<p><strong>ಮೂಡುಬಿದಿರೆ</strong>: ನೆಲ್ಲಿಕಾರಿನ ಬೋರುಗುಡ್ಡೆ ಜನತಾ ಕಾಲೊನಿಯಲ್ಲಿ ಮನೆ ಕುಸಿದು ಮಹಿಳೆ ಮೃತಪಟ್ಟಿದ್ದಾರೆ.</p>.<p>ಮೃತ ಮಹಿಳೆಯನ್ನು ದಿ.ಸುಬ್ಬು ಅವರ ಪತ್ನಿ ಗೋಪಿ (65) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಸುಮಾರು 10 ಗಂಟೆ ವೇಳೆ ಬಿರುಗಾಳಿ–ಮಳೆಯಾಗಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಗೋಪಿ ಅವರ ನಾಲ್ವರು ಪುತ್ರರು ಪ್ಲಾಸ್ಟಿಕ್ ಟಾರ್ಪಾಲು ಹಾಕುತ್ತಿದ್ದರು. ಇದ್ದಕ್ಕಿದ್ದಂತೆ ಮನೆಯ ಗೋಡೆ ಹಾಗೂ ಚಾವಣಿ ಕುಸಿದು ಗೋಪಿ ಅವರ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.</p>.<p>ಗುಂಪಲದಲ್ಲಿ ಮಾಂಟ್ರಾಡಿ– ನೆಲ್ಲಿಕಾರು ಸಂಪರ್ಕಿಸುವ ರಸ್ತೆಯ ಮೋರಿ ಕುಸಿದು ಜನ ಹಾಗೂ ವಾಹನ ಸಂಚಾರ ಸ್ಥಗಿತಗೊಂಡಿದೆ.</p>.<p>ನೆರೆಯಲ್ಲಿ ಕೊಚ್ಚಿ ಹೋದ ಹಸುಗಳು: ನೆಲ್ಲಿಕಾರಿನ ಡೆಂಜಾರು ಎಂಬಲ್ಲಿ ಪ್ರಕಾಶ್ ಅವರ ಕೊಟ್ಟಿಗೆಗೆ ನೀರು ನುಗ್ಗಿ ಐದು ಹಸುಗಳು ಕೊಚ್ಚಿಹೋಗಿದ್ದವು. ಈ ಪೈಕಿ ಎರಡು ಹಸುಗಳು ಮೆಲೆ ಬಂದಿವೆ. ಒಂದು ಹಸುವಿನ ಶವ ಪತ್ತೆಯಾಗಿದೆ.</p>.<p>ಕೋಟೆಬಾಗಿಲು ಹಾಗೂ ಉಳಿಯಾದಲ್ಲಿ 3 ಮನೆ, ಹೊಸಂಗಡಿಯಲ್ಲಿ 25, ಕಲ್ಲಬೆಟ್ಟುನಲ್ಲಿ 1 ಮನೆ ಸ್ಥಳಾಂತರಕ್ಕೆ ಪುರಸಭೆ ಮುಖ್ಯಾಧಿಕಾರಿ ಸೂಚನೆ ನೀಡಿದ್ದಾರೆ. ಒಂದು ಕುಟುಂಬ ಮಾರೂರಿನ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿದೆ. ಕಲ್ಲಬೆಟ್ಟುನಲ್ಲಿರುವ ಪೌರ ಕಾರ್ಮಿಕರನ್ನು ಸಮಾಜ ಮಂದಿರಕ್ಕೆ ಸ್ಥಳಾಂತರಿಸಲಾಗಿದೆ.</p>.<p>ಮಾರೂರು-ಹೊಸಂಗಡಿ ಗಡಿ ಪ್ರದೇಶದ ಹೊಸಂಗಡಿ ಸೇತುವೆ ಬಳಿ ಸುಮಾರು 20 ಮನೆಗಳಿಗೆ ನೀರು ನುಗ್ಗಿವೆ. ಒಂದು ಮನೆ ಕುಸಿದಿದ್ದು, ಮತ್ತೊಂದು ಮನೆಗೆ ಭಾಗಶಃ ಹಾನಿಯಾಗಿದೆ.</p>.<p>ಶಿರ್ತಾಡಿ ಕಜೆ, ಲಾಂಬುದೇಲು ಬಳಿ ಮನೆಗೆ ಗುಡ್ಡ ಕುಸಿದು ಹಾನಿಯಾಗಿದೆ. ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಪಿ ಹಾಗೂ ಮನೆ ಹಾನಿಗೀಡಾದವರಿಗೆ ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡುಬಿದಿರೆ</strong>: ನೆಲ್ಲಿಕಾರಿನ ಬೋರುಗುಡ್ಡೆ ಜನತಾ ಕಾಲೊನಿಯಲ್ಲಿ ಮನೆ ಕುಸಿದು ಮಹಿಳೆ ಮೃತಪಟ್ಟಿದ್ದಾರೆ.</p>.<p>ಮೃತ ಮಹಿಳೆಯನ್ನು ದಿ.ಸುಬ್ಬು ಅವರ ಪತ್ನಿ ಗೋಪಿ (65) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಸುಮಾರು 10 ಗಂಟೆ ವೇಳೆ ಬಿರುಗಾಳಿ–ಮಳೆಯಾಗಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಗೋಪಿ ಅವರ ನಾಲ್ವರು ಪುತ್ರರು ಪ್ಲಾಸ್ಟಿಕ್ ಟಾರ್ಪಾಲು ಹಾಕುತ್ತಿದ್ದರು. ಇದ್ದಕ್ಕಿದ್ದಂತೆ ಮನೆಯ ಗೋಡೆ ಹಾಗೂ ಚಾವಣಿ ಕುಸಿದು ಗೋಪಿ ಅವರ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.</p>.<p>ಗುಂಪಲದಲ್ಲಿ ಮಾಂಟ್ರಾಡಿ– ನೆಲ್ಲಿಕಾರು ಸಂಪರ್ಕಿಸುವ ರಸ್ತೆಯ ಮೋರಿ ಕುಸಿದು ಜನ ಹಾಗೂ ವಾಹನ ಸಂಚಾರ ಸ್ಥಗಿತಗೊಂಡಿದೆ.</p>.<p>ನೆರೆಯಲ್ಲಿ ಕೊಚ್ಚಿ ಹೋದ ಹಸುಗಳು: ನೆಲ್ಲಿಕಾರಿನ ಡೆಂಜಾರು ಎಂಬಲ್ಲಿ ಪ್ರಕಾಶ್ ಅವರ ಕೊಟ್ಟಿಗೆಗೆ ನೀರು ನುಗ್ಗಿ ಐದು ಹಸುಗಳು ಕೊಚ್ಚಿಹೋಗಿದ್ದವು. ಈ ಪೈಕಿ ಎರಡು ಹಸುಗಳು ಮೆಲೆ ಬಂದಿವೆ. ಒಂದು ಹಸುವಿನ ಶವ ಪತ್ತೆಯಾಗಿದೆ.</p>.<p>ಕೋಟೆಬಾಗಿಲು ಹಾಗೂ ಉಳಿಯಾದಲ್ಲಿ 3 ಮನೆ, ಹೊಸಂಗಡಿಯಲ್ಲಿ 25, ಕಲ್ಲಬೆಟ್ಟುನಲ್ಲಿ 1 ಮನೆ ಸ್ಥಳಾಂತರಕ್ಕೆ ಪುರಸಭೆ ಮುಖ್ಯಾಧಿಕಾರಿ ಸೂಚನೆ ನೀಡಿದ್ದಾರೆ. ಒಂದು ಕುಟುಂಬ ಮಾರೂರಿನ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿದೆ. ಕಲ್ಲಬೆಟ್ಟುನಲ್ಲಿರುವ ಪೌರ ಕಾರ್ಮಿಕರನ್ನು ಸಮಾಜ ಮಂದಿರಕ್ಕೆ ಸ್ಥಳಾಂತರಿಸಲಾಗಿದೆ.</p>.<p>ಮಾರೂರು-ಹೊಸಂಗಡಿ ಗಡಿ ಪ್ರದೇಶದ ಹೊಸಂಗಡಿ ಸೇತುವೆ ಬಳಿ ಸುಮಾರು 20 ಮನೆಗಳಿಗೆ ನೀರು ನುಗ್ಗಿವೆ. ಒಂದು ಮನೆ ಕುಸಿದಿದ್ದು, ಮತ್ತೊಂದು ಮನೆಗೆ ಭಾಗಶಃ ಹಾನಿಯಾಗಿದೆ.</p>.<p>ಶಿರ್ತಾಡಿ ಕಜೆ, ಲಾಂಬುದೇಲು ಬಳಿ ಮನೆಗೆ ಗುಡ್ಡ ಕುಸಿದು ಹಾನಿಯಾಗಿದೆ. ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಪಿ ಹಾಗೂ ಮನೆ ಹಾನಿಗೀಡಾದವರಿಗೆ ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>