ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಡಿಮೆಯ ಅನುಭವ ಗೆಲುವಿಗೆ ರಹದಾರಿ: ಕಿಶೋರ್‌ಕುಮಾರ್ ಸಂದರ್ಶನ

Published : 19 ಅಕ್ಟೋಬರ್ 2024, 7:45 IST
Last Updated : 19 ಅಕ್ಟೋಬರ್ 2024, 7:45 IST
ಫಾಲೋ ಮಾಡಿ
Comments
ಪ್ರ

ವಿಧಾನ ಪರಿಷತ್‌ ಚುನಾವಣೆಯಲ್ಲಿ ಜನಪ್ರತಿನಿಧಿಗಳೇ ಮತದಾರರು. ಪ್ರತಿಯೊಬ್ಬರ ಭೇಟಿಗೆ ಯಾವ ರೀತಿ ಯೋಜನೆ ರೂಪಿಸಿಕೊಂಡಿದ್ದೀರಿ?

ನನ್ನೊಬ್ಬನಿಗೇ ಎಲ್ಲ ಮತದಾರನ್ನು ಭೇಟಿಯಾಗಲು ಕಷ್ಟಸಾಧ್ಯ. ಸದೃಢವಾಗಿರುವ ಪಕ್ಷದಲ್ಲಿ ಗ್ರಾಮ ಮಟ್ಟದಿಂದ ಜಿಲ್ಲಾ ಘಟಕವರೆಗೆ ಎಲ್ಲರ ಪರಿಶ್ರಮ, ಮಹಾಶಕ್ತಿ ಕೇಂದ್ರದ ಕಾರ್ಯಚಟುವಟಿಕೆಗಳ ಮೂಲಕ ಪ್ರತಿ ಮತದಾರನನ್ನು ತಲುಪಲು ಸಾಧ್ಯವಾಗಿದೆ. 

ಪ್ರ

ನೀವು ಆಯ್ಕೆಯಾದರೆ ಮೇಲ್ಮನೆಯ ಒಬ್ಬ ಸಮರ್ಥ ಜನಪ್ರತಿನಿಧಿಯಾಗಲು ಏನೆಲ್ಲ ಯೋಜನೆ ರೂಪಿಸಿಕೊಂಡಿರುವಿರಿ?

ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಮೊದಲ ಬಾರಿಗೆ ಆಗಿರಬಹುದು, ಆದರೆ, ಅನೇಕ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ದುಡಿದಿರುವ ಅನುಭವ ನನ್ನೊಂದಿಗಿದೆ. ಮೂಲತಃ ನಾನು ಕೃಷಿಕ, ಕೃಷಿಕನೊಬ್ಬನ ಮಗ. ಸಮಾಜದ ಕೆಲಸ ನಿಭಾಯಿಸುವಾಗ ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸುವ ಪಾಠವನ್ನು ಪರಿವಾರದ ಸಂಘಟನೆಗಳು ಕಲಿಸಿವೆ. ‘ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ’ ಎಂಬುದನ್ನು ಬದುಕಿನಲ್ಲಿ ರೂಢಿಸಿಕೊಂಡಿದ್ದೇನೆ. ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಲು ಪಕ್ಷ ನನಗೆ ಕಲಿಸಿದೆ. ಅನುಭವಿ ಕೋಟ ಶ್ರೀನಿವಾಸ ಪೂಜಾರಿ ಅವರ ಮಾರ್ಗದರ್ಶನ ಪಡೆಯುತ್ತೇನೆ.

ಪ್ರ

ಯಾಕಾಗಿ ನಿಮ್ಮನ್ನು ಆಯ್ಕೆ ಮಾಡಬೇಕು ಅನ್ನುತ್ತೀರಿ?

ಜನರ ಧ್ವನಿಯಾಗಿ ಸಮರ್ಥವಾಗಿ ಕೆಲಸ ಮಾಡಲು ಪಕ್ಷ ಯುವಕನೊಬ್ಬನಿಗೆ ಅವಕಾಶ ನೀಡಿದೆ. ಆ ಕಾರಣಕ್ಕೆ ನನ್ನನ್ನು ಆಯ್ಕೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ.

ಪ್ರ

ನಿಮಗೆ ಟಿಕೆಟ್ ದೊರೆಯುವಲ್ಲಿ ಜಾತಿ ಲೆಕ್ಕಾಚಾರ ಕೆಲಸ ಮಾಡಿದೆಯಾ? 

ಬಿಜೆಪಿಯಲ್ಲಿ ಜಾತಿ ಎಂಬುದು ಇಲ್ಲ. ಜಾತಿ ಬಲ ಇಲ್ಲದವನಿಗೆ ಟಿಕೆಟ್ ಸಿಗಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಪಕ್ಷವನ್ನು ತಾಯಿ ಸಮಾನವಾಗಿ ಕಂಡಿದ್ದೇನೆ. ಹಿಂದುತ್ವದ ಆಧಾರದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ. ಹಿಂದುತ್ವ ಇರುವುದು ಬಿಜೆಪಿಯಲ್ಲಿ ಮಾತ್ರ.

ಪ್ರ

ಕ್ಷೇತ್ರ ವ್ಯಾಪ್ತಿಯಲ್ಲಿ ನೀವು ಗುರುತಿಸಿರುವ ಸಮಸ್ಯೆಗಳು ಏನು?

ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಪಂಚಾಯತ್‌ ರಾಜ್ ವ್ಯವಸ್ಥೆಗೆ ಶಕ್ತಿ ತುಂಬುವ ಕೆಲಸ ಆಗಿದೆ. ಜಲ್‌ಜೀವನ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಗ್ರಾಮೀಣ ಸಡಕ್ ಸೇರಿದಂತೆ ಅನೇಕ ಯೋಜನೆಗಳು ಜಾರಿಗೊಂಡಿವೆ. ಎಲ್ಲ ಜನಪರ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಪ್ರಯತ್ನಿಸುತ್ತೇನೆ.

ಪ್ರ

ಪಂಚಾಯತ್ ರಾಜ್ ವ್ಯವಸ್ಥೆ ನಿಮಗೆ ಹೊಸತು, ಅನುಭವದ ಕೊರತೆ ಇದೆ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಾರೆ...

ಚುನಾವಣೆ ಬಂದಾಗ ಇಂತಹ ಮಾತು ಸಹಜ. 30 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಹೊಸ ಹೊಣೆಗಾರಿಕೆ ಕಷ್ಟ ಆಗಲಾರದು. ಆಗಲಿಕ್ಕಿಲ್ಲ. ಕಾಂಗ್ರೆಸ್‌ನವರೂ ಶಹಭಾಸ್ ಎನ್ನುವಂತೆ ಕೆಲಸ ಮಾಡಿ ತೋರಿಸುತ್ತೇನೆ.

ಪ್ರ

ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ಇದೆ. ವಿರೋಧ ಪಕ್ಷದಲ್ಲಿರುವ ಬಿಜೆಪಿಯನ್ನು ಮತದಾರರು ಬೆಂಬಲಿಸಬಹುದಾ?

ಪಕ್ಷ ಬೆಂಬಲಿತ ಜನಪ್ರತಿನಿಧಿಗಳೇ ಮತದಾರರು. ಕಾಂಗ್ರೆಸ್‌ ಬೆಂಬಲಿತರಿಗೂ ಈಗ ಕಾಂಗ್ರೆಸ್‌ ಬೇಡವೆಂಬ ಭಾವನೆ ಮೂಡಿದೆ. ಹೀಗಾಗಿ, ಹೆಚ್ಚು ಮತ ಪಡೆಯುವ ವಿಶ್ವಾಸವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT