<p><strong>ಉಪ್ಪಿನಬೆಟಗೇರಿ</strong>: ಧಾರವಾಡ ತಾಲ್ಲೂಕಿನ ಕನಕೂರ, ಚಂದನಮಟ್ಟಿ ಹಾಗೂ ತಲವಾಯಿ ಗ್ರಾಮಗಳ ಬಳಿ ಸಾಗಿದರೆ ಸುಗಂಧರಾಜ ಹೂವಿನ ಘಮಲು ಹಿತಾನುಭವ ನೀಡುತ್ತದೆ. ಇಲ್ಲಿನ ರೈತರು ಸುಗಂಧರಾಜ ಹೂವು ಬೆಳೆಯುವ ಮೂಲಕ, ಜೀವನ ನಿರ್ವಹಣೆ ಮಾರ್ಗ ಕಂಡುಕೊಂಡಿದ್ದಾರೆ.</p><p>ಹತ್ತು ವರ್ಷಗಳಿಂದ ಸುಗಂಧರಾಜ ಹೂವಿನ ಕೃಷಿ ನಡೆಸುತ್ತಿರುವ ರೈತರು, ಈ ಭಾಗದ ಪುಷ್ಪಕೃಷಿಗೆ ಹೊಸ ಆಯಾಮ ನೀಡಿದ್ದಾರೆ.</p><p>ಜಮೀನಿನ ಫಲವತ್ತತೆ ಕಾಪಾಡಲು ಸಗಣಿ ಗೊಬ್ಬರ ಬಳಸುತ್ತಾರೆ. ಇದರಿಂದ ಬೆಳೆ ಸಮೃದ್ಧವಾಗಿ, ಗಿಡದ ತುಂಬ ಹೂವು ಅರಳಲು ಸಾಧ್ಯವಾಗುತ್ತದೆ. ತಿಂಗಳಿಗೊಮ್ಮೆ ಕಳೆನಾಶಕ, ಔಷಧ ಸಿಂಪಡನೆ, ಡಿ.ಎ.ಪಿ ಹಾಗೂ ಯೂರಿಯಾ ಗೊಬ್ಬರ ಬೆರೆಸಿ ಜಮೀನಿನ ತುಂಬ ಚೆಲ್ಲುತ್ತಾರೆ.</p><p>‘ಸುಗಂಧರಾಜ ಹೂವು ಕೆ.ಜಿ.ಗೆ ₹35ರಿಂದ ₹40ರವರೆಗೆ ಮಾರಾಟ ವಾಗುತ್ತವೆ. ಶ್ರಾವಣ ಮಾಸದಲ್ಲಿ ₹100 ರಿಂದ ₹200ರವರೆಗೆ ಮಾರಾಟ ವಾಗುತ್ತವೆ. ಹುಬ್ಬಳ್ಳಿ ಮತ್ತು ಧಾರವಾಡ ಶಹರಕ್ಕೆ ಗೂಡ್ಸ್ ವಾಹನ ಇಲ್ಲವೇ ದ್ವಿಚಕ್ರ ವಾಹನದಲ್ಲೇ ಮಾರಾಟಕ್ಕೆ ಕಳಿಸಲಾಗುತ್ತದೆ’ ಎಂದು ರೈತ ಮಹಿಳೆ ಶರೀಫಾಬಾನು ನದಾಫ ಹೇಳಿದರು.</p><p>‘ಈ ಬೆಳೆ ನೀರಿನ್ಯಾಗಿನ ಮೀನ ಇದ್ದಂಗ. ಇದಕ್ಕೆ ಎರಡ್ಮೂರು ದಿನಕ್ಕೊಮ್ಮೆ ನೀರುಣಿಸಬೇಕು. ನಾಟಿಯ ನಿರುಪಯುಕ್ತ ದೇಟು ಕೊಯ್ದು ದನಗಳಿಗೆ ತಿನ್ನಲು ಹಾಕ್ತೇವೆ. ಉತ್ತಮ ಇಳುವರಿ, ಒಳ್ಳೇ ಆದಾಯಕ್ಕೆ ಈ ಪುಷ್ಪಕೃಷಿ ಸೂಕ್ತ’ ಎಂದು ಕನಕೂರ ಗ್ರಾಮದ ರೈತ ಪ್ರಕಾಶ ಮಾಳನ್ನವರ ಮಾಹಿತಿ ನೀಡಿದರು.</p>.<div><blockquote>ಸುಗಂಧರಾಜ ನಾಟಿ ಮಾಡಿದ ಮೂರು ತಿಂಗಳಲ್ಲಿ ಹೂವು ಅರಳಲು ಪ್ರಾರಂಭವಾಗುತ್ತವೆ. ಮಳೆಗಾಲದಲ್ಲಿ ಇಳುವರಿ ಹೆಚ್ಚು.</blockquote><span class="attribution">–ಶರೀಫಾಬಾನು ನದಾಫ, ರೈತ ಮಹಿಳೆ</span></div>.<p><strong>‘₹7ಲಕ್ಷ ಆದಾಯ’</strong></p><p>‘ಒಂದು ಎಕರೆ ಜಮೀನಿನಲ್ಲಿ 80 ಕೆ.ಜಿ.ಯಿಂದ ಕ್ವಿಂಟಲ್ವರೆಗೆ ಸುಗಂಧರಾಜ ಪುಷ್ಪ ಸಿಗುತ್ತದೆ. ವರ್ಷಕ್ಕೆ ₹6 ರಿಂದ 7 ಲಕ್ಷದವರೆಗೆ ಆದಾಯ ಗಳಿಸುತ್ತೇವೆ. ಹೂವು ಕೀಳಲು ಒಬ್ಬರಿಗೆ ₹40 ಹಾಗೂ ಕಳೆ ತೆಗೆಯಲು ₹200 ಕೊಡುತ್ತೇವೆ. ಈ ಒಮ್ಮೆ ನಾಟಿ ಮಾಡಿದರೆ ಮಸಾರಿ ಮಣ್ಣಿನಲ್ಲಿ ಮೂರು ವರ್ಷ ಮತ್ತು ಯರಿ ಭೂಮಿಯಲ್ಲಿ ಎರಡು ವರ್ಷದವರೆಗೆ ಬೆಳೆ ಬೆಳೆಯಬಹುದು. ಗೆದ್ದಲು ಹತ್ತುತ್ತಿದ್ದಂತೆ ಮತ್ತೆ ಅದನ್ನು ಬೇರೆ ಜಮೀನಿನಲ್ಲಿ ನಾಟಿ ಮಾಡಲಾಗುತ್ತದೆ’ ಎಂದು ರೈತ ಮಕ್ತುಂಸಾಬ್ ನದಾಫ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಪ್ಪಿನಬೆಟಗೇರಿ</strong>: ಧಾರವಾಡ ತಾಲ್ಲೂಕಿನ ಕನಕೂರ, ಚಂದನಮಟ್ಟಿ ಹಾಗೂ ತಲವಾಯಿ ಗ್ರಾಮಗಳ ಬಳಿ ಸಾಗಿದರೆ ಸುಗಂಧರಾಜ ಹೂವಿನ ಘಮಲು ಹಿತಾನುಭವ ನೀಡುತ್ತದೆ. ಇಲ್ಲಿನ ರೈತರು ಸುಗಂಧರಾಜ ಹೂವು ಬೆಳೆಯುವ ಮೂಲಕ, ಜೀವನ ನಿರ್ವಹಣೆ ಮಾರ್ಗ ಕಂಡುಕೊಂಡಿದ್ದಾರೆ.</p><p>ಹತ್ತು ವರ್ಷಗಳಿಂದ ಸುಗಂಧರಾಜ ಹೂವಿನ ಕೃಷಿ ನಡೆಸುತ್ತಿರುವ ರೈತರು, ಈ ಭಾಗದ ಪುಷ್ಪಕೃಷಿಗೆ ಹೊಸ ಆಯಾಮ ನೀಡಿದ್ದಾರೆ.</p><p>ಜಮೀನಿನ ಫಲವತ್ತತೆ ಕಾಪಾಡಲು ಸಗಣಿ ಗೊಬ್ಬರ ಬಳಸುತ್ತಾರೆ. ಇದರಿಂದ ಬೆಳೆ ಸಮೃದ್ಧವಾಗಿ, ಗಿಡದ ತುಂಬ ಹೂವು ಅರಳಲು ಸಾಧ್ಯವಾಗುತ್ತದೆ. ತಿಂಗಳಿಗೊಮ್ಮೆ ಕಳೆನಾಶಕ, ಔಷಧ ಸಿಂಪಡನೆ, ಡಿ.ಎ.ಪಿ ಹಾಗೂ ಯೂರಿಯಾ ಗೊಬ್ಬರ ಬೆರೆಸಿ ಜಮೀನಿನ ತುಂಬ ಚೆಲ್ಲುತ್ತಾರೆ.</p><p>‘ಸುಗಂಧರಾಜ ಹೂವು ಕೆ.ಜಿ.ಗೆ ₹35ರಿಂದ ₹40ರವರೆಗೆ ಮಾರಾಟ ವಾಗುತ್ತವೆ. ಶ್ರಾವಣ ಮಾಸದಲ್ಲಿ ₹100 ರಿಂದ ₹200ರವರೆಗೆ ಮಾರಾಟ ವಾಗುತ್ತವೆ. ಹುಬ್ಬಳ್ಳಿ ಮತ್ತು ಧಾರವಾಡ ಶಹರಕ್ಕೆ ಗೂಡ್ಸ್ ವಾಹನ ಇಲ್ಲವೇ ದ್ವಿಚಕ್ರ ವಾಹನದಲ್ಲೇ ಮಾರಾಟಕ್ಕೆ ಕಳಿಸಲಾಗುತ್ತದೆ’ ಎಂದು ರೈತ ಮಹಿಳೆ ಶರೀಫಾಬಾನು ನದಾಫ ಹೇಳಿದರು.</p><p>‘ಈ ಬೆಳೆ ನೀರಿನ್ಯಾಗಿನ ಮೀನ ಇದ್ದಂಗ. ಇದಕ್ಕೆ ಎರಡ್ಮೂರು ದಿನಕ್ಕೊಮ್ಮೆ ನೀರುಣಿಸಬೇಕು. ನಾಟಿಯ ನಿರುಪಯುಕ್ತ ದೇಟು ಕೊಯ್ದು ದನಗಳಿಗೆ ತಿನ್ನಲು ಹಾಕ್ತೇವೆ. ಉತ್ತಮ ಇಳುವರಿ, ಒಳ್ಳೇ ಆದಾಯಕ್ಕೆ ಈ ಪುಷ್ಪಕೃಷಿ ಸೂಕ್ತ’ ಎಂದು ಕನಕೂರ ಗ್ರಾಮದ ರೈತ ಪ್ರಕಾಶ ಮಾಳನ್ನವರ ಮಾಹಿತಿ ನೀಡಿದರು.</p>.<div><blockquote>ಸುಗಂಧರಾಜ ನಾಟಿ ಮಾಡಿದ ಮೂರು ತಿಂಗಳಲ್ಲಿ ಹೂವು ಅರಳಲು ಪ್ರಾರಂಭವಾಗುತ್ತವೆ. ಮಳೆಗಾಲದಲ್ಲಿ ಇಳುವರಿ ಹೆಚ್ಚು.</blockquote><span class="attribution">–ಶರೀಫಾಬಾನು ನದಾಫ, ರೈತ ಮಹಿಳೆ</span></div>.<p><strong>‘₹7ಲಕ್ಷ ಆದಾಯ’</strong></p><p>‘ಒಂದು ಎಕರೆ ಜಮೀನಿನಲ್ಲಿ 80 ಕೆ.ಜಿ.ಯಿಂದ ಕ್ವಿಂಟಲ್ವರೆಗೆ ಸುಗಂಧರಾಜ ಪುಷ್ಪ ಸಿಗುತ್ತದೆ. ವರ್ಷಕ್ಕೆ ₹6 ರಿಂದ 7 ಲಕ್ಷದವರೆಗೆ ಆದಾಯ ಗಳಿಸುತ್ತೇವೆ. ಹೂವು ಕೀಳಲು ಒಬ್ಬರಿಗೆ ₹40 ಹಾಗೂ ಕಳೆ ತೆಗೆಯಲು ₹200 ಕೊಡುತ್ತೇವೆ. ಈ ಒಮ್ಮೆ ನಾಟಿ ಮಾಡಿದರೆ ಮಸಾರಿ ಮಣ್ಣಿನಲ್ಲಿ ಮೂರು ವರ್ಷ ಮತ್ತು ಯರಿ ಭೂಮಿಯಲ್ಲಿ ಎರಡು ವರ್ಷದವರೆಗೆ ಬೆಳೆ ಬೆಳೆಯಬಹುದು. ಗೆದ್ದಲು ಹತ್ತುತ್ತಿದ್ದಂತೆ ಮತ್ತೆ ಅದನ್ನು ಬೇರೆ ಜಮೀನಿನಲ್ಲಿ ನಾಟಿ ಮಾಡಲಾಗುತ್ತದೆ’ ಎಂದು ರೈತ ಮಕ್ತುಂಸಾಬ್ ನದಾಫ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>