<p><strong>ದಾವಣಗೆರೆ</strong>: ವ್ಯಾಪಾರಿಯಿಂದ ಅಡಿಕೆ ಖರೀದಿಸಿ ₹ 86. 86 ಲಕ್ಷದಷ್ಟು ವಂಚನೆ ಮಾಡಿರುವ ಘಟನೆ ನಡೆದಿದೆ.</p>.<p>ಹೊನ್ನಾಳಿ ತಾಲ್ಲೂಕಿನ ಎಂ.ಆರ್.ಕೆ ಟ್ರೇಡರ್ಸ್ ಝಾಕೀರ್ ವಂಚನೆಗೆ ಒಳಗಾದವರು. ನವದೆಹಲಿಯ ವಿವೇಕ್ ಬ್ರದರ್ಸ್ನ ಮಯಾಂಕ್ ಶೇಖರ್ ಗುಪ್ತ ಮೋಸ ಮಾಡಿದವರು.</p>.<p>ಝಾಕೀರ್ ಅಡಿಕೆ ವ್ಯಾಪಾರ ಮಾಡುತ್ತಿದ್ದು, ಸಣ್ಣ ಪ್ರಮಾಣದ ಅಡಿಕೆಯನ್ನು ಶಿವಮೊಗ್ಗದ ಪ್ರಶಾಂತ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದರು. ಪ್ರಶಾಂತ್ ಇದೇ ಅಡಿಕೆಯನ್ನು ದೆಹಲಿಯ ವಿವೇಕ್ ಬ್ರದರ್ಸ್ ಟ್ರೇಡಿಂಗ್ ಕಂಪನಿಗೆ ಮಾರಾಟ ಮಾಡುತ್ತಿದ್ದ.</p>.<p>ರೈತರಿಂದ ಖರೀದಿಸಿದ ಮಾಲನ್ನು ನೇರವಾಗಿ ವಿವೇಕ್ ಬ್ರದರ್ಸ್ಗೆ ಮಾರಾಟ ಮಾಡಬೇಕೆಂದು ನಿರ್ಧರಿಸಿ ಝಾಕೀರ್ ಪ್ರಶಾಂತ್ ಅವರ ಬಳಿ ಸಹಾಯ ಕೇಳಿದಾಗ, ಪ್ರಶಾಂತ್ ವಿವೇಕ್ ಬ್ರದರ್ಸ್ ಅವರೊಂದಿಗೆ ವ್ಯವಹರಿಸುವಂತೆ ಸೂಚಿಸಿದ. </p>.<p>ಅದರಂತೆ ಝಾಕೀರ್ ಅವರು ಕೆ.ಜಿಗೆ ₹272ರಂತೆ 70 ಕೆಜಿಯ 350 ಚೀಲಗಳಲ್ಲಿ ಅಡಿಕೆಯನ್ನು ವಿವೇಕ್ ಬ್ರದರ್ಸ್ ಮಾಲೀಕ ಮಯಾಂಕ್ ಶೇಖರ್ ಗುಪ್ತ ಅವರಿಗೆ ಕಳುಹಿಸಿದ್ದು, ಮತ್ತೊಂದು ಲೋಡ್ ಬೇಕು ಎಂದು ತಿಳಿಸಿದಾಗ ಅದನ್ನೂ ಕಳುಹಿಸಿದ್ದು, ಒಟ್ಟು ಅಡಿಕೆ ಲೋಡಿನ ಮೌಲ್ಯ ₹1,41ಕೋಟಿ ಬೆಲೆ ಆಗಿತ್ತು. ಅದರಲ್ಲಿ ವಿವೇಕ್ ಬ್ರದರ್ಸ್ ಎರಡು ಹಂತಗಲ್ಲಿ ₹55 ಲಕ್ಷ ಪಾವತಿಸಿದ್ದು, ಉಳಿದ ಹಣವನ್ನು ಪಾವತಿಸಿಲ್ಲ. ಕೆಲವೊಮ್ಮೆ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.</p>.<p>ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ವ್ಯಾಪಾರಿಯಿಂದ ಅಡಿಕೆ ಖರೀದಿಸಿ ₹ 86. 86 ಲಕ್ಷದಷ್ಟು ವಂಚನೆ ಮಾಡಿರುವ ಘಟನೆ ನಡೆದಿದೆ.</p>.<p>ಹೊನ್ನಾಳಿ ತಾಲ್ಲೂಕಿನ ಎಂ.ಆರ್.ಕೆ ಟ್ರೇಡರ್ಸ್ ಝಾಕೀರ್ ವಂಚನೆಗೆ ಒಳಗಾದವರು. ನವದೆಹಲಿಯ ವಿವೇಕ್ ಬ್ರದರ್ಸ್ನ ಮಯಾಂಕ್ ಶೇಖರ್ ಗುಪ್ತ ಮೋಸ ಮಾಡಿದವರು.</p>.<p>ಝಾಕೀರ್ ಅಡಿಕೆ ವ್ಯಾಪಾರ ಮಾಡುತ್ತಿದ್ದು, ಸಣ್ಣ ಪ್ರಮಾಣದ ಅಡಿಕೆಯನ್ನು ಶಿವಮೊಗ್ಗದ ಪ್ರಶಾಂತ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದರು. ಪ್ರಶಾಂತ್ ಇದೇ ಅಡಿಕೆಯನ್ನು ದೆಹಲಿಯ ವಿವೇಕ್ ಬ್ರದರ್ಸ್ ಟ್ರೇಡಿಂಗ್ ಕಂಪನಿಗೆ ಮಾರಾಟ ಮಾಡುತ್ತಿದ್ದ.</p>.<p>ರೈತರಿಂದ ಖರೀದಿಸಿದ ಮಾಲನ್ನು ನೇರವಾಗಿ ವಿವೇಕ್ ಬ್ರದರ್ಸ್ಗೆ ಮಾರಾಟ ಮಾಡಬೇಕೆಂದು ನಿರ್ಧರಿಸಿ ಝಾಕೀರ್ ಪ್ರಶಾಂತ್ ಅವರ ಬಳಿ ಸಹಾಯ ಕೇಳಿದಾಗ, ಪ್ರಶಾಂತ್ ವಿವೇಕ್ ಬ್ರದರ್ಸ್ ಅವರೊಂದಿಗೆ ವ್ಯವಹರಿಸುವಂತೆ ಸೂಚಿಸಿದ. </p>.<p>ಅದರಂತೆ ಝಾಕೀರ್ ಅವರು ಕೆ.ಜಿಗೆ ₹272ರಂತೆ 70 ಕೆಜಿಯ 350 ಚೀಲಗಳಲ್ಲಿ ಅಡಿಕೆಯನ್ನು ವಿವೇಕ್ ಬ್ರದರ್ಸ್ ಮಾಲೀಕ ಮಯಾಂಕ್ ಶೇಖರ್ ಗುಪ್ತ ಅವರಿಗೆ ಕಳುಹಿಸಿದ್ದು, ಮತ್ತೊಂದು ಲೋಡ್ ಬೇಕು ಎಂದು ತಿಳಿಸಿದಾಗ ಅದನ್ನೂ ಕಳುಹಿಸಿದ್ದು, ಒಟ್ಟು ಅಡಿಕೆ ಲೋಡಿನ ಮೌಲ್ಯ ₹1,41ಕೋಟಿ ಬೆಲೆ ಆಗಿತ್ತು. ಅದರಲ್ಲಿ ವಿವೇಕ್ ಬ್ರದರ್ಸ್ ಎರಡು ಹಂತಗಲ್ಲಿ ₹55 ಲಕ್ಷ ಪಾವತಿಸಿದ್ದು, ಉಳಿದ ಹಣವನ್ನು ಪಾವತಿಸಿಲ್ಲ. ಕೆಲವೊಮ್ಮೆ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.</p>.<p>ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>