'ಆರು ವರ್ಷದಿಂದ ಕೊಲೆಗೆ ಯೋಜನೆ ರೂಪಿಸಿದ್ದ'
'ಎರಡು ವರ್ಷದ ಹಿಂದೊಮ್ಮೆ ದೇವಪ್ಪಜ್ಜ ಅವರನ್ನು ಸಂತೋಷ ಕೊಲೆ ಮಾಡಲು ಯತ್ನಿಸಿದಾಗ ಚಾಕು ಮುರಿದು ಹೋಗಿತ್ತು. ಆಗ ಅವನು ವಿಫಲನಾಗಿದ್ದ. ತನ್ನ ಕುಟುಂಬಕ್ಕಾದ ಅನ್ಯಾಯಕ್ಕೆ ಅವರ ಕೊಲೆಯೊಂದೇ ಪರಿಹಾರ ಎಂದು ಭಾವಿಸಿ ಆರು ವರ್ಷದಿಂದ ಕಾಯುತ್ತಿದ್ದ. ದೇವಪ್ಪಜ್ಜ ಅವರ ಚಲನವಲನ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಅವರೊಬ್ಬರೇ ಸಿಕ್ಕಾಗ ಕೊಲೆ ಮಾಡುವ ಯೋಜನೆಯನ್ನೂ ರೂಪಿಸಿದ್ದ. ಅದಕ್ಕಾಗಿ ₹250 ಕೊಟ್ಟು ಗುಣಮಟ್ಟದ ಚಾಕು ಖರೀದಿಸಿದ್ದ' ಎಂದು ಕಮಿಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದರು.