ನಗರದಲ್ಲಿ ಬಿಡುವಿಲ್ಲದೇ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಗ್ರಾಹಕರು ತರಕಾರಿ ಖರೀದಿಗೆ ಬರುತ್ತಿಲ್ಲ. ಹೀಗಾಗಿ ವ್ಯಾಪಾರವೇ ನಡೆಯುತ್ತಿಲ್ಲ. ಮಳೆಯಿಂದಾಗಿ ಸಾಕಷ್ಟು ತರಕಾರಿ ಹಾಳಾಗುತ್ತಿದೆ
ಎಸ್.ಟಿ.ಜಿ. ರುದ್ರೇಶ್ ತರಕಾರಿ ವ್ಯಾಪಾರಿ
ಮಳೆಯಿಂದಾಗಿ ಹಣ್ಣುಗಳು ಹಾಳಾಗುತ್ತಿವೆ. ಮಳೆ ನೀರು ಬಿದ್ದು ಬಾಳೆಹಣ್ಣಿನ ಕಲರ್ ಹೋಗುತ್ತಿದೆ. ಮಾರಾಟವಾಗದೇ ಉಳಿದ ಹಣ್ಣುಗಳನ್ನು ಮರು ದಿನ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ