<p><strong>ಮಂಗಳೂರು:</strong> ನಗರದ ಬಲ್ಮಠ ನ್ಯೂ ರೋಡ್ ಬಳಿ ನಿಷೇಧಿತ ಮಾದಕ ಪದಾರ್ಥ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಕೇಂದ್ರ ಉಪ ವಿಭಾಗದ ಮಾದಕ ಪದಾರ್ಥ ಮಾರಾಟ ನಿಗ್ರಹ ತಂಡದ ಪೊಲೀಸರು ಬಂಧಿಸಿದ್ದಾರೆ.</p>.<p>ಅತ್ತಾವರ ವೈದ್ಯನಾಥ ನಗರದ ಆದಿತ್ಯ ಕೆ. (29 ವರ್ಷ) ಹಾಗೂ ಅಡ್ಯಾರ್ ಪದವು ಲೋಬೊ ನಗರದ ಕೋರ್ದಬ್ಬು ದೈವಸ್ಥಾನದ ಬಳಿಯ ನಿವಾಸಿ ರೋಹನ್ ಸಿಕ್ವೇರ (33) ಬಂಧಿತರು.</p>.<p>ಆರೋಪಿಗಳಿಂದ 27 ಗ್ರಾಂ ಹೈಡ್ರೋವೀಡ್ ಗಾಂಜಾ (ಅಂದಾಜು ₹ 50ಸಾವಿರ ಮೌಲ್ಯ), 2.95 ಕೆ.ಜಿ ಗಾಂಜಾ (ಅಂದಾಜು ₹ 1 ಲಕ್ಷ ಮೌಲ್ಯ) ಗಾಂಜ ಆ್ಯಷ್ ಆಯಿಲ್ (₹ 8 ಸಾವಿರ ಮೌಲ್ಯ) ಎಲ್.ಎಸ್.ಡಿ ಸ್ಟಾಂಪ್ (₹ 16,800 ಮೌಲ್ಯ ), ಎರಡು ಡಿಜಿಟಲ್ ಮಾಪನಗಳು, ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್ ಪೋನ್ಗಳು (₹ 90 ಸಾವಿರ ಮೌಲ್ಯ) ಹಾಗೂ ಕಪ್ಪು ಬಣ್ಣದ ಹುಂಡೈ ಕಾರು ಸೇರಿದಂತೆ ಒಟ್ಟು ₹ 20 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.</p>.<p>ಎಸಿಪಿ ಪ್ರತಾಪ್ ಸಿಂಗ್ ತೋರಟ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಅಜ್ಮತ್ ಆಲಿ ಮತ್ತು ಪಿಎಸ್ ಐ ಪ್ರದೀಪ್ ಟಿ.ಆರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ನಗರದ ಬಲ್ಮಠ ನ್ಯೂ ರೋಡ್ ಬಳಿ ನಿಷೇಧಿತ ಮಾದಕ ಪದಾರ್ಥ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಕೇಂದ್ರ ಉಪ ವಿಭಾಗದ ಮಾದಕ ಪದಾರ್ಥ ಮಾರಾಟ ನಿಗ್ರಹ ತಂಡದ ಪೊಲೀಸರು ಬಂಧಿಸಿದ್ದಾರೆ.</p>.<p>ಅತ್ತಾವರ ವೈದ್ಯನಾಥ ನಗರದ ಆದಿತ್ಯ ಕೆ. (29 ವರ್ಷ) ಹಾಗೂ ಅಡ್ಯಾರ್ ಪದವು ಲೋಬೊ ನಗರದ ಕೋರ್ದಬ್ಬು ದೈವಸ್ಥಾನದ ಬಳಿಯ ನಿವಾಸಿ ರೋಹನ್ ಸಿಕ್ವೇರ (33) ಬಂಧಿತರು.</p>.<p>ಆರೋಪಿಗಳಿಂದ 27 ಗ್ರಾಂ ಹೈಡ್ರೋವೀಡ್ ಗಾಂಜಾ (ಅಂದಾಜು ₹ 50ಸಾವಿರ ಮೌಲ್ಯ), 2.95 ಕೆ.ಜಿ ಗಾಂಜಾ (ಅಂದಾಜು ₹ 1 ಲಕ್ಷ ಮೌಲ್ಯ) ಗಾಂಜ ಆ್ಯಷ್ ಆಯಿಲ್ (₹ 8 ಸಾವಿರ ಮೌಲ್ಯ) ಎಲ್.ಎಸ್.ಡಿ ಸ್ಟಾಂಪ್ (₹ 16,800 ಮೌಲ್ಯ ), ಎರಡು ಡಿಜಿಟಲ್ ಮಾಪನಗಳು, ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್ ಪೋನ್ಗಳು (₹ 90 ಸಾವಿರ ಮೌಲ್ಯ) ಹಾಗೂ ಕಪ್ಪು ಬಣ್ಣದ ಹುಂಡೈ ಕಾರು ಸೇರಿದಂತೆ ಒಟ್ಟು ₹ 20 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.</p>.<p>ಎಸಿಪಿ ಪ್ರತಾಪ್ ಸಿಂಗ್ ತೋರಟ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಅಜ್ಮತ್ ಆಲಿ ಮತ್ತು ಪಿಎಸ್ ಐ ಪ್ರದೀಪ್ ಟಿ.ಆರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>