<p><strong>ಮಲೇಬೆನ್ನೂರು</strong>: ಪಟ್ಟಣದ ಮೂಲಕ ಶಿವಮೊಗ್ಗ, ದಾವಣಗೆರೆ ಹಾಗೂ ಹರಿಹರಕ್ಕೆ ಸಂಚರಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತಡೆರಹಿತ ಬಸ್ಗಳನ್ನು ಪಟ್ಟಣದಲ್ಲಿ ನಿಲುಗಡೆ ಮಾಡುವಂತೆ ಮಹಿಳೆಯರು ಆಗ್ರಹಿಸಿದರು.</p>.<p>ಕಂದಾಯ ಇಲಾಖೆಯ ಆಶ್ರಯದಲ್ಲಿ ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶʼದಲ್ಲಿ ಈ ಆಗ್ರಹ ಕೇಳಿಬಂತು. </p>.<p>‘ಸರ್ಕಾರದ ‘ಶಕ್ತಿ’ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಆದರೆ ಬಸ್ಗಳ ಸಂಖ್ಯೆ ಕಡಿಮೆ ಇದೆ. ಕೆಲವೊಮ್ಮೆ ಮಹಿಳೆಯರನ್ನು ಕಂಡೊಡನೇ ಬಸ್ ಚಾಲಕರು ನಿಲುಗಡೆ ಮಾಡದೇ ಮುಂದೆ ಸಾಗುತ್ತಾರೆ. ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ಓಡಿಸಬೇಕು’ ಎಂದು ಒತ್ತಾಯಿಸಿದರು.</p>.<p>ಆಧಾರ್ ಕಾರ್ಡ್ ಲೋಪದೋಷ ಸರಿಪಡಿಸಬೇಕು, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಯ ನೆರವು ಸಿಗದ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.</p>.<p>ಸಿಡಿಪಿಒ ರಷೀದಾ ಭಾನು ಅವರು ಗೃಹಲಕ್ಷ್ಮಿ ಯೋಜನೆ, ಬೆಸ್ಕಾಂ ಶಾಖಾಧಿಕಾರಿ ಚೇತನ್ ಅವರು ಗೃಹಜ್ಯೋತಿ ಯೋಜನೆ, ಆಹಾರ ಶಿರೆಸ್ತೇದಾರ್ ಮಂಜುನಾಥ್ ಎಚ್. ಅವರು ಅನ್ನಭಾಗ್ಯ ಯೋಜನೆ, ಸಂಚಾರಿ ನಿಯಂತ್ರಕ ನಿರಂಜನ ಮೂರ್ತಿ ಅವರು ಶಕ್ತಿ ಯೋಜನೆಗಳ ಮಾಹಿತಿ ನೀಡಿದರು.</p>.<p>ತಾ.ಪಂ. ಇಒ ರಮೇಶ್ ಸುಲ್ಫಿ, ಉಪತಹಶೀಲ್ದಾರ್ ಆರ್.ರವಿ, ಪುರಸಭೆ ಮುಖ್ಯಧಿಕಾರಿ ಸುರೇಶ್, ಪರಿಸರ ಎಂಜಿನಿಯರ್ ಉಮೇಶ್, ಸಮುದಾಯ ಸಂಘಟನಾಧಿಕಾರಿ ದಿನಕರ್, ವಿ.ಎ. ಅಣ್ಣಪ್ಪ ಸದಸ್ಯರು, ಅಶಾ ಕಾರ್ಯಕರ್ತೆಯರು, ಫಲಾನುಭವಿಗಳು ಪಾಲ್ಗೊಂಡಿದ್ದರು.</p>.<h2>‘ಗ್ಯಾರಂಟಿ’ ಯೋಜನೆಗಳನ್ನು ಹೊಗಳಿದ ಬಿಜೆಪಿ ಮುಖಂಡ </h2>.<p>ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ ಎಂದು ಬಿಜೆಪಿ ಪುರಸಭೆ ಮಾಜಿ ಸದಸ್ಯ ಬಾನುವಳ್ಳಿ ಸುರೇಶ್ ಶ್ಲಾಘಿಸಿದರು. ‘ನಮ್ಮ ಕುಟುಂಬ ಐದು ಸದಸ್ಯರು ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದೇವೆ. ಇದರಿಂದ ಅನುಕೂಲವಾಗಿದೆ’ ಎಂದು ಗುಣಗಾನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು</strong>: ಪಟ್ಟಣದ ಮೂಲಕ ಶಿವಮೊಗ್ಗ, ದಾವಣಗೆರೆ ಹಾಗೂ ಹರಿಹರಕ್ಕೆ ಸಂಚರಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತಡೆರಹಿತ ಬಸ್ಗಳನ್ನು ಪಟ್ಟಣದಲ್ಲಿ ನಿಲುಗಡೆ ಮಾಡುವಂತೆ ಮಹಿಳೆಯರು ಆಗ್ರಹಿಸಿದರು.</p>.<p>ಕಂದಾಯ ಇಲಾಖೆಯ ಆಶ್ರಯದಲ್ಲಿ ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶʼದಲ್ಲಿ ಈ ಆಗ್ರಹ ಕೇಳಿಬಂತು. </p>.<p>‘ಸರ್ಕಾರದ ‘ಶಕ್ತಿ’ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಆದರೆ ಬಸ್ಗಳ ಸಂಖ್ಯೆ ಕಡಿಮೆ ಇದೆ. ಕೆಲವೊಮ್ಮೆ ಮಹಿಳೆಯರನ್ನು ಕಂಡೊಡನೇ ಬಸ್ ಚಾಲಕರು ನಿಲುಗಡೆ ಮಾಡದೇ ಮುಂದೆ ಸಾಗುತ್ತಾರೆ. ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ಓಡಿಸಬೇಕು’ ಎಂದು ಒತ್ತಾಯಿಸಿದರು.</p>.<p>ಆಧಾರ್ ಕಾರ್ಡ್ ಲೋಪದೋಷ ಸರಿಪಡಿಸಬೇಕು, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಯ ನೆರವು ಸಿಗದ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.</p>.<p>ಸಿಡಿಪಿಒ ರಷೀದಾ ಭಾನು ಅವರು ಗೃಹಲಕ್ಷ್ಮಿ ಯೋಜನೆ, ಬೆಸ್ಕಾಂ ಶಾಖಾಧಿಕಾರಿ ಚೇತನ್ ಅವರು ಗೃಹಜ್ಯೋತಿ ಯೋಜನೆ, ಆಹಾರ ಶಿರೆಸ್ತೇದಾರ್ ಮಂಜುನಾಥ್ ಎಚ್. ಅವರು ಅನ್ನಭಾಗ್ಯ ಯೋಜನೆ, ಸಂಚಾರಿ ನಿಯಂತ್ರಕ ನಿರಂಜನ ಮೂರ್ತಿ ಅವರು ಶಕ್ತಿ ಯೋಜನೆಗಳ ಮಾಹಿತಿ ನೀಡಿದರು.</p>.<p>ತಾ.ಪಂ. ಇಒ ರಮೇಶ್ ಸುಲ್ಫಿ, ಉಪತಹಶೀಲ್ದಾರ್ ಆರ್.ರವಿ, ಪುರಸಭೆ ಮುಖ್ಯಧಿಕಾರಿ ಸುರೇಶ್, ಪರಿಸರ ಎಂಜಿನಿಯರ್ ಉಮೇಶ್, ಸಮುದಾಯ ಸಂಘಟನಾಧಿಕಾರಿ ದಿನಕರ್, ವಿ.ಎ. ಅಣ್ಣಪ್ಪ ಸದಸ್ಯರು, ಅಶಾ ಕಾರ್ಯಕರ್ತೆಯರು, ಫಲಾನುಭವಿಗಳು ಪಾಲ್ಗೊಂಡಿದ್ದರು.</p>.<h2>‘ಗ್ಯಾರಂಟಿ’ ಯೋಜನೆಗಳನ್ನು ಹೊಗಳಿದ ಬಿಜೆಪಿ ಮುಖಂಡ </h2>.<p>ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ ಎಂದು ಬಿಜೆಪಿ ಪುರಸಭೆ ಮಾಜಿ ಸದಸ್ಯ ಬಾನುವಳ್ಳಿ ಸುರೇಶ್ ಶ್ಲಾಘಿಸಿದರು. ‘ನಮ್ಮ ಕುಟುಂಬ ಐದು ಸದಸ್ಯರು ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದೇವೆ. ಇದರಿಂದ ಅನುಕೂಲವಾಗಿದೆ’ ಎಂದು ಗುಣಗಾನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>