<p><strong>ಮಲೇಬೆನ್ನೂರು:</strong> ಎಚ್ಐವಿ ವೈರಸ್ ಅನ್ನು ದೂರಮಾಡಬೇಕೇ ಹೊರತು ಎಚ್ಐವಿ ಸೋಂಕಿತರನ್ನಲ್ಲ ಎಂದು ಮಲೇಬೆನ್ನೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಲಕ್ಷ್ಮಿದೇವಿ ತಿಳಿಸಿದರು.</p>.<p>ಪಟ್ಟಣದ ಬೀರಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಸಂಸ್ಥೆಗಳಿಂದ ಏರ್ಪಡಿಸಿದ್ದ ‘ಏಡ್ಸ್ ನಿಯಂತ್ರಣ’ ಹಾಗೂ ‘ಜನಸಂಖ್ಯಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಎಚ್ಐವಿ ವೈರಸ್ ದೇಹದಲ್ಲಿ ಒಮ್ಮೆ ಪ್ರವೇಶಿಸಿದರೆ ಯಾವ ಕಾರಣಕ್ಕೂ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಸೋಂಕಿತರು ನಿರಂತರವಾಗಿ ಔಷಧ ತೆಗೆದುಕೊಳ್ಳುತ್ತಿರಬೇಕು. ಇಲ್ಲದಿದ್ದಲ್ಲಿ ವೈರಸ್ ದೇಹದಲ್ಲಿರುವ ಬಿಳಿರಕ್ತ ಕಣಗಳನ್ನು ಕೊಲ್ಲುತ್ತಾ ಅಂತಿಮಾಗಿ ಏಡ್ಸ್ ಕಾಯಿಲೆಯಾಗಿ ಬದಲಾಗುತ್ತದೆ ಎಂದರು.</p>.<p>ಹರಿಹರ ಸರ್ಕಾರಿ ಆಸ್ಪತ್ರೆಯ ಆಪ್ತಸಮಾಲೋಚಕಿ ಶೈಲಜಾ ಪಾಟೀಲ್ ಮಾತನಾಡಿ, ‘ಸೋಂಕಿತರ ಜೊತೆ ವಾಸಿಸುವುದರಿಂದ, ಅವರನ್ನು ಮುಟ್ಟುವುದರಿಂದ ಅಥವಾ ಅಕ್ಕಪಕ್ಕ ಕುಳಿತುಕೊಳ್ಳುವುದರಿಂದ ಎಚ್ಐವಿ ವೈರಸ್ ಹರಡುವುದಿಲ್ಲ. ಸೋಂಕಿತರು ಬಳಸಿದ ಸೂಜಿ ಬಳಸುವುದರಿಂದ, ಸೋಂಕಿತರ ರಕ್ತ ಪಡೆಯುವುದರಿಂದ, ಗರ್ಭಿಣಿಯಿಂದ ಮಗುವಿಗೆ ಬರುವುದು, ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ವೈರಸ್ ಮನುಷ್ಯನ ದೇಹವನ್ನು ಸೇರುತ್ತದೆ’ ಎಂದು ಮಾಹಿತಿ ನೀಡಿದರು. </p>.<p>ಏಡ್ಸ್ ರೋಗದ ಲಕ್ಷಣ, ಹರಡುವಿಕೆ ಮತ್ತು ದುಷ್ಪರಿಣಾಮಗಳ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಫರ್ಧೆಯಲ್ಲಿ ರಾಧಿಕಾ ಪ್ರಥಮ, ಉಷಾ ದ್ವಿತೀಯ ಮತ್ತು ಚೈತ್ರಾ ತೃತೀಯ ಬಹುಮಾನವನ್ನು ಪಡೆದುಕೊಂಡರು. </p>.<p>ಆರೋಗ್ಯ ನಿರೀಕ್ಷಕ ಕಿರಣ್ ಕುಮಾರ್, ಲ್ಯಾಬ್ ಟೆಕ್ನೀಷಿಯನ್ ಪ್ರಶಾಂತ್, ಪ್ರಾಂಶುಪಾಲ ರಾಜಪ್ಪ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು:</strong> ಎಚ್ಐವಿ ವೈರಸ್ ಅನ್ನು ದೂರಮಾಡಬೇಕೇ ಹೊರತು ಎಚ್ಐವಿ ಸೋಂಕಿತರನ್ನಲ್ಲ ಎಂದು ಮಲೇಬೆನ್ನೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಲಕ್ಷ್ಮಿದೇವಿ ತಿಳಿಸಿದರು.</p>.<p>ಪಟ್ಟಣದ ಬೀರಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಸಂಸ್ಥೆಗಳಿಂದ ಏರ್ಪಡಿಸಿದ್ದ ‘ಏಡ್ಸ್ ನಿಯಂತ್ರಣ’ ಹಾಗೂ ‘ಜನಸಂಖ್ಯಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಎಚ್ಐವಿ ವೈರಸ್ ದೇಹದಲ್ಲಿ ಒಮ್ಮೆ ಪ್ರವೇಶಿಸಿದರೆ ಯಾವ ಕಾರಣಕ್ಕೂ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಸೋಂಕಿತರು ನಿರಂತರವಾಗಿ ಔಷಧ ತೆಗೆದುಕೊಳ್ಳುತ್ತಿರಬೇಕು. ಇಲ್ಲದಿದ್ದಲ್ಲಿ ವೈರಸ್ ದೇಹದಲ್ಲಿರುವ ಬಿಳಿರಕ್ತ ಕಣಗಳನ್ನು ಕೊಲ್ಲುತ್ತಾ ಅಂತಿಮಾಗಿ ಏಡ್ಸ್ ಕಾಯಿಲೆಯಾಗಿ ಬದಲಾಗುತ್ತದೆ ಎಂದರು.</p>.<p>ಹರಿಹರ ಸರ್ಕಾರಿ ಆಸ್ಪತ್ರೆಯ ಆಪ್ತಸಮಾಲೋಚಕಿ ಶೈಲಜಾ ಪಾಟೀಲ್ ಮಾತನಾಡಿ, ‘ಸೋಂಕಿತರ ಜೊತೆ ವಾಸಿಸುವುದರಿಂದ, ಅವರನ್ನು ಮುಟ್ಟುವುದರಿಂದ ಅಥವಾ ಅಕ್ಕಪಕ್ಕ ಕುಳಿತುಕೊಳ್ಳುವುದರಿಂದ ಎಚ್ಐವಿ ವೈರಸ್ ಹರಡುವುದಿಲ್ಲ. ಸೋಂಕಿತರು ಬಳಸಿದ ಸೂಜಿ ಬಳಸುವುದರಿಂದ, ಸೋಂಕಿತರ ರಕ್ತ ಪಡೆಯುವುದರಿಂದ, ಗರ್ಭಿಣಿಯಿಂದ ಮಗುವಿಗೆ ಬರುವುದು, ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ವೈರಸ್ ಮನುಷ್ಯನ ದೇಹವನ್ನು ಸೇರುತ್ತದೆ’ ಎಂದು ಮಾಹಿತಿ ನೀಡಿದರು. </p>.<p>ಏಡ್ಸ್ ರೋಗದ ಲಕ್ಷಣ, ಹರಡುವಿಕೆ ಮತ್ತು ದುಷ್ಪರಿಣಾಮಗಳ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಫರ್ಧೆಯಲ್ಲಿ ರಾಧಿಕಾ ಪ್ರಥಮ, ಉಷಾ ದ್ವಿತೀಯ ಮತ್ತು ಚೈತ್ರಾ ತೃತೀಯ ಬಹುಮಾನವನ್ನು ಪಡೆದುಕೊಂಡರು. </p>.<p>ಆರೋಗ್ಯ ನಿರೀಕ್ಷಕ ಕಿರಣ್ ಕುಮಾರ್, ಲ್ಯಾಬ್ ಟೆಕ್ನೀಷಿಯನ್ ಪ್ರಶಾಂತ್, ಪ್ರಾಂಶುಪಾಲ ರಾಜಪ್ಪ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>