<p><strong>ಮಂಗಳೂರು</strong>: ಜೆಪ್ಪುವಿನ ಸೇಂಟ್ ಜೋಸೆಫ್ ಇನ್ಸ್ಟಿಟ್ಯೂಟ್ ಆಫ್ ಫಿಲಾಸಫಿ ಕಾಲೇಜನ್ನು ತತ್ವಶಾಸ್ತ್ರದ ಉನ್ನತ ಶಿಕ್ಷಣ ಸಂಸ್ಥೆಯಾಗಿ ಘೋಷಿಸಲಾಗಿದೆ.</p>.<p>ಗುರುಮಠದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಂಗಳೂರಿನ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ, ಬೆಂಗಳೂರಿನ ಧರ್ಮಾರಾಂ ವಿದ್ಯಾ ಕ್ಷೇತ್ರದ ಮ್ಯಾಥ್ಯೂ ಅಟ್ಟುಂಕಲ್ ಸಿಎಂಐ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಲಾಯತು. </p>.<p>ಮ್ಯಾಥ್ಯೂ ಅಟ್ಟುಂಕಲ್, ‘ಐದು ವರ್ಷಗಳ ಅವಧಿಗೆ ಪ್ರಾಯೋಗಿಕವಾಗಿ ಈ ಮನ್ನಣೆ ದೊರೆತಿದೆ. ಈ ಸಂಸ್ಥೆಯಿಂದ ಪಡೆದ ಪದವಿ ಪ್ರಮಾಣ ಪತ್ರ ಅಂತರರಾಷ್ಟ್ರೀಯ ಮಾನ್ಯತೆ ಹೊಂದಿದೆ. ಈ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಅವಕಾಶ ಇದೆ’ ಎಂದರು.</p>.<p>ಜಾರ್ಜ್ ಕುಲಂಕರ ಪರಿಚಯಿಸಿದರು. ರೆಕ್ಟರ್ ರೊನಾಲ್ಡ್ ಸ್ವಾಗತಿಸಿದರು. ಮನೋಜ್ ಮ್ಯಾಥ್ಯೂ ವಂದಿಸಿದರು.</p>.<p>ಸೇಂಟ್ ಜೋಸೆಫ್ ಇನ್ಸ್ಟಿಟ್ಯೂಟ್ ಆಫ್ ಫಿಲಾಸಫಿಯ ನಿರ್ದೇಶಕ ಐವನ್ ಡಿಸೋಜ, ಅಲೋಶಿಯಸ್ ಪಾವ್ಲ್ ಡಿ ಸೋಜ, ಜೋಸೆಫ್ ಮಾರ್ಟಿಸ್, ಧರ್ಮಭಗಿನಿ ಲಿಲ್ಲಿ ಪಿರೇರಾ, ರಾಕಿ ಡಿಕುನ್ಹಾ ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಜೆಪ್ಪುವಿನ ಸೇಂಟ್ ಜೋಸೆಫ್ ಇನ್ಸ್ಟಿಟ್ಯೂಟ್ ಆಫ್ ಫಿಲಾಸಫಿ ಕಾಲೇಜನ್ನು ತತ್ವಶಾಸ್ತ್ರದ ಉನ್ನತ ಶಿಕ್ಷಣ ಸಂಸ್ಥೆಯಾಗಿ ಘೋಷಿಸಲಾಗಿದೆ.</p>.<p>ಗುರುಮಠದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಂಗಳೂರಿನ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ, ಬೆಂಗಳೂರಿನ ಧರ್ಮಾರಾಂ ವಿದ್ಯಾ ಕ್ಷೇತ್ರದ ಮ್ಯಾಥ್ಯೂ ಅಟ್ಟುಂಕಲ್ ಸಿಎಂಐ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಲಾಯತು. </p>.<p>ಮ್ಯಾಥ್ಯೂ ಅಟ್ಟುಂಕಲ್, ‘ಐದು ವರ್ಷಗಳ ಅವಧಿಗೆ ಪ್ರಾಯೋಗಿಕವಾಗಿ ಈ ಮನ್ನಣೆ ದೊರೆತಿದೆ. ಈ ಸಂಸ್ಥೆಯಿಂದ ಪಡೆದ ಪದವಿ ಪ್ರಮಾಣ ಪತ್ರ ಅಂತರರಾಷ್ಟ್ರೀಯ ಮಾನ್ಯತೆ ಹೊಂದಿದೆ. ಈ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಅವಕಾಶ ಇದೆ’ ಎಂದರು.</p>.<p>ಜಾರ್ಜ್ ಕುಲಂಕರ ಪರಿಚಯಿಸಿದರು. ರೆಕ್ಟರ್ ರೊನಾಲ್ಡ್ ಸ್ವಾಗತಿಸಿದರು. ಮನೋಜ್ ಮ್ಯಾಥ್ಯೂ ವಂದಿಸಿದರು.</p>.<p>ಸೇಂಟ್ ಜೋಸೆಫ್ ಇನ್ಸ್ಟಿಟ್ಯೂಟ್ ಆಫ್ ಫಿಲಾಸಫಿಯ ನಿರ್ದೇಶಕ ಐವನ್ ಡಿಸೋಜ, ಅಲೋಶಿಯಸ್ ಪಾವ್ಲ್ ಡಿ ಸೋಜ, ಜೋಸೆಫ್ ಮಾರ್ಟಿಸ್, ಧರ್ಮಭಗಿನಿ ಲಿಲ್ಲಿ ಪಿರೇರಾ, ರಾಕಿ ಡಿಕುನ್ಹಾ ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>