ವ್ಯವಹಾರ ನಡೆಸಿ ₹ 3.84 ಕೋಟಿ ನಿವ್ವಳ ಲಾಭ ಗಳಿಸಿದೆ. ಈಗಾಗಲೇ ಸಂಘವು 22 ಶಾಖೆ ಹೊಂದಿದ್ದು, ಪ್ರಸ್ತುತ 82 ಮಂದಿ ಸಿಬ್ಬಂದಿ ಇದ್ದಾರೆ. ಸುಮಾರು 42 ಸಾವಿರ ಮಿಕ್ಕಿ ಸದಸ್ಯತ್ವ ಹೊಂದಿದೆ. ₹ 193 ಕೋಟಿ ಠೇವಣಿ ಸಂಗ್ರಹಿಸಿ, ₹ 167 ಕೋಟಿ ಸಾಲ ವಿತರಿಸಲಾಗಿದೆ. ₹ 212 ಕೋಟಿ ದುಡಿಯುವ ಬಂಡವಾಳದೊಂದಿಗೆ, ಸದಸ್ಯರಿಗೆ ನಿರಂತರ ಶೇ 15ರಷ್ಟು ಲಾಭಾಂಶ ನೀಡುತ್ತಿರುವ ಎ ಶ್ರೇಣಿಯ ಸಂಘವಾಗಿದೆ ಎಂದರು.</p>.<p>2024-25ರಲ್ಲಿ ಹೊಸದಾಗಿ 3 ಶಾಖೆಗಳು ಆರಂಭಗೊಳ್ಳಲಿವೆ. ಈಗಾಗಲೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿ ತಂತ್ರಜ್ಞಾನದೊಂದಿಗೆ ಬ್ಯಾಂಕಿಂಗ್ ಕ್ಷೇತ್ರದ ಎಲ್ಲ ಸೇವೆ ನೀಡಲಾಗುತ್ತಿದೆ. ಗ್ರಾಹಕರಿಗೆ ಆರ್ಟಿಜಿಎಸ್, ನೆಫ್ಟ್, ಇಸ್ಟ್ಯಾಂಪ್, ಆರ್ಟಿಸಿ, ಗ್ರಾಹಕರಿಗೆ ಲಾಕರ್ ಸೇವೆ ನೀಡಲಾಗುತ್ತಿದೆ. ತಾಲ್ಲೂಕಿನಲ್ಲೇ ಪ್ರಥಮವಾಗಿ ಸಂಘದ ಹೆಸರಿನಲ್ಲಿ ತನ್ನದೇ ಆದ ಐಎಫ್ಎಸ್ಸಿ ಕೋಡ್ ಹೊಂದಿದ್ದು, ಇನ್ನು ಮುಂದಿನ ದಿನಗಳಲ್ಲಿ ಕ್ಯೂಆರ್ ಕೋಡ್, ನ್ಯಾಚ್, ಇ-ಕಲೆಕ್ಷನ್ ತಂತ್ರಾಜ್ಞಾನವನ್ನು ಅಳವಡಿಸಲಾಗುವುದು ಎಂದರು.</p>.<p>ಸಂಘವು ದತ್ತು ಸ್ವೀಕಾರ ಕಾರ್ಯಕ್ರಮದಡಿ 3 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೂರ್ಣ ವೆಚ್ಚ ಭರಿಸುತ್ತಿದೆ. ಓರ್ವ ಮೆಡಿಕಲ್ ವಿದ್ಯಾರ್ಥಿಯ ವ್ಯಾಸಂಗದ ಆಂಶಿಕ ವೆಚ್ಚ ಹಾಗೂ ಗುರುದೇವ ಕಾಲೇಜಿನ ಪದವಿ ವ್ಯಾಸಂಗ ಮಾಡುತ್ತಿರುವ 111 ಪದವಿ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಪ್ರತಿ ವರ್ಷ ₹ 6 ರಿಂದ 7 ಲಕ್ಷದವರೆಗೆ ನೆರವು ನೀಡುತ್ತಿದೆ ಎಂದರು.</p>.<p>ಸಂಘದ ವಿಶೇಷಾಧಿಕಾರಿ ಎಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಮಹಾ ಸಭೆಯ ವಿವರ ಮಂಡಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವತ್ಥ್ ಕುಮಾರ್ ಸಾಧಕರ ವಿವರ ನೀಡಿದರು.</p>.<p>ನಿರ್ದೇಶಕರಾದ ಸುಜಿತಾ ವಿ.ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ.ದಿವಾಕರ, ಜಗದೀಶ್ಚಂದ್ರ ಡಿ.ಕೆ., ಚಂದ್ರಶೇಖರ್, ಎಚ್.ಧರ್ಣಪ್ಪ ಪೂಜಾರಿ, ಗಂಗಾಧರ ಮಿತ್ತಮಾರು, ಜಯವಿಕ್ರಮ್ ಪಿ., ಧರಣೇಂದ್ರ ಕುಮಾರ್, ಆನಂದ ಪೂಜಾರಿ ಕೆ. ಭಾಗವಹಿಸಿದ್ದರು.</p>.<p>ಮಾಜಿ ಶಾಸಕ, ಸಂಘದ ಆರಂಭದ ಮುಖ್ಯ ಪ್ರವರ್ತಕ ಕೆ.ವಸಂತ ಬಂಗೇರ, ನಿರ್ದೇಶಕ ಶೇಖರ ಬಂಗೇರ, ಸಿಬ್ಬಂದಿ ಲತನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>.<p>ವ್ಯವಹಾರದಲ್ಲಿ ಸಾಧನೆ ಮಾಡಿದ ಶಾಖೆಗಳನ್ನು, ಹೆಚ್ಚು ಮೊತ್ತ ದೈನಿಕ ಠೇವಣಿ ಸಂಗ್ರಾಹಕರನ್ನು, ವೈಯಕ್ತಿಕ ಸಾಧಕ ಸಿಬ್ಬಂದಿಯನ್ನು ಗೌರವಿಸಲಾಯಿತು. ನಿರ್ದೇಶಕ ಡಾ.ರಾಜಾರಾಮ ಕೆ.ಬಿ.ಸ್ವಾಗತಿಸಿದರು. ನಿರ್ದೇಶಕ ಜಯವಿಕ್ರಮ್ ವಂದಿಸಿದರು, ಸಿಬ್ಬಂದಿ ಸ್ವಾತಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>