‘ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಬಿಡುವುದಿಲ್ಲ’
‘ಕಾಂಗ್ರೆಸ್ಗೆ ಎಚ್ಚರಿಕೆ ನೀಡುತ್ತೇನೆ. ಹಿಂದೂ ಧರ್ಮವನ್ನು ಬಿಟ್ಟು ನಿಮ್ಮ ರಾಜಕೀಯ ನೀವು ಮಾಡಿ. ಧರ್ಮ–ಗಿರ್ಮ ಅಧರ್ಮಿಗಳಗೆ ಆಗುವ ವಿಷಯ ಅಲ್ಲ. ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಖಂಡಿತಾ ಬಿಡುವ ಪ್ರಶ್ನೆಯೇ ಇಲ್ಲ. ಎಷ್ಟರ ಮಟ್ಟಿಗೆ ಹೋಗಬೇಕೋ ಆ ಎತ್ತರದವರೆಗೆ ಹೋಗಲು ಸಿದ್ಧ. ನೀವು ಭಯೋತ್ಪಾದಕರು ಎಂದು ಬೇಕಾದರೆ ನನ್ನ ಮೇಲೆ ಕೇಸ್ ಹಾಕಿ ಒಳಗೆ ಹಾಕಿ. ನಾನೊಬ್ಬ ಹೋದರೆ ಮತ್ತೆ ಎಷ್ಟೊ ಶಾಸಕರು ಅದೇ ಕೆಲಸ ಮಾಡುತ್ತಾರೆ. ನಾವಿಷ್ಟೂ ಶಾಸಕರು ಒಳಗೆ ಹೋದರೆ ಕಾರ್ಯಕರ್ತರು ಆ ಕೆಲಸ ಮಾಡುತ್ತಾರೆ ಎಂಬ ಧೈರ್ಯ ನಮಗಿದೆ‘ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.