ವಾಮಂಜೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು– ಪ್ರಜಾವಾಣಿ ಚಿತ್ರ
‘ಮಹಿಳೆಯರು ಉದ್ಯೋಗದಾತರಾಗಿ’
ಕರ್ನಾಟಕ ಡಿಜಿಟಲ್ ಎಕಾನಾಮಿ ಮಿಷನ್ ಸಿಇಒ ಸಂಜೀವ್ ಗುಪ್ತ ಕಾರ್ಯಕ್ರಮ ಉದ್ಘಾಟಿಸಿದರು. ‘ಸ್ಟಾರ್ಟ್ಅಪ್ಗಳನ್ನು ಆರಂಭಿಸುವಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಮಂಗಳೂರಿನಲ್ಲೂ 150ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಇವೆ. ಹೆಲ್ತ್ಕೇರ್ ಗೇಮಿಂಗ್ ಮೊದಲಾದ ಕ್ಷೇತ್ರಗಳು ಹೆಚ್ಚು ಚಾಲ್ತಿಯಲ್ಲಿವೆ. ಉದ್ಯಮ ಕ್ಷೇತ್ರ ಇಷ್ಟು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದು ಇದರಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಇದ್ದರೆ ಇದು ಇನ್ನಷ್ಟು ಯಶಸ್ಸು ಕಾಣುತ್ತದೆ. ವೈವಾಹಿಕ ಜೀವನದ ನಡುವಿನ ಸಣ್ಣ ವಿರಾಮದ ನಂತರ ಮಹಿಳೆಯರು ವೃತ್ತಿ ಬದುಕಿಗೆ ವಿದಾಯ ಹೇಳದೆ ಮತ್ತೆ ಕ್ರಿಯಾಶೀಲರಾಗಬೇಕು. ಉದ್ಯೋಗಿ ಆಗುವುದಕ್ಕಿಂತ ಹೆಚ್ಚಾಗಿ ಉದ್ಯೋಗದಾತರಾಗಲು ಯೋಚಿಸಬೇಕು’ ಎಂದು ಹೇಳಿದರು.