<p><strong>ಸಂತೇಬೆನ್ನೂರು:</strong> ಇಲ್ಲಿನ ನೀರಾವರಿ ಇಲಾಖೆ ವಸತಿ ಗೃಹದ ನಿವೇಶನದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿದ್ದ ವಾರದ ಸಂತೆ ನಿರಂತರ ಮಳೆಯಿಂದಾಗಿ ಚತುಷ್ಪಥ ರಸ್ತೆಗೆ ಸ್ಥಳಾಂತರಗೊಂಡಿತು.</p>.<p>ತಾತ್ಕಾಲಿಕ ಸಂತೆ ಮೈದಾನ ಮಳೆಯಿಂದಾಗಿ ಕೆಸರುಗದ್ದೆಯಂತಾಗಿದ್ದು, ಗ್ರಾಹಕರು ಬಾರದ ಕಾರಣ ವ್ಯಾಪಾರಿಗಳು ರಸ್ತೆ ಬದಿ ಸಂತೆ ಸ್ಥಳಾಂತರಿಸಿದರು.</p>.<p>ಬೆಸ್ಕಾಂ ಕಚೇರಿಯಿಂದ ಪೊಲೀಸ್ ಠಾಣೆವರೆಗೆ ವ್ಯಾಪಾರಿಗಳ ಸಾಲು ಸಾಲು ಟೆಂಟ್ಗಳು ಕಾಣಿಸಿದವು. ರಸ್ತೆ ಮಧ್ಯದಲ್ಲಿ ಜನರು ಗುಂಪಿನ ಖರೀದಿ ಭರಾಟೆ ಜೋರಾಗಿತ್ತು. ಜನದಟ್ಟಣೆಯಿಂದ ವಾಹನ ಸಂಚಾರ ಒಂದೆಡೆ ದ್ವಿಪಥ ರಸ್ತೆಯಲ್ಲೇ ಸಾಗಿದವು.</p>.<p>ಸಂತೆ ನಡೆಸಲು ಶಾಶ್ವತ ಮೈದಾನ, ಕಟ್ಟಡ ಇಲ್ಲ. ಪ್ರತಿ ಗುರುವಾರ ಇಲ್ಲಿ ಸೇರುವ ಬೃಹತ್ ಸಂತೆಯಿಂದಾಗಿಯೇ ಗ್ರಾಮಕ್ಕೆ ಸಂತೇಬೆನ್ನೂರು ಎಂಬ ಹೆಸರು ಬಂದಿದೆ.</p>.<p>70-80ರ ದಶಕದವರೆಗೂ ಇಲ್ಲಿನ ಪುಷ್ಕರಿಣಿ ಬಳಿಯಲ್ಲಿಯೇ ಸಂತೆ ನಡೆಯುತ್ತಿತ್ತು. ಪುರಾತತ್ವ ಇಲಾಖೆ ತೆರವುಗೊಳಿಸದ ನಂತರ ಸಂತೆ ನೀರಾವರಿ ಇಲಾಖೆ ನಿವೇಶನದಲ್ಲಿ ನಡೆಯುತ್ತಿದೆ. ಸಂತೆ ನಡೆಸಲು ಶಾಶ್ವತ ಸೂರು ಕಲ್ಪಿಸಬೇಕು ಎಂದು ವ್ಯಾಪಾರಿಗಳು, ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಬೆನ್ನೂರು:</strong> ಇಲ್ಲಿನ ನೀರಾವರಿ ಇಲಾಖೆ ವಸತಿ ಗೃಹದ ನಿವೇಶನದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿದ್ದ ವಾರದ ಸಂತೆ ನಿರಂತರ ಮಳೆಯಿಂದಾಗಿ ಚತುಷ್ಪಥ ರಸ್ತೆಗೆ ಸ್ಥಳಾಂತರಗೊಂಡಿತು.</p>.<p>ತಾತ್ಕಾಲಿಕ ಸಂತೆ ಮೈದಾನ ಮಳೆಯಿಂದಾಗಿ ಕೆಸರುಗದ್ದೆಯಂತಾಗಿದ್ದು, ಗ್ರಾಹಕರು ಬಾರದ ಕಾರಣ ವ್ಯಾಪಾರಿಗಳು ರಸ್ತೆ ಬದಿ ಸಂತೆ ಸ್ಥಳಾಂತರಿಸಿದರು.</p>.<p>ಬೆಸ್ಕಾಂ ಕಚೇರಿಯಿಂದ ಪೊಲೀಸ್ ಠಾಣೆವರೆಗೆ ವ್ಯಾಪಾರಿಗಳ ಸಾಲು ಸಾಲು ಟೆಂಟ್ಗಳು ಕಾಣಿಸಿದವು. ರಸ್ತೆ ಮಧ್ಯದಲ್ಲಿ ಜನರು ಗುಂಪಿನ ಖರೀದಿ ಭರಾಟೆ ಜೋರಾಗಿತ್ತು. ಜನದಟ್ಟಣೆಯಿಂದ ವಾಹನ ಸಂಚಾರ ಒಂದೆಡೆ ದ್ವಿಪಥ ರಸ್ತೆಯಲ್ಲೇ ಸಾಗಿದವು.</p>.<p>ಸಂತೆ ನಡೆಸಲು ಶಾಶ್ವತ ಮೈದಾನ, ಕಟ್ಟಡ ಇಲ್ಲ. ಪ್ರತಿ ಗುರುವಾರ ಇಲ್ಲಿ ಸೇರುವ ಬೃಹತ್ ಸಂತೆಯಿಂದಾಗಿಯೇ ಗ್ರಾಮಕ್ಕೆ ಸಂತೇಬೆನ್ನೂರು ಎಂಬ ಹೆಸರು ಬಂದಿದೆ.</p>.<p>70-80ರ ದಶಕದವರೆಗೂ ಇಲ್ಲಿನ ಪುಷ್ಕರಿಣಿ ಬಳಿಯಲ್ಲಿಯೇ ಸಂತೆ ನಡೆಯುತ್ತಿತ್ತು. ಪುರಾತತ್ವ ಇಲಾಖೆ ತೆರವುಗೊಳಿಸದ ನಂತರ ಸಂತೆ ನೀರಾವರಿ ಇಲಾಖೆ ನಿವೇಶನದಲ್ಲಿ ನಡೆಯುತ್ತಿದೆ. ಸಂತೆ ನಡೆಸಲು ಶಾಶ್ವತ ಸೂರು ಕಲ್ಪಿಸಬೇಕು ಎಂದು ವ್ಯಾಪಾರಿಗಳು, ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>