<p><strong>ಜಗಳೂರು</strong>: ಇಲ್ಲಿನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಕ್ರಿಮಿನಲ್, ಸಿವಿಲ್ ಸೆರಿದಂತೆ ವಿವಿಧ ಸ್ವರೂಪದ 522 ಪ್ರಕರಣಗಳು ಇತ್ಯರ್ಥವಾಗಿದ್ದು, ₹ 97.12 ಲಕ್ಷ ವಸೂಲಿಯಾಗಿದೆ.</p>.<p>3 ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದ ತಾಲ್ಲೂಕಿನ ದೇವಿಕೆರೆ ಗ್ರಾಮದ ದಂಪತಿಗೆ ಒಂದಾದರು.</p>.<p>‘ಜೀವನದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಜೀವನ ಅಮೂಲ್ಯವಾದದ್ದು. ನಿಮ್ಮ ಹಾಗೂ ನಿಮ್ಮ ಕಂದನ ಭವಿಷ್ಯದ ದೃಷ್ಟಿಯಿಂದ ಒಂದಾಗಿ ಹೋಗಿ’ ಎಂಬ ನ್ಯಾಯಾಧೀಶ ಆರ್. ಚೇತನ್ ಅವರ ಸಲಹೆಗೆ ಸಮ್ಮತಿಸಿದ ದಂಪತಿ ರಾಜಿ ಸಂಧಾನದ ನಂತರ ಒಂದಾಗಿ ಮನೆಗೆ ಮರಳಿದರು.</p>.<p>26 ಚೆಕ್ಬೌನ್ಸ್ ಪ್ರಕರಣಗಳು, 11 ಸಾಲ ಮರುಪಾವತಿ, 326 ಲಘು ಪ್ರಕರಣಗಳು, 74 ತಪ್ಪೊಪ್ಪಿಗೆ, ಜನನ ಪ್ರಮಾಣಪತ್ರಕ್ಕೆ ಸಂಬಂಧಿಸಿದ 62 ಪ್ರಕರಣಗಳು, 8 ಸಿವಿಲ್ ಸ್ವರೂಪದ ವ್ಯಾಜ್ಯಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣದ ಸೇರಿದಂತೆ ಒಟ್ಟು 522 ಪ್ರಕರಣಗಳು ಇತ್ಯರ್ಥವಾಗಿವೆ.</p>.<p>ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಅದಲಾತ್ನಲ್ಲಿ ಕಕ್ಷಿದಾರರು, ವಕೀಲರು, ಬ್ಯಾಂಕ್ ಅಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಕಿಕ್ಕಿರಿದು ನೆರೆದಿದ್ದರು.</p>.<p>ಹಲವು ವರ್ಷಗಳಿಂದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಕಕ್ಷಿದಾರರು ರಾಜಿ ಸಂಧಾನ ಮಾಡಿಕೊಂಡು ನಿರಾಳರಾದರು.</p>.<p>ಸಹಾಯಕ ಸರ್ಕಾರಿ ವಕೀಲರಾದ ಮಂಜುನಾಥ್, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್, ಕಾರ್ಯದರ್ಶಿ ಎ.ಕೆ. ಪರಶುರಾಮ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಹಣಮಂತ ಬೈರಗೊಂಡ, ಸುರೇಶ ನಾಯ್ಕ ಹಾಗೂ ಅಧಿಕಾರಿ ತೇಜಸ್ವಿನಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಗಳೂರು</strong>: ಇಲ್ಲಿನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಕ್ರಿಮಿನಲ್, ಸಿವಿಲ್ ಸೆರಿದಂತೆ ವಿವಿಧ ಸ್ವರೂಪದ 522 ಪ್ರಕರಣಗಳು ಇತ್ಯರ್ಥವಾಗಿದ್ದು, ₹ 97.12 ಲಕ್ಷ ವಸೂಲಿಯಾಗಿದೆ.</p>.<p>3 ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದ ತಾಲ್ಲೂಕಿನ ದೇವಿಕೆರೆ ಗ್ರಾಮದ ದಂಪತಿಗೆ ಒಂದಾದರು.</p>.<p>‘ಜೀವನದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಜೀವನ ಅಮೂಲ್ಯವಾದದ್ದು. ನಿಮ್ಮ ಹಾಗೂ ನಿಮ್ಮ ಕಂದನ ಭವಿಷ್ಯದ ದೃಷ್ಟಿಯಿಂದ ಒಂದಾಗಿ ಹೋಗಿ’ ಎಂಬ ನ್ಯಾಯಾಧೀಶ ಆರ್. ಚೇತನ್ ಅವರ ಸಲಹೆಗೆ ಸಮ್ಮತಿಸಿದ ದಂಪತಿ ರಾಜಿ ಸಂಧಾನದ ನಂತರ ಒಂದಾಗಿ ಮನೆಗೆ ಮರಳಿದರು.</p>.<p>26 ಚೆಕ್ಬೌನ್ಸ್ ಪ್ರಕರಣಗಳು, 11 ಸಾಲ ಮರುಪಾವತಿ, 326 ಲಘು ಪ್ರಕರಣಗಳು, 74 ತಪ್ಪೊಪ್ಪಿಗೆ, ಜನನ ಪ್ರಮಾಣಪತ್ರಕ್ಕೆ ಸಂಬಂಧಿಸಿದ 62 ಪ್ರಕರಣಗಳು, 8 ಸಿವಿಲ್ ಸ್ವರೂಪದ ವ್ಯಾಜ್ಯಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣದ ಸೇರಿದಂತೆ ಒಟ್ಟು 522 ಪ್ರಕರಣಗಳು ಇತ್ಯರ್ಥವಾಗಿವೆ.</p>.<p>ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಅದಲಾತ್ನಲ್ಲಿ ಕಕ್ಷಿದಾರರು, ವಕೀಲರು, ಬ್ಯಾಂಕ್ ಅಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಕಿಕ್ಕಿರಿದು ನೆರೆದಿದ್ದರು.</p>.<p>ಹಲವು ವರ್ಷಗಳಿಂದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಕಕ್ಷಿದಾರರು ರಾಜಿ ಸಂಧಾನ ಮಾಡಿಕೊಂಡು ನಿರಾಳರಾದರು.</p>.<p>ಸಹಾಯಕ ಸರ್ಕಾರಿ ವಕೀಲರಾದ ಮಂಜುನಾಥ್, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್, ಕಾರ್ಯದರ್ಶಿ ಎ.ಕೆ. ಪರಶುರಾಮ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಹಣಮಂತ ಬೈರಗೊಂಡ, ಸುರೇಶ ನಾಯ್ಕ ಹಾಗೂ ಅಧಿಕಾರಿ ತೇಜಸ್ವಿನಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>