<p>ದಾವಣಗೆರೆ: ನಾರಿ ಶಕ್ತಿ ವಂದನಾ ಮ್ಯಾರಥಾನ್ ಅಂಗವಾಗಿ ಪ್ರಯುಕ್ತ ದಾವಣಗೆರೆ ಜಿಲ್ಲಾ ಮಹಿಳಾ ಮೋರ್ಚಾದಿಂದ ಜಾಥಾ ನಡೆಯಿತು.</p>.<p>ನಗರದ ಕೆ.ಬಿ. ಬಡಾವಣೆಯ ಬಿಜೆಪಿಯ ಜಿಲ್ಲಾ ಕಚೇರಿಯಿಂದ ಆರಂಭಗೊಂಡ ಜಾಥಾ ನಗರದ ವಿವಿಧೆಡೆ ಸಂಚರಿಸಿ, ಮತ್ತೆ ಬಿಜೆಪಿ ಕಚೇರಿಗೆ ಅಗಮಿಸಿ, ಪಶ್ಚಿಮ ಬಂಗಾಳದ ಬರ್ಸಾತ್ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಿದರು.</p>.<p>‘ದೇಶದ ಎಲ್ಲಾ ವರ್ಗದ ಜನರನ್ನು ಸ್ವಾವಲಂಬನೆಯ ಕಡೆಗೆ ಕೊಂಡೊಯ್ಯಲು ನರೇಂದ್ರ ಮೋದಿ ಅವರು ಮಕ್ಕಳಿಂದ ವೃದ್ಧರವರೆಗೂ ಹಲವು ಉತ್ತಮ ಕಾರ್ಯಕ್ರಮ ರೂಪಿಸಿದ್ದಾರೆ. ಇದಲ್ಲದೇ ದೇಶದ ಜನತೆಯ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಸಮೀಕ್ಷೆಯಲ್ಲಿ ಮೋದಿ ಪರವಾಗಿ ಉತ್ತಮ ಸ್ಪಂದನೆ ದೊರೆತಿದೆ. ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಮಹಿಳೆಯರು ಮೋದಿಯವರಿಗೆ ಬೆನ್ನೆಲುಬಾಗಿ ನಿಲ್ಲಬೇಕು’ ಎಂದು ದಾವಣಗೆರೆ ಜಿಲ್ಲೆಯ ಉಸ್ತುವಾರಿ ಭಾರತಿ ಜೆಂಬಗಿ ಹೇಳಿದರು.</p>.<p>ಜಿಲ್ಲಾ ಮಹಿಳಾ ಮೋರ್ಚಾದ ಪುಪ್ಪಾ ವಾಲಿ ಮಾತನಾಡಿ, ‘ನಮ್ಮ ನಡಿಗೆ ಮೋದಿಜಿ ಕಡೆಗೆ ಎನ್ನುವ ಘೋಷಣೆಯೊಂದಿಗೆ ಮಾತೃ ಹೃದಯದ ಮೋದಿಜಿಗೆ ದೇಶದ ಜನತೆ ಕೈಜೋಡಿಸುವ ಮೂಲಕ ಬಲಪಡಿಸಬೇಕು’ ಎಂದು ಸಲಹೆ ನೀಡಿದರು.</p>.<p>ಭಾಗ್ಯ ಪಿಸಾಳೆ, ರೇಣುಕಮ್ಮ ಬಣಕಾರ್, ಸಾವಿತ್ರಮ್ಮ, ಚಂದ್ರಕಲಾ, ದರ್ಮೀಬಾಯಿ, ಮಂಜುಳಾ, ಸವಿತಾ, ನೀತಾ,ರೇಣುಕಾ ಕೃಷ್ಣ, ಕುಸುಮ, ಸಾವಿತ್ರಿ, ಯಲ್ಲಮ್ಮ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ನಾರಿ ಶಕ್ತಿ ವಂದನಾ ಮ್ಯಾರಥಾನ್ ಅಂಗವಾಗಿ ಪ್ರಯುಕ್ತ ದಾವಣಗೆರೆ ಜಿಲ್ಲಾ ಮಹಿಳಾ ಮೋರ್ಚಾದಿಂದ ಜಾಥಾ ನಡೆಯಿತು.</p>.<p>ನಗರದ ಕೆ.ಬಿ. ಬಡಾವಣೆಯ ಬಿಜೆಪಿಯ ಜಿಲ್ಲಾ ಕಚೇರಿಯಿಂದ ಆರಂಭಗೊಂಡ ಜಾಥಾ ನಗರದ ವಿವಿಧೆಡೆ ಸಂಚರಿಸಿ, ಮತ್ತೆ ಬಿಜೆಪಿ ಕಚೇರಿಗೆ ಅಗಮಿಸಿ, ಪಶ್ಚಿಮ ಬಂಗಾಳದ ಬರ್ಸಾತ್ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಿದರು.</p>.<p>‘ದೇಶದ ಎಲ್ಲಾ ವರ್ಗದ ಜನರನ್ನು ಸ್ವಾವಲಂಬನೆಯ ಕಡೆಗೆ ಕೊಂಡೊಯ್ಯಲು ನರೇಂದ್ರ ಮೋದಿ ಅವರು ಮಕ್ಕಳಿಂದ ವೃದ್ಧರವರೆಗೂ ಹಲವು ಉತ್ತಮ ಕಾರ್ಯಕ್ರಮ ರೂಪಿಸಿದ್ದಾರೆ. ಇದಲ್ಲದೇ ದೇಶದ ಜನತೆಯ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಸಮೀಕ್ಷೆಯಲ್ಲಿ ಮೋದಿ ಪರವಾಗಿ ಉತ್ತಮ ಸ್ಪಂದನೆ ದೊರೆತಿದೆ. ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಮಹಿಳೆಯರು ಮೋದಿಯವರಿಗೆ ಬೆನ್ನೆಲುಬಾಗಿ ನಿಲ್ಲಬೇಕು’ ಎಂದು ದಾವಣಗೆರೆ ಜಿಲ್ಲೆಯ ಉಸ್ತುವಾರಿ ಭಾರತಿ ಜೆಂಬಗಿ ಹೇಳಿದರು.</p>.<p>ಜಿಲ್ಲಾ ಮಹಿಳಾ ಮೋರ್ಚಾದ ಪುಪ್ಪಾ ವಾಲಿ ಮಾತನಾಡಿ, ‘ನಮ್ಮ ನಡಿಗೆ ಮೋದಿಜಿ ಕಡೆಗೆ ಎನ್ನುವ ಘೋಷಣೆಯೊಂದಿಗೆ ಮಾತೃ ಹೃದಯದ ಮೋದಿಜಿಗೆ ದೇಶದ ಜನತೆ ಕೈಜೋಡಿಸುವ ಮೂಲಕ ಬಲಪಡಿಸಬೇಕು’ ಎಂದು ಸಲಹೆ ನೀಡಿದರು.</p>.<p>ಭಾಗ್ಯ ಪಿಸಾಳೆ, ರೇಣುಕಮ್ಮ ಬಣಕಾರ್, ಸಾವಿತ್ರಮ್ಮ, ಚಂದ್ರಕಲಾ, ದರ್ಮೀಬಾಯಿ, ಮಂಜುಳಾ, ಸವಿತಾ, ನೀತಾ,ರೇಣುಕಾ ಕೃಷ್ಣ, ಕುಸುಮ, ಸಾವಿತ್ರಿ, ಯಲ್ಲಮ್ಮ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>