<p><strong>ಮಂಗಳೂರು</strong>: ‘ಮೀನುಗಾರಿಕೆಗೆ ಸಂಬಂಧಿಸಿದ ನೀತಿ ನಿಯಮಗಳು ದೇಶದಾದ್ಯಂತ ಒಂದೇ ಇರಬೇಕು. ನಮ್ಮ ರಾಜ್ಯಕ್ಕೆ ಸೀಮಿತವಾಗಿ ಕಠಿಣ ನಿಯಮ ರೂಪಿಸಿದರೆ, ರಾಜ್ಯದ ಮೀನುಗಾರರಿಗೆ ಭವಿಷ್ಯದಲ್ಲಿ ಸಮಸ್ಯೆ ಉಂಟಾಗಲಿದೆ' ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅಭಿಪ್ರಾಯಪಟ್ಟರು.</p><p>ಮೀನು ಕೃಷಿ ಉತ್ಪಾದಕತೆ ವ್ಯತ್ಯಯ ಕಡಿತಗೊಳಿಸುವುದಕ್ಕೆ ಸಂಬಂಧಿಸಿ ಎಕ್ಕೂರಿನ ಮೀನುಗಾರಿಕಾ ಕಾಲೇಜು, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ, ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಶನಿವಾರ ಇಲ್ಲಿ ಏರ್ಪಡಿಸಿದ್ದ ಮೀನುಗಾರರ ಸಮಾಲೋಚನೆ ಸಭೆ ‘ಬಿಗ್ ಫಿಶ್ 2.0’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.</p><p>ಮೀನುಗಾರಿಕೆ ರಜೆಯನ್ನು 60 ದಿನಗಳಿಂದ 90 ದಿನಗಳಿಗೆ ಹೆಚ್ಚಿಸುವುದು, ದೋಣಿಗಳಲ್ಲಿ ಬಳಸುವ ಎಂಜಿನ್ ಸಾಮರ್ಥ್ಯಕ್ಕೆ ಮಾನದಂಡ ನಿಗದಿಪಡಿಸುವುದು, ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲಿಂಗ್ ನಿಷೇಧ ಹಾಗೂ ಪಶ್ಚಿಮ ಕರಾವಳಿಗೆ ಏಕರೂಪ ಮೀನುಗಾರಿಕೆ ನೀತಿ ಸಂಹಿತೆ ಹಾಗೂ ದಂಡ ಸಂಹಿತೆ ರೂಪಿಸುವ ಕಾರ್ಯಸೂಚಿಗಳು ಸಭೆಯ ಮುಂದಿದ್ದವು. ಈ ಕುರಿತು ಪ್ರತಿಕ್ರಿಯಿಸಿದ ಮಂಕಾಳ ವೈದ್ಯ, ‘ಇಂತಹ ವಿಚಾರಗಳನ್ನು ಮೀನುಗಾರರ ಜೊತೆಯಲ್ಲೇ ಚರ್ಚಿಸುತ್ತಿರುವುದು ಒಳ್ಳೆಯ ವಿಷಯವೇ. ಈ ನಿರ್ಬಂಧಗಳು ದೇಶದ ಎಲ್ಲ ರಾಜ್ಯಗಳ ಮೀನುಗಾರರಿಗೆ ಇದು ಅನ್ವಯ ಆಗಬೇಕು. ಎಲ್ಲ ರಾಜ್ಯಗಳ ಮೀನುಗಾರರು ಇದಕ್ಕೆ ಒಪ್ಪಿಕೊಂಡು ದೇಶದಾದ್ಯಂತ ಏಕರೂಪದ ಮೀನುಗಾರಿಕಾ ನೀತಿ ಜಾರಿಯಾಗುವುದಾದರೆ ಮಾತ್ರ ನಾವು ಬೆಂಬಲಿಸುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.</p><p>‘ಮೀನುಗಾರ ಮಹಿಳೆಯರಿಗೆ ₹ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುವ ಕಾರ್ಯಕ್ರಮಕ್ಕೆ ರಾಷ್ಟ್ರೀಕೃತ ಬ್ಯಾಂಕ್ಗಳು ಸಹಕರಿಸುತ್ತಿಲ್ಲ. ಈ ಸಾಲಕ್ಕೂ ಅವರು ಭದ್ರತೆಯನ್ನು ಬಯಸುತ್ತಿದ್ದಾರೆ. ಕೆಲವು ಸಹಕಾರಿ ಬ್ಯಾಂಕ್ಗಳು ಈ ನಿಟ್ಟಿನಲ್ಲಿ ಆಸಕ್ತಿ ತೋರಿದ್ದು, ಈ ಕಾರ್ಯಕ್ರಮ ಶೀಘ್ರವೇ ಜಾರಿಯಾಗಲಿದೆ’ ಎಂದರು.</p><p>‘ಮೀನುಗಾರರು ಆಕಸ್ಮಿಕವಾಗಿ ಮೃತಪಟ್ಟರೆ ಸಂಕಷ್ಟ ಪರಿಹಾರ ನಿಧಿಯಿಂದ ₹ 8 ಲಕ್ಷ ಹಾಗೂ ಅಂಗವೈಕಲ್ಯಕ್ಕೆ ಒಳಗಾದರೆ ₹ 4 ಲಕ್ಷ ವೈದ್ಯಕೀಯ ವೆಚ್ಚವನ್ನು ನೀಡಲು ಕ್ರಮವಹಿಸಿದ್ದೇವೆ. ದೋಣಿ ದುರಂತ ಸಂಭವಿಸಿದರೆ ₹ 10 ಲಕ್ಷದವರೆಗೆ ಪರಿಹಾರ ನೀಡಲು ಅವಕಾಶ ಕಲ್ಪಸಿದ್ದೇವೆ’ ಎಂದರು.</p><p>ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ಡಾ.ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ಮೀನುಗಾರಿಕ ಅಭಿವೃದ್ಧಿ ನಿಗಮದ (ಕೆಎಫ್ಡಿಸಿ) ವ್ಯವಸ್ಥಾಪಕ ನಿರ್ದೇಶಕ ಗಣೇಶ್, ಮೀನುಗಾರಿಕಾ ನಿರ್ದೇಶಕ ದಿನೇಶ್ ಕುಮಾರ್ ಕೆ., ಬೀದರ್ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಕೆ.ಸಿ.ವೀರಣ್ಣ, ಪಾಲಿಕೆ ಸದಸ್ಯ ಭರತ್ ಕುಮಾರ್, ಉದಯ ಸಾಲ್ಯಾನ್, ರಮೇಶ್ ಮತ್ತಿತರರು ಭಾಗವಹಿಸಿದ್ದರು. ಶಿವಕುಮಾರ್ ಮಗದ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p><strong>‘ಬೈಂದೂರು–₹ 100 ಕೋಟಿ ವೆಚ್ಚದಲ್ಲಿ ಸೀ–ಫುಡ್ ಪಾರ್ಕ್’</strong></p><p>‘ಸರ್ಕಾರ ಬೈಂದೂರಿನಲ್ಲಿ ₹ 100 ಕೋಟಿ ವೆಚ್ಚದಲ್ಲಿ ಸೀ–ಪುಡ್ ಪಾರ್ಕ್ ನಿರ್ಮಾಣ ಮಾಡಲಿದ್ದು ಮೀನಿಗೆ ಯೋಗ್ಯ ದರ ಒದಗಿಸಲು ಇದು ನೆರವಾಗಲಿದೆ. ಮೀನನ್ನು ಸಂಸ್ಕರಿಸಿ ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿಗೆ ಇದರಿಂದ ಅವಕಾಶ ಸಿಗಲಿದೆ’ ಎಂದು ಮಂಕಾಳ ವೈದ್ಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ‘ಮೀನುಗಾರಿಕೆಗೆ ಸಂಬಂಧಿಸಿದ ನೀತಿ ನಿಯಮಗಳು ದೇಶದಾದ್ಯಂತ ಒಂದೇ ಇರಬೇಕು. ನಮ್ಮ ರಾಜ್ಯಕ್ಕೆ ಸೀಮಿತವಾಗಿ ಕಠಿಣ ನಿಯಮ ರೂಪಿಸಿದರೆ, ರಾಜ್ಯದ ಮೀನುಗಾರರಿಗೆ ಭವಿಷ್ಯದಲ್ಲಿ ಸಮಸ್ಯೆ ಉಂಟಾಗಲಿದೆ' ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅಭಿಪ್ರಾಯಪಟ್ಟರು.</p><p>ಮೀನು ಕೃಷಿ ಉತ್ಪಾದಕತೆ ವ್ಯತ್ಯಯ ಕಡಿತಗೊಳಿಸುವುದಕ್ಕೆ ಸಂಬಂಧಿಸಿ ಎಕ್ಕೂರಿನ ಮೀನುಗಾರಿಕಾ ಕಾಲೇಜು, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ, ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಶನಿವಾರ ಇಲ್ಲಿ ಏರ್ಪಡಿಸಿದ್ದ ಮೀನುಗಾರರ ಸಮಾಲೋಚನೆ ಸಭೆ ‘ಬಿಗ್ ಫಿಶ್ 2.0’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.</p><p>ಮೀನುಗಾರಿಕೆ ರಜೆಯನ್ನು 60 ದಿನಗಳಿಂದ 90 ದಿನಗಳಿಗೆ ಹೆಚ್ಚಿಸುವುದು, ದೋಣಿಗಳಲ್ಲಿ ಬಳಸುವ ಎಂಜಿನ್ ಸಾಮರ್ಥ್ಯಕ್ಕೆ ಮಾನದಂಡ ನಿಗದಿಪಡಿಸುವುದು, ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲಿಂಗ್ ನಿಷೇಧ ಹಾಗೂ ಪಶ್ಚಿಮ ಕರಾವಳಿಗೆ ಏಕರೂಪ ಮೀನುಗಾರಿಕೆ ನೀತಿ ಸಂಹಿತೆ ಹಾಗೂ ದಂಡ ಸಂಹಿತೆ ರೂಪಿಸುವ ಕಾರ್ಯಸೂಚಿಗಳು ಸಭೆಯ ಮುಂದಿದ್ದವು. ಈ ಕುರಿತು ಪ್ರತಿಕ್ರಿಯಿಸಿದ ಮಂಕಾಳ ವೈದ್ಯ, ‘ಇಂತಹ ವಿಚಾರಗಳನ್ನು ಮೀನುಗಾರರ ಜೊತೆಯಲ್ಲೇ ಚರ್ಚಿಸುತ್ತಿರುವುದು ಒಳ್ಳೆಯ ವಿಷಯವೇ. ಈ ನಿರ್ಬಂಧಗಳು ದೇಶದ ಎಲ್ಲ ರಾಜ್ಯಗಳ ಮೀನುಗಾರರಿಗೆ ಇದು ಅನ್ವಯ ಆಗಬೇಕು. ಎಲ್ಲ ರಾಜ್ಯಗಳ ಮೀನುಗಾರರು ಇದಕ್ಕೆ ಒಪ್ಪಿಕೊಂಡು ದೇಶದಾದ್ಯಂತ ಏಕರೂಪದ ಮೀನುಗಾರಿಕಾ ನೀತಿ ಜಾರಿಯಾಗುವುದಾದರೆ ಮಾತ್ರ ನಾವು ಬೆಂಬಲಿಸುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.</p><p>‘ಮೀನುಗಾರ ಮಹಿಳೆಯರಿಗೆ ₹ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುವ ಕಾರ್ಯಕ್ರಮಕ್ಕೆ ರಾಷ್ಟ್ರೀಕೃತ ಬ್ಯಾಂಕ್ಗಳು ಸಹಕರಿಸುತ್ತಿಲ್ಲ. ಈ ಸಾಲಕ್ಕೂ ಅವರು ಭದ್ರತೆಯನ್ನು ಬಯಸುತ್ತಿದ್ದಾರೆ. ಕೆಲವು ಸಹಕಾರಿ ಬ್ಯಾಂಕ್ಗಳು ಈ ನಿಟ್ಟಿನಲ್ಲಿ ಆಸಕ್ತಿ ತೋರಿದ್ದು, ಈ ಕಾರ್ಯಕ್ರಮ ಶೀಘ್ರವೇ ಜಾರಿಯಾಗಲಿದೆ’ ಎಂದರು.</p><p>‘ಮೀನುಗಾರರು ಆಕಸ್ಮಿಕವಾಗಿ ಮೃತಪಟ್ಟರೆ ಸಂಕಷ್ಟ ಪರಿಹಾರ ನಿಧಿಯಿಂದ ₹ 8 ಲಕ್ಷ ಹಾಗೂ ಅಂಗವೈಕಲ್ಯಕ್ಕೆ ಒಳಗಾದರೆ ₹ 4 ಲಕ್ಷ ವೈದ್ಯಕೀಯ ವೆಚ್ಚವನ್ನು ನೀಡಲು ಕ್ರಮವಹಿಸಿದ್ದೇವೆ. ದೋಣಿ ದುರಂತ ಸಂಭವಿಸಿದರೆ ₹ 10 ಲಕ್ಷದವರೆಗೆ ಪರಿಹಾರ ನೀಡಲು ಅವಕಾಶ ಕಲ್ಪಸಿದ್ದೇವೆ’ ಎಂದರು.</p><p>ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ಡಾ.ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ಮೀನುಗಾರಿಕ ಅಭಿವೃದ್ಧಿ ನಿಗಮದ (ಕೆಎಫ್ಡಿಸಿ) ವ್ಯವಸ್ಥಾಪಕ ನಿರ್ದೇಶಕ ಗಣೇಶ್, ಮೀನುಗಾರಿಕಾ ನಿರ್ದೇಶಕ ದಿನೇಶ್ ಕುಮಾರ್ ಕೆ., ಬೀದರ್ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಕೆ.ಸಿ.ವೀರಣ್ಣ, ಪಾಲಿಕೆ ಸದಸ್ಯ ಭರತ್ ಕುಮಾರ್, ಉದಯ ಸಾಲ್ಯಾನ್, ರಮೇಶ್ ಮತ್ತಿತರರು ಭಾಗವಹಿಸಿದ್ದರು. ಶಿವಕುಮಾರ್ ಮಗದ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p><strong>‘ಬೈಂದೂರು–₹ 100 ಕೋಟಿ ವೆಚ್ಚದಲ್ಲಿ ಸೀ–ಫುಡ್ ಪಾರ್ಕ್’</strong></p><p>‘ಸರ್ಕಾರ ಬೈಂದೂರಿನಲ್ಲಿ ₹ 100 ಕೋಟಿ ವೆಚ್ಚದಲ್ಲಿ ಸೀ–ಪುಡ್ ಪಾರ್ಕ್ ನಿರ್ಮಾಣ ಮಾಡಲಿದ್ದು ಮೀನಿಗೆ ಯೋಗ್ಯ ದರ ಒದಗಿಸಲು ಇದು ನೆರವಾಗಲಿದೆ. ಮೀನನ್ನು ಸಂಸ್ಕರಿಸಿ ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿಗೆ ಇದರಿಂದ ಅವಕಾಶ ಸಿಗಲಿದೆ’ ಎಂದು ಮಂಕಾಳ ವೈದ್ಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>