<p><strong>ಹರಿಹರ</strong>: ಮಹರ್ಷಿ ವಾಲ್ಮೀಕಿ ಸ್ಮರಣೆಯಲ್ಲಿ, ವಾಲ್ಮೀಕಿ ಸಮುದಾಯದಲ್ಲಿ ಸಾಂಸ್ಕೃತಿಕ, ಸಂಘಟನೆಯ ಎಚ್ಚರಕ್ಕಾಗಿ ತಾಲ್ಲೂಕಿನ ರಾಜನಹಳ್ಳಿ ಗುರುಪೀಠದ ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ವಾಲ್ಮೀಕಿ ಜಾತ್ರೆ-2024ಗೆ ಶುಕ್ರವಾರ ತೆರೆಬಿದ್ದಿತು.</p>.<p>ಸಭಾಂಗಣ, ಊಟೋಪಚಾರ, ಮಹಿಳೆ ಮತ್ತು ಪುರುಷರ ಸುಸಜ್ಜಿತ ಶೌಚಾಲಯ ಸಂಕೀರ್ಣ ಸೇರಿದಂತೆ ಭಕ್ತರಿಗೆ ಈ ಬಾರಿ ಉತ್ತಮ ಸೌಲಭ್ಯಗಳು ದೊರಕಿದವು. ಶುಕ್ರವಾರ ನಡೆದ ರಥೋತ್ಸವದಲ್ಲಿ ನಾಡಿನ ವಿವಿಧೆಡೆಯಿಂದ ಬಂದಿದ್ದ ಸಮುದಾಯದ ಸಹಸ್ರಾರು ಜನರು ಭಾಗವಹಿಸಿ ಭಕ್ತಿಯ ಪರಾಕಾಷ್ಟೆ ಮೆರೆದರು.</p>.<p>ಶುಕ್ರವಾರ ಮಧ್ಯಾಹ್ನದಿಂದ ಆಡಳಿತ, ವಿಪಕ್ಷದ ರಾಜಕಾರಣಿಗಳ ಆಗಮನ, ಭಾಷಣ, ಘೋಷಣೆಗಳು ನಡೆದವು. ಸಮುದಾಯದ ಚಿತ್ರನಟ ಕಿಚ್ಚ ಸುದೀಪ್ ಈ ಬಾರಿ ಬಾರದಿರುವುದು ಸಮುದಾಯದ ಸಿನಿಮಾ ಪ್ರೇಮಿಗಳಿಗೆ ನಿರಾಶೆ ಮೂಡಿಸಿತು.</p>.<p>ಕಾರ್ಯಕ್ರಮ ನಡೆಯುವ ಸಭಾಂಗಣದಲ್ಲಿ ಈ ಸಿನಿಮಾ ಪ್ರೇಮಿಗಳು ಆಗಾಗ್ಗೆ ಕಿಚ್ಚ ಸುದೀಪ್ ಬಾವುಟ, ಬ್ಯಾನರ್ಗಳನ್ನು ಪ್ರದರ್ಶಿಸುತ್ತಿದ್ದರು. ಉಳಿದಂತೆ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಪ್ರದರ್ಶನಕ್ಕಿದ್ದ ಮಳಿಗೆಗಳು ಜನರಿಲ್ಲದೆ ಬಣಗುಡುತ್ತಿದ್ದವು. ಖಾಸಗಿ ವ್ಯಾಪಾರಿಗಳು ಹಾಕಿಕೊಂಡಿದ್ದ ಅಂಗಡಿಗಳಲ್ಲಿ ಅಲ್ಪ, ಸ್ವಲ್ಪ ವ್ಯಾಪಾರ ನಡೆಯಿತು. ಬರಗಾಲದ ಕಾರಣದಿಂದ ಹಿಂದಿನ ಜಾತ್ರೆಗಿಂತ ಈ ಬಾರಿ ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆ ಇತ್ತು.<br><br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ</strong>: ಮಹರ್ಷಿ ವಾಲ್ಮೀಕಿ ಸ್ಮರಣೆಯಲ್ಲಿ, ವಾಲ್ಮೀಕಿ ಸಮುದಾಯದಲ್ಲಿ ಸಾಂಸ್ಕೃತಿಕ, ಸಂಘಟನೆಯ ಎಚ್ಚರಕ್ಕಾಗಿ ತಾಲ್ಲೂಕಿನ ರಾಜನಹಳ್ಳಿ ಗುರುಪೀಠದ ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ವಾಲ್ಮೀಕಿ ಜಾತ್ರೆ-2024ಗೆ ಶುಕ್ರವಾರ ತೆರೆಬಿದ್ದಿತು.</p>.<p>ಸಭಾಂಗಣ, ಊಟೋಪಚಾರ, ಮಹಿಳೆ ಮತ್ತು ಪುರುಷರ ಸುಸಜ್ಜಿತ ಶೌಚಾಲಯ ಸಂಕೀರ್ಣ ಸೇರಿದಂತೆ ಭಕ್ತರಿಗೆ ಈ ಬಾರಿ ಉತ್ತಮ ಸೌಲಭ್ಯಗಳು ದೊರಕಿದವು. ಶುಕ್ರವಾರ ನಡೆದ ರಥೋತ್ಸವದಲ್ಲಿ ನಾಡಿನ ವಿವಿಧೆಡೆಯಿಂದ ಬಂದಿದ್ದ ಸಮುದಾಯದ ಸಹಸ್ರಾರು ಜನರು ಭಾಗವಹಿಸಿ ಭಕ್ತಿಯ ಪರಾಕಾಷ್ಟೆ ಮೆರೆದರು.</p>.<p>ಶುಕ್ರವಾರ ಮಧ್ಯಾಹ್ನದಿಂದ ಆಡಳಿತ, ವಿಪಕ್ಷದ ರಾಜಕಾರಣಿಗಳ ಆಗಮನ, ಭಾಷಣ, ಘೋಷಣೆಗಳು ನಡೆದವು. ಸಮುದಾಯದ ಚಿತ್ರನಟ ಕಿಚ್ಚ ಸುದೀಪ್ ಈ ಬಾರಿ ಬಾರದಿರುವುದು ಸಮುದಾಯದ ಸಿನಿಮಾ ಪ್ರೇಮಿಗಳಿಗೆ ನಿರಾಶೆ ಮೂಡಿಸಿತು.</p>.<p>ಕಾರ್ಯಕ್ರಮ ನಡೆಯುವ ಸಭಾಂಗಣದಲ್ಲಿ ಈ ಸಿನಿಮಾ ಪ್ರೇಮಿಗಳು ಆಗಾಗ್ಗೆ ಕಿಚ್ಚ ಸುದೀಪ್ ಬಾವುಟ, ಬ್ಯಾನರ್ಗಳನ್ನು ಪ್ರದರ್ಶಿಸುತ್ತಿದ್ದರು. ಉಳಿದಂತೆ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಪ್ರದರ್ಶನಕ್ಕಿದ್ದ ಮಳಿಗೆಗಳು ಜನರಿಲ್ಲದೆ ಬಣಗುಡುತ್ತಿದ್ದವು. ಖಾಸಗಿ ವ್ಯಾಪಾರಿಗಳು ಹಾಕಿಕೊಂಡಿದ್ದ ಅಂಗಡಿಗಳಲ್ಲಿ ಅಲ್ಪ, ಸ್ವಲ್ಪ ವ್ಯಾಪಾರ ನಡೆಯಿತು. ಬರಗಾಲದ ಕಾರಣದಿಂದ ಹಿಂದಿನ ಜಾತ್ರೆಗಿಂತ ಈ ಬಾರಿ ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆ ಇತ್ತು.<br><br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>