<p><strong>ಪುತ್ತೂರು</strong>: ಪುತ್ತೂರು ತಾಲ್ಲೂಕಿನ ಮಾಡ್ನೂರು ಗ್ರಾಮದ ಕಾವು ಸಮೀಪ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ವ್ಯಕ್ತಿಯೊಬ್ಬರು ಖರೀದಿಸಿದ ಜಾಗವನ್ನು ಸಮತಟ್ಟುಗೊಳಿಸಿದ್ದರಿಂದ ಮಣ್ಣು ಕುಸಿದು ಮೇಲ್ಭಾಗದಲ್ಲಿರುವ ಮನೆ ಮತ್ತು ಕೋಳಿಫಾರಂ ಅಪಾಯದ ಸ್ಥಿತಿಗೆ ತಲುಪಿದೆ.</p>.<p>ಕಾವು ನಿವಾಸಿ ವೆಂಕಪ್ಪ ಕುಲಾಲ್ ಅವರ ಮನೆ ಹಾಗೂ ಕೋಳಿಫಾರಂನ ಹಿಂಬದಿಯ ಧರೆ ಕುಸಿದಿದೆ. ಮಣ್ಣು ಕುಸಿದು ವೆಂಕಪ್ಪ ಕುಲಾಲ್ ಅವರ ಒಂದು ತೆಂಗಿನ ಮರ ಮತ್ತು ಧರೆಯ ಬದಿಯಲ್ಲಿದ್ದ ಅಡಿಕೆ ಮರಗಳು ಉರುಳಿವೆ.</p>.<p>ಸುಮಾರು 50 ಅಡಿಯಷ್ಟು ಎತ್ತರದಲ್ಲಿರುವ ವೆಂಕಪ್ಪ ಕುಲಾಲ್ ಅವರ ಮನೆ ಮತ್ತು ಕೋಳಿಫಾರಂ ಕುಸಿಯುವ ಸ್ಥಿತಿಯಲ್ಲಿದೆ. <br> </p><p>ಮುಂಜಾಗ್ರತಾ ಕ್ರಮವಾಗಿ ವಾಸ್ತವ್ಯವನ್ನು ಸಮೀಪದಲ್ಲೇ ಇರುವ ಗ್ರಾಮ ಪಂಚಾಯಿತಿಯ ಸಮುದಾಯ ಭವನಕ್ಕೆ ಸ್ಥಳಾಂತರಿಸುವಂತೆ ಅರಿಯಡ್ಕ ಗ್ರಾಮ ಪಂಚಾಯಿತಿ ನೋಟಿಸ್ ನೀಡಿದೆ. ಸಮುದಾಯ ಭವನದ ಕೀಲಿಕೈಯನ್ನು ಅವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.</p>.<p><strong>ವೃದ್ಧೆಯ ಮನೆ ಕುಸಿತ</strong></p>.<p>ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ತೆಗ್ಗು ಸಮೀಪದ ಕಟ್ಟೇಜಿರ್ ನಿವಾಸಿ ವೃದ್ಧೆ ಬೀಪಾತುಮ್ಮ ಅವರ ಹಳೆಯ ಹೆಂಚಿನ ಮನೆಯ ಮಾಡು ಸಂಪೂರ್ಣವಾಗಿ ಕುಸಿದಿದ್ದು, ಒಂದು ಭಾಗದ ಗೋಡೆಯೂ ಕುಸಿತಕ್ಕೊಳಗಾಗಿದೆ.</p>.<p>ಬೀಪಾತುಮ್ಮ ಅವರೊಬ್ಬರೇ ಈ ಮನೆಯಲ್ಲಿ ವಾಸ್ಯವ್ಯವಿದ್ದರು. ಶಿಥಿಲಗೊಂಡು ಕುಸಿಯುವ ಭೀತಿ ಇದ್ದುದರಿಂದ ಅವರು ಅಲ್ಲಿ ವಾಸ್ಯವ್ಯ ಇರಲಿಲ್ಲ ಎಂದು ಗೊತ್ತಾಗಿದೆ.</p>.<p>ಘಟನಾ ಸ್ಥಳಕ್ಕೆ ಕೆಯ್ಯೂರು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮ ಆಡಳಿತಾಧಿಕಾರಿ ಸ್ವಾತಿ, ಗ್ರಾಮ ಸಹಾಯಕ ನಾರಾಯಣ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು</strong>: ಪುತ್ತೂರು ತಾಲ್ಲೂಕಿನ ಮಾಡ್ನೂರು ಗ್ರಾಮದ ಕಾವು ಸಮೀಪ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ವ್ಯಕ್ತಿಯೊಬ್ಬರು ಖರೀದಿಸಿದ ಜಾಗವನ್ನು ಸಮತಟ್ಟುಗೊಳಿಸಿದ್ದರಿಂದ ಮಣ್ಣು ಕುಸಿದು ಮೇಲ್ಭಾಗದಲ್ಲಿರುವ ಮನೆ ಮತ್ತು ಕೋಳಿಫಾರಂ ಅಪಾಯದ ಸ್ಥಿತಿಗೆ ತಲುಪಿದೆ.</p>.<p>ಕಾವು ನಿವಾಸಿ ವೆಂಕಪ್ಪ ಕುಲಾಲ್ ಅವರ ಮನೆ ಹಾಗೂ ಕೋಳಿಫಾರಂನ ಹಿಂಬದಿಯ ಧರೆ ಕುಸಿದಿದೆ. ಮಣ್ಣು ಕುಸಿದು ವೆಂಕಪ್ಪ ಕುಲಾಲ್ ಅವರ ಒಂದು ತೆಂಗಿನ ಮರ ಮತ್ತು ಧರೆಯ ಬದಿಯಲ್ಲಿದ್ದ ಅಡಿಕೆ ಮರಗಳು ಉರುಳಿವೆ.</p>.<p>ಸುಮಾರು 50 ಅಡಿಯಷ್ಟು ಎತ್ತರದಲ್ಲಿರುವ ವೆಂಕಪ್ಪ ಕುಲಾಲ್ ಅವರ ಮನೆ ಮತ್ತು ಕೋಳಿಫಾರಂ ಕುಸಿಯುವ ಸ್ಥಿತಿಯಲ್ಲಿದೆ. <br> </p><p>ಮುಂಜಾಗ್ರತಾ ಕ್ರಮವಾಗಿ ವಾಸ್ತವ್ಯವನ್ನು ಸಮೀಪದಲ್ಲೇ ಇರುವ ಗ್ರಾಮ ಪಂಚಾಯಿತಿಯ ಸಮುದಾಯ ಭವನಕ್ಕೆ ಸ್ಥಳಾಂತರಿಸುವಂತೆ ಅರಿಯಡ್ಕ ಗ್ರಾಮ ಪಂಚಾಯಿತಿ ನೋಟಿಸ್ ನೀಡಿದೆ. ಸಮುದಾಯ ಭವನದ ಕೀಲಿಕೈಯನ್ನು ಅವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.</p>.<p><strong>ವೃದ್ಧೆಯ ಮನೆ ಕುಸಿತ</strong></p>.<p>ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ತೆಗ್ಗು ಸಮೀಪದ ಕಟ್ಟೇಜಿರ್ ನಿವಾಸಿ ವೃದ್ಧೆ ಬೀಪಾತುಮ್ಮ ಅವರ ಹಳೆಯ ಹೆಂಚಿನ ಮನೆಯ ಮಾಡು ಸಂಪೂರ್ಣವಾಗಿ ಕುಸಿದಿದ್ದು, ಒಂದು ಭಾಗದ ಗೋಡೆಯೂ ಕುಸಿತಕ್ಕೊಳಗಾಗಿದೆ.</p>.<p>ಬೀಪಾತುಮ್ಮ ಅವರೊಬ್ಬರೇ ಈ ಮನೆಯಲ್ಲಿ ವಾಸ್ಯವ್ಯವಿದ್ದರು. ಶಿಥಿಲಗೊಂಡು ಕುಸಿಯುವ ಭೀತಿ ಇದ್ದುದರಿಂದ ಅವರು ಅಲ್ಲಿ ವಾಸ್ಯವ್ಯ ಇರಲಿಲ್ಲ ಎಂದು ಗೊತ್ತಾಗಿದೆ.</p>.<p>ಘಟನಾ ಸ್ಥಳಕ್ಕೆ ಕೆಯ್ಯೂರು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮ ಆಡಳಿತಾಧಿಕಾರಿ ಸ್ವಾತಿ, ಗ್ರಾಮ ಸಹಾಯಕ ನಾರಾಯಣ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>