<p><strong>ಮಂಗಳೂರು:</strong> ನಗರದ ವೈದ್ಯಕೀಯ ಕಾಲೇಜುಗಳಲ್ಲಿ ಮಾದಕ ಪದಾರ್ಥ ಸೇವನೆ ಮತ್ತು ಮಾರಾಟ ಜಾಲದಲ್ಲಿ ತೊಡಗಿದ್ದ ವೈದ್ಯರು ಹಾಗೂ ವೈದ್ಯವಿದ್ಯಾರ್ಥಿಗಳನ್ನು ಬಂಧಿಸಿದ ಘಟನೆ 2023ರಲ್ಲೇ ವರ್ಷಾರಂಭದಲ್ಲೇ ಗಮನ ಸೆಳೆಯಿತು. ಈ ಪ್ರಕರಣದಲ್ಲಿ ಒಟ್ಟು 24 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅನಿವಾಸಿ ಭಾರತೀಯ ಇಂಗ್ಲೆಂಡ್ನ ಪ್ರಜೆ ನೀಲ್ಕಿಶೋರ್ ರಾಮ್ಜಿ ಷಾ (38) ಎಂಬಾತನನ್ನು ಜನವರಿಯಲ್ಲಿ ಬಂಧಿಸಿದ್ದ ಪೊಲೀಸರು ನಂತರ ಈ ಜಾಲದ ಬೆನ್ನುಬಿದ್ದಿದ್ದರು. </p>.<p>ಬಿಜೈ ಕಾಪಿಕಾಡ್ನ ಅಪಾರ್ಟ್ಮೆಂಟ್ ಸಮುಚ್ಚಯದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಯ (ಶೈಲಜಾ ರಾವ್ ) ನರಳಾಟ ನೋಡಲಾಗದೇ, ಪತ್ನಿಯನ್ನು ಪತಿಯೇ (ದಿನೇಶ್ ರಾವ್) ಉಸಿರುಗಟ್ಟಿಸಿ ಸಾಯಿಸಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜನವರಿಯಲ್ಲಿ ನಡೆಯಿತು. </p>.<p>ಉಪ್ಪಿನಂಗಡಿ ಬಳಿಯ ಕೊಯಿಲ ಗ್ರಾಮದ ಸಹೋದರರಿಬ್ಬರನ್ನು ಅಪಹರಿಸಿ ಗೃಹಬಂಧನದಲ್ಲಿಟ್ಟು ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣದ ಐವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಜನವರಿಯಲ್ಲಿ ಬಂಧಿಸಿದರು.</p>.<p>ನಗರದ ಕೆ.ಎಸ್.ರಾವ್ ರಸ್ತೆಯ ವಸತಿ ಗೃಹವೊಂದರಲ್ಲಿ ಮೈಸೂರು ಮೂಲದ ಒಂದೇ ಕುಟುಂಬದ ನಾಲ್ವರು ಮಾರ್ಚ್ನಲ್ಲಿ ಆತ್ಮಹತ್ಯೆ ಮಾಡಿಕೊಂಡರು.</p>.<p>ಪುತ್ತೂರು ಮಹಿಳಾ ಠಾಣೆಯ ಸಮೀಪದಲ್ಲೇ ಯುವಕನೊಬ್ಬ ಯುವತಿಯ (ಗೌರಿ) ಕುತ್ತಿಗೆಗೆ ಚೂರಿಯಿಂದ ಇರಿದು ಹಾಡಹಗಲೇ ಕೊಲೆ ಮಾಡಿದ ಘಟನೆ ಆಗಸ್ಟ್ನಲ್ಲಿ ನಡೆಯಿತು. ಆರೋಪಿ ಪದ್ಮರಾಜ್ ಎಂಬಾತನ್ನು ಪೊಲೀಸರು ಬಂಧಿಸಿದರು. </p>.<p>ಆಧಾರ್ ಆಧರಿತ ಪಾವತಿ ವ್ಯವಸ್ಥೆಯನ್ನು (ಎಇಪಿಎಸ್) ದುರ್ಬಳಕೆ ಮಾಡಿಕೊಂಡು ಆನ್ಲೈನ್ನಲ್ಲಿ ವಂಚನೆ ನಡೆಸುತ್ತಿದ್ದ ಪ್ರಕರಣ ಅಕ್ಟೋಬರ್ನಲ್ಲಿ ಗಮನ ಸೆಳೆಯಿತು. ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಹಣ ಪಾವತಿ ಮಾಡಿದವ ಖಾತೆಯಿಂದ ಅವರಿಗೆ ತಿಳಿಯದಂತೆ ಆರೋಪಿಗಳು ಹಣ ಡ್ರಾ ಮಾಡಿದ್ದರು. ಈ ಜಾಲದಲ್ಲಿ ತೊಡಗಿದ್ದ ಬಿಹಾರದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದರು. </p>.<p>ಹೆಸರಾಂತ ಉದ್ಯಮಿ ಮುಂಡ್ಕೂರು ರಾಮದಾಸ್ ಕಾಮತ್ (ಎಂ.ಆರ್.ಕಾಮತ್) ಅವರು ಅಕ್ಟೋಬರ್ ತಿಂಗಳಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದರು. </p>.<p>ಪುತ್ತೂರಿನ ನೆಹರೂನಗರದಲ್ಲಿ ‘ಕಲ್ಲೇಗ ಟೈಗರ್ಸ್’ ಹುಲಿವೇಷ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ (26) ಅವರನ್ನು ನಾಲ್ವರು ದುಷ್ಕರ್ಮಿಗಳ ತಂಡ ಸೋಮವಾರ ರಾತ್ರಿ ತಲವಾರಿನಿಂದ ಕಡಿದು ಹತ್ಯೆ ಮಾಡಿತು. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದರು.</p>.<p>ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೋಮುದ್ವೇಷ ನಿಗ್ರಹ ದಳ ಸ್ಥಾಪಿಸಲಾಯಿತು. ಆ ಬಳಿಕವೂ ಮತೀಯ ಗೂಂಡಾಗಿರಿ ಪ್ರಕರಣಗಳು ಮರುಕಳಿಸಿದವು.</p>.<p>ನಗರದ ವಿವಿಧೆಡೆ ದೇವಸ್ಥಾನಗಳ ಜಾತ್ರೆಗಳ ಸಂದರ್ಭದಲ್ಲಿ ಹಿಂದೂವೇತರರಿಗೆ ವ್ಯಾಪಾರಕ್ಕೆ ನಿಷೇಧಿಸಿದ ಬೆಳವಣಿಗೆಗಳು ಮತ್ತೆ ಮರುಕಳಿಸಿದವು.</p>.<p>ಹಿರಿಯರು ಮಾತ್ರ ಇರುವ ಮನೆಗಳಿಗೆ ಪೊಲೀಸರು ಖುದ್ದಾಗಿ ತೆರಳಿ ಯೋಗಕ್ಷೇಮ ವಿಚಾರಸುವುದು, ಮಾದಕ ದ್ರವ್ಯ ಸೇವನೆ ವ್ಯಸನಮುಕ್ತರಿಗೆ ಕೌನ್ಸೆಲಿಂಗ್ ನಡೆಸುವುದು, ಜನರ ಪ್ರತಿಕ್ರಿಯೆ ಪಡೆಯಲು ಠಾಣೆಗಳಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಮುಂತಾದ ಜನಸ್ನೇಹಿ ಕ್ರಮಗಳನ್ನು ಪೊಲೀಸ್ ಇಲಾಖೆ ಆರಂಭಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ನಗರದ ವೈದ್ಯಕೀಯ ಕಾಲೇಜುಗಳಲ್ಲಿ ಮಾದಕ ಪದಾರ್ಥ ಸೇವನೆ ಮತ್ತು ಮಾರಾಟ ಜಾಲದಲ್ಲಿ ತೊಡಗಿದ್ದ ವೈದ್ಯರು ಹಾಗೂ ವೈದ್ಯವಿದ್ಯಾರ್ಥಿಗಳನ್ನು ಬಂಧಿಸಿದ ಘಟನೆ 2023ರಲ್ಲೇ ವರ್ಷಾರಂಭದಲ್ಲೇ ಗಮನ ಸೆಳೆಯಿತು. ಈ ಪ್ರಕರಣದಲ್ಲಿ ಒಟ್ಟು 24 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅನಿವಾಸಿ ಭಾರತೀಯ ಇಂಗ್ಲೆಂಡ್ನ ಪ್ರಜೆ ನೀಲ್ಕಿಶೋರ್ ರಾಮ್ಜಿ ಷಾ (38) ಎಂಬಾತನನ್ನು ಜನವರಿಯಲ್ಲಿ ಬಂಧಿಸಿದ್ದ ಪೊಲೀಸರು ನಂತರ ಈ ಜಾಲದ ಬೆನ್ನುಬಿದ್ದಿದ್ದರು. </p>.<p>ಬಿಜೈ ಕಾಪಿಕಾಡ್ನ ಅಪಾರ್ಟ್ಮೆಂಟ್ ಸಮುಚ್ಚಯದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಯ (ಶೈಲಜಾ ರಾವ್ ) ನರಳಾಟ ನೋಡಲಾಗದೇ, ಪತ್ನಿಯನ್ನು ಪತಿಯೇ (ದಿನೇಶ್ ರಾವ್) ಉಸಿರುಗಟ್ಟಿಸಿ ಸಾಯಿಸಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜನವರಿಯಲ್ಲಿ ನಡೆಯಿತು. </p>.<p>ಉಪ್ಪಿನಂಗಡಿ ಬಳಿಯ ಕೊಯಿಲ ಗ್ರಾಮದ ಸಹೋದರರಿಬ್ಬರನ್ನು ಅಪಹರಿಸಿ ಗೃಹಬಂಧನದಲ್ಲಿಟ್ಟು ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣದ ಐವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಜನವರಿಯಲ್ಲಿ ಬಂಧಿಸಿದರು.</p>.<p>ನಗರದ ಕೆ.ಎಸ್.ರಾವ್ ರಸ್ತೆಯ ವಸತಿ ಗೃಹವೊಂದರಲ್ಲಿ ಮೈಸೂರು ಮೂಲದ ಒಂದೇ ಕುಟುಂಬದ ನಾಲ್ವರು ಮಾರ್ಚ್ನಲ್ಲಿ ಆತ್ಮಹತ್ಯೆ ಮಾಡಿಕೊಂಡರು.</p>.<p>ಪುತ್ತೂರು ಮಹಿಳಾ ಠಾಣೆಯ ಸಮೀಪದಲ್ಲೇ ಯುವಕನೊಬ್ಬ ಯುವತಿಯ (ಗೌರಿ) ಕುತ್ತಿಗೆಗೆ ಚೂರಿಯಿಂದ ಇರಿದು ಹಾಡಹಗಲೇ ಕೊಲೆ ಮಾಡಿದ ಘಟನೆ ಆಗಸ್ಟ್ನಲ್ಲಿ ನಡೆಯಿತು. ಆರೋಪಿ ಪದ್ಮರಾಜ್ ಎಂಬಾತನ್ನು ಪೊಲೀಸರು ಬಂಧಿಸಿದರು. </p>.<p>ಆಧಾರ್ ಆಧರಿತ ಪಾವತಿ ವ್ಯವಸ್ಥೆಯನ್ನು (ಎಇಪಿಎಸ್) ದುರ್ಬಳಕೆ ಮಾಡಿಕೊಂಡು ಆನ್ಲೈನ್ನಲ್ಲಿ ವಂಚನೆ ನಡೆಸುತ್ತಿದ್ದ ಪ್ರಕರಣ ಅಕ್ಟೋಬರ್ನಲ್ಲಿ ಗಮನ ಸೆಳೆಯಿತು. ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಹಣ ಪಾವತಿ ಮಾಡಿದವ ಖಾತೆಯಿಂದ ಅವರಿಗೆ ತಿಳಿಯದಂತೆ ಆರೋಪಿಗಳು ಹಣ ಡ್ರಾ ಮಾಡಿದ್ದರು. ಈ ಜಾಲದಲ್ಲಿ ತೊಡಗಿದ್ದ ಬಿಹಾರದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದರು. </p>.<p>ಹೆಸರಾಂತ ಉದ್ಯಮಿ ಮುಂಡ್ಕೂರು ರಾಮದಾಸ್ ಕಾಮತ್ (ಎಂ.ಆರ್.ಕಾಮತ್) ಅವರು ಅಕ್ಟೋಬರ್ ತಿಂಗಳಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದರು. </p>.<p>ಪುತ್ತೂರಿನ ನೆಹರೂನಗರದಲ್ಲಿ ‘ಕಲ್ಲೇಗ ಟೈಗರ್ಸ್’ ಹುಲಿವೇಷ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ (26) ಅವರನ್ನು ನಾಲ್ವರು ದುಷ್ಕರ್ಮಿಗಳ ತಂಡ ಸೋಮವಾರ ರಾತ್ರಿ ತಲವಾರಿನಿಂದ ಕಡಿದು ಹತ್ಯೆ ಮಾಡಿತು. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದರು.</p>.<p>ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೋಮುದ್ವೇಷ ನಿಗ್ರಹ ದಳ ಸ್ಥಾಪಿಸಲಾಯಿತು. ಆ ಬಳಿಕವೂ ಮತೀಯ ಗೂಂಡಾಗಿರಿ ಪ್ರಕರಣಗಳು ಮರುಕಳಿಸಿದವು.</p>.<p>ನಗರದ ವಿವಿಧೆಡೆ ದೇವಸ್ಥಾನಗಳ ಜಾತ್ರೆಗಳ ಸಂದರ್ಭದಲ್ಲಿ ಹಿಂದೂವೇತರರಿಗೆ ವ್ಯಾಪಾರಕ್ಕೆ ನಿಷೇಧಿಸಿದ ಬೆಳವಣಿಗೆಗಳು ಮತ್ತೆ ಮರುಕಳಿಸಿದವು.</p>.<p>ಹಿರಿಯರು ಮಾತ್ರ ಇರುವ ಮನೆಗಳಿಗೆ ಪೊಲೀಸರು ಖುದ್ದಾಗಿ ತೆರಳಿ ಯೋಗಕ್ಷೇಮ ವಿಚಾರಸುವುದು, ಮಾದಕ ದ್ರವ್ಯ ಸೇವನೆ ವ್ಯಸನಮುಕ್ತರಿಗೆ ಕೌನ್ಸೆಲಿಂಗ್ ನಡೆಸುವುದು, ಜನರ ಪ್ರತಿಕ್ರಿಯೆ ಪಡೆಯಲು ಠಾಣೆಗಳಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಮುಂತಾದ ಜನಸ್ನೇಹಿ ಕ್ರಮಗಳನ್ನು ಪೊಲೀಸ್ ಇಲಾಖೆ ಆರಂಭಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>