<p><strong>ಹುಬ್ಬಳ್ಳಿ</strong>: ನರೇಶ ಗಾಂಧಿ ಅವರ ಅರ್ಧಶತಕದ (70 ರನ್) ನೆರವಿನಿಂದ ಬಯೋಟಾಪ್ ಲೈಫ್ ಸೇವಿಯರ್ಸ್ ತಂಡವು ಟೆಲಿವಿಷನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎವಿಆರ್ ಟಸ್ಕರ್ಸ್ ವಿರುದ್ಧ 9 ವಿಕೆಟ್ ಜಯ ಸಾಧಿಸಿತು.</p>.<p>ಇಲ್ಲಿನ ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎವಿಆರ್ ಟಸ್ಕರ್ಸ್ ನೀಡಿದ 101 ರನ್ಗಳ ಗುರಿಯನ್ನು ಬಯೋಟಾಪ್ ತಂಡವು 9.1 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಮುಟ್ಟಿತು.</p>.<p>32 ಎಸೆತಗಳನ್ನು ಎದುರುಸಿದ ನರೇಶ್ 12 ಬೌಂಡರಿ, 1 ಸಿಕ್ಸರ್ ಬಾರಿಸಿದರು. ಇವರಿಗೆ ಬೆಂಬಲ ನೀಡಿದ ಸುಚನ್ ಶೆಟ್ಟಿ 21 ಎಸೆತಗಳಲ್ಲಿ 26 ರನ್ ಗಳಿಸಿದರು.</p>.<p>ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟಸ್ಕರ್ಸ್ ತಂಡ ರೇಣುಕ್ ಅವರ ಉತ್ತಮ ಬೌಲಿಂಗ್ ದಾಳಿಗೆ (30ಕ್ಕೆ 4) ತತ್ತರಿಸಿತು. ತಂಡವು ನಿಗದಿತ 12 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತು.</p>.<p>ಅರವಿಂದ ರೆಡ್ಡಿ (32), ಅಜಯ ಸತ್ಯನಾರಯಣ (30) ಮಾತ್ರ ಉತ್ತಮ ಪ್ರದರ್ಶನ ನೀಡಿದರು.</p>.<p>ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ದಿ ಬುಲ್ ಸ್ಕ್ವಾಡ್ ತಂಡವು ಜಿಎಲ್ಆರ್ ವಾರಿಯರ್ಸ್ ವಿರುದ್ಧ 8 ವಿಕೆಟ್ ಜಯ ಸಾಧಿಸಿತು. ಗೋಲ್ಡನ್ ಈಗಲ್ಸ್ ತಂಡವು ಅಶ್ವಸೂರ್ಯ ರೈಡರ್ಸ್ ತಂಡವನ್ನು ಎಂಟು ವಿಕೆಟ್ಗಳಿಂದ ಮಣಿಸಿತು. ರಾಸು ವಾರಿಯರ್ಸ್ ತಂಡವು ಎವಿಆರ್ ಟಸ್ಕರ್ಸ್ ವಿರುದ್ಧ 44 ರನ್ಗಳಿಂದ ಜಯಗಳಿಸಿತು.</p>.<p>ಎನ್1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೂರ್ನಿ ಆಯೋಜಿಸಲಾಗಿದ್ದು, ಮಾರ್ಚ್ 3ರವರೆಗೆ ನಡೆಯಲಿದೆ. 10 ತಂಡಗಳು ಭಾಗವಹಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ನರೇಶ ಗಾಂಧಿ ಅವರ ಅರ್ಧಶತಕದ (70 ರನ್) ನೆರವಿನಿಂದ ಬಯೋಟಾಪ್ ಲೈಫ್ ಸೇವಿಯರ್ಸ್ ತಂಡವು ಟೆಲಿವಿಷನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎವಿಆರ್ ಟಸ್ಕರ್ಸ್ ವಿರುದ್ಧ 9 ವಿಕೆಟ್ ಜಯ ಸಾಧಿಸಿತು.</p>.<p>ಇಲ್ಲಿನ ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎವಿಆರ್ ಟಸ್ಕರ್ಸ್ ನೀಡಿದ 101 ರನ್ಗಳ ಗುರಿಯನ್ನು ಬಯೋಟಾಪ್ ತಂಡವು 9.1 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಮುಟ್ಟಿತು.</p>.<p>32 ಎಸೆತಗಳನ್ನು ಎದುರುಸಿದ ನರೇಶ್ 12 ಬೌಂಡರಿ, 1 ಸಿಕ್ಸರ್ ಬಾರಿಸಿದರು. ಇವರಿಗೆ ಬೆಂಬಲ ನೀಡಿದ ಸುಚನ್ ಶೆಟ್ಟಿ 21 ಎಸೆತಗಳಲ್ಲಿ 26 ರನ್ ಗಳಿಸಿದರು.</p>.<p>ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟಸ್ಕರ್ಸ್ ತಂಡ ರೇಣುಕ್ ಅವರ ಉತ್ತಮ ಬೌಲಿಂಗ್ ದಾಳಿಗೆ (30ಕ್ಕೆ 4) ತತ್ತರಿಸಿತು. ತಂಡವು ನಿಗದಿತ 12 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತು.</p>.<p>ಅರವಿಂದ ರೆಡ್ಡಿ (32), ಅಜಯ ಸತ್ಯನಾರಯಣ (30) ಮಾತ್ರ ಉತ್ತಮ ಪ್ರದರ್ಶನ ನೀಡಿದರು.</p>.<p>ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ದಿ ಬುಲ್ ಸ್ಕ್ವಾಡ್ ತಂಡವು ಜಿಎಲ್ಆರ್ ವಾರಿಯರ್ಸ್ ವಿರುದ್ಧ 8 ವಿಕೆಟ್ ಜಯ ಸಾಧಿಸಿತು. ಗೋಲ್ಡನ್ ಈಗಲ್ಸ್ ತಂಡವು ಅಶ್ವಸೂರ್ಯ ರೈಡರ್ಸ್ ತಂಡವನ್ನು ಎಂಟು ವಿಕೆಟ್ಗಳಿಂದ ಮಣಿಸಿತು. ರಾಸು ವಾರಿಯರ್ಸ್ ತಂಡವು ಎವಿಆರ್ ಟಸ್ಕರ್ಸ್ ವಿರುದ್ಧ 44 ರನ್ಗಳಿಂದ ಜಯಗಳಿಸಿತು.</p>.<p>ಎನ್1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೂರ್ನಿ ಆಯೋಜಿಸಲಾಗಿದ್ದು, ಮಾರ್ಚ್ 3ರವರೆಗೆ ನಡೆಯಲಿದೆ. 10 ತಂಡಗಳು ಭಾಗವಹಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>