<p><strong>ಬಸವಾಪಟ್ಟಣ</strong>: ಪ್ರಸಕ್ತ ವರ್ಷ ಸಾಕಷ್ಟು ಮಳೆಬಿದ್ದರೂ ಸಮೀಪದ ದಾಗಿನಕಟ್ಟೆಯ ಐತಿಹಾಸಿಕ ನಾಗತೀಕೆರೆಯಲ್ಲಿ ನೀರು ಶೇಖರಣೆಯಾಗದ ಕಾರಣ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.</p>.<p>ಮಳೆ ಆರಂಭವಾದ ದಿನದಿಂದಲೂ ಸಣ್ಣ ಪ್ರಮಾಣದಲ್ಲಿ ಬೀಳುತ್ತಿರುವುದರಿಂದ ಈ ಕೆರೆಗೆ ನೀರು ತರುವ ಹಾಲುವರ್ತಿಹಳ್ಳ ಮತ್ತು ಸಮೀಪದ ಗುಡ್ಡಗಳಿಂದ ಹರಿದು ಬರುವ ನೀರಿನ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ.</p>.<p>400 ವರ್ಷಗಳ ಹಿಂದೆ ಬಸವಾಪಟ್ಟಣದ ಪಾಳೆಯಗಾರ ಕೆಂಗಣ್ಣನಾಯಕನ ಪತ್ನಿ ನಾಗತೀಕೆರೆ ನಿರ್ಮಿಸಿದರು ಎಂಬ ಐತಿಹ್ಯವಿದೆ. ನಾಗತೀಕೆರೆಯು 149 ಎಕರೆ ವಿಸ್ತೀರ್ಣ ಹೊಂದಿದ್ದು, ಅಚ್ಚುಕಟ್ಟು ಪ್ರದೇಶದೊಂದಿಗೆ ಸುತ್ತಲಿನ 20 ಕಿ.ಮೀ ವ್ಯಾಪ್ತಿಯ ಸಾವಿರಾರು ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಆಧಾರವಾಗಿದೆ. ಈ ಕೆರೆಯಲ್ಲಿ ನೀರು ಸಂಗ್ರಹವಾಗದಿದ್ದರೆ ಬೇಸಿಗೆಯಲ್ಲಿ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಸುತ್ತಲಿನ ಸಾವಿರಾರು ಎಕರೆ ಅಡಿಕೆ ತೋಟಗಳಿಗೆ ನೀರಿಲ್ಲದಂತಾಗಿ ಫಸಲು ಒಣಗುವ ಸಾಧ್ಯತೆ ಇದೆ. ಈ ವರ್ಷ ಭದ್ರಾ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದ್ದು, ಸಮೀಪದ ಭದ್ರಾ ನಾಲೆಯಿಂದ ನಾಗತೀಕೆರೆಗೆ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರಾದ ನಾಗರಾಜ್, ವೀರಪ್ಪ, ಜಗದೀಶ್ ಮತ್ತು ರುದ್ರೇಶ್ ಆಗ್ರಹಿಸಿದ್ದಾರೆ.</p>.<p>ದಾಗಿನಕಟ್ಟೆ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗೆ ನಾಗತೀಕೆರೆ ಸಮೀಪದ ಕೊಳವೆಬಾವಿಗಳಿಂದ ನೀರು ಸರಬರಾಜು ಆಗುತ್ತಿದ್ದು, ಈ ವರ್ಷ ಸಾಕಷ್ಟು ಮಳೆ ಬಂದರೂ ಕೆರೆಯಲ್ಲಿ ನೀರು ಸಂಗ್ರಹವಾಗದಿರುವುದು ಆತಂಕ ಮೂಡಿಸಿದೆ. ಇಲ್ಲಿನ ಗುಡ್ಡ ಪ್ರದೇಶಕ್ಕೆ ಮೇಯಲು ಹೋಗುವ ದನಕರುಗಳ ಬಾಯಾರಿಕೆ ನೀಗಿಸಲು ಆಧಾರವಾಗಿರುವ ಈ ಕೆರೆಗೆ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಅಡಿ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ದಾಗಿನಕಟ್ಟೆ ಗ್ರಾಮದ ಹನುಮಂತಪ್ಪ, ರವಿ, ರಂಗನಾಥ್ ಮತ್ತು ರುದ್ರಪ್ಪ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಾಪಟ್ಟಣ</strong>: ಪ್ರಸಕ್ತ ವರ್ಷ ಸಾಕಷ್ಟು ಮಳೆಬಿದ್ದರೂ ಸಮೀಪದ ದಾಗಿನಕಟ್ಟೆಯ ಐತಿಹಾಸಿಕ ನಾಗತೀಕೆರೆಯಲ್ಲಿ ನೀರು ಶೇಖರಣೆಯಾಗದ ಕಾರಣ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.</p>.<p>ಮಳೆ ಆರಂಭವಾದ ದಿನದಿಂದಲೂ ಸಣ್ಣ ಪ್ರಮಾಣದಲ್ಲಿ ಬೀಳುತ್ತಿರುವುದರಿಂದ ಈ ಕೆರೆಗೆ ನೀರು ತರುವ ಹಾಲುವರ್ತಿಹಳ್ಳ ಮತ್ತು ಸಮೀಪದ ಗುಡ್ಡಗಳಿಂದ ಹರಿದು ಬರುವ ನೀರಿನ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ.</p>.<p>400 ವರ್ಷಗಳ ಹಿಂದೆ ಬಸವಾಪಟ್ಟಣದ ಪಾಳೆಯಗಾರ ಕೆಂಗಣ್ಣನಾಯಕನ ಪತ್ನಿ ನಾಗತೀಕೆರೆ ನಿರ್ಮಿಸಿದರು ಎಂಬ ಐತಿಹ್ಯವಿದೆ. ನಾಗತೀಕೆರೆಯು 149 ಎಕರೆ ವಿಸ್ತೀರ್ಣ ಹೊಂದಿದ್ದು, ಅಚ್ಚುಕಟ್ಟು ಪ್ರದೇಶದೊಂದಿಗೆ ಸುತ್ತಲಿನ 20 ಕಿ.ಮೀ ವ್ಯಾಪ್ತಿಯ ಸಾವಿರಾರು ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಆಧಾರವಾಗಿದೆ. ಈ ಕೆರೆಯಲ್ಲಿ ನೀರು ಸಂಗ್ರಹವಾಗದಿದ್ದರೆ ಬೇಸಿಗೆಯಲ್ಲಿ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಸುತ್ತಲಿನ ಸಾವಿರಾರು ಎಕರೆ ಅಡಿಕೆ ತೋಟಗಳಿಗೆ ನೀರಿಲ್ಲದಂತಾಗಿ ಫಸಲು ಒಣಗುವ ಸಾಧ್ಯತೆ ಇದೆ. ಈ ವರ್ಷ ಭದ್ರಾ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದ್ದು, ಸಮೀಪದ ಭದ್ರಾ ನಾಲೆಯಿಂದ ನಾಗತೀಕೆರೆಗೆ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರಾದ ನಾಗರಾಜ್, ವೀರಪ್ಪ, ಜಗದೀಶ್ ಮತ್ತು ರುದ್ರೇಶ್ ಆಗ್ರಹಿಸಿದ್ದಾರೆ.</p>.<p>ದಾಗಿನಕಟ್ಟೆ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗೆ ನಾಗತೀಕೆರೆ ಸಮೀಪದ ಕೊಳವೆಬಾವಿಗಳಿಂದ ನೀರು ಸರಬರಾಜು ಆಗುತ್ತಿದ್ದು, ಈ ವರ್ಷ ಸಾಕಷ್ಟು ಮಳೆ ಬಂದರೂ ಕೆರೆಯಲ್ಲಿ ನೀರು ಸಂಗ್ರಹವಾಗದಿರುವುದು ಆತಂಕ ಮೂಡಿಸಿದೆ. ಇಲ್ಲಿನ ಗುಡ್ಡ ಪ್ರದೇಶಕ್ಕೆ ಮೇಯಲು ಹೋಗುವ ದನಕರುಗಳ ಬಾಯಾರಿಕೆ ನೀಗಿಸಲು ಆಧಾರವಾಗಿರುವ ಈ ಕೆರೆಗೆ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಅಡಿ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ದಾಗಿನಕಟ್ಟೆ ಗ್ರಾಮದ ಹನುಮಂತಪ್ಪ, ರವಿ, ರಂಗನಾಥ್ ಮತ್ತು ರುದ್ರಪ್ಪ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>