<p><strong>ರಾಣೆಬೆನ್ನೂ</strong>ರು: ಇಲ್ಲಿನ ಸಿದ್ದಾರೂಢ ನಗರದ ಸಿದ್ದಾರೂಢ ಮಠದಲ್ಲಿ ಫೆ.12 ರಿಂದ ಫೆ.14 ವರೆಗೆ 24ನೇ ವರ್ಷದ ವೇದಾಂತ ಪರಿಷತ್ ಅಂಗವಾಗಿ ಮಹಾಸಭೆ ಹಾಗೂ ಸಿದ್ದಾರೂಢರ 10ನೇ ವರ್ಷದ ಮಹಾರಥೋತ್ಸವ ನಡೆಯಲಿದೆ.</p>.<p>ಫೆ.12ರಂದು ಬೆಳಿಗ್ಗೆ ಸಿದ್ದಾರೂಢ ಮೂರ್ತಿಗೆ ಅಭಿಷೇಕ ಹಾಗೂ ಹೂವುಗಳ ಅಲಂಕಾರ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ರಾತ್ರಿ 8.30ಕ್ಕೆ ಮಠದ ಮುಖ್ಯ ಮಹಾದ್ವಾರದ ಉದ್ಘಾಟನೆ ನಡೆಯಲಿದೆ ಎಂದು ಸಿದ್ದಾರೂಢಮಠದ ಅಧ್ಯಕ್ಷ ಮಲ್ಲಯ್ಯಜ್ಜ ಸ್ವಾಮೀಜಿ ತಿಳಿಸಿದರು.</p>.<p>ಇಲ್ಲಿನ ಸಿದ್ದಾರೂಢಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಠದ ಆವರಣದಲ್ಲಿ ಮೂರು ದಿನಗಳ ಕಾಲ ವೇದಾಂತ ಪರಿಷತ್ ನಡೆಯುತ್ತದೆ. ಹುಬ್ಬಳ್ಳಿಯ ಸಿದ್ದಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಜಡೆಸಿದ್ದೇಶ್ವರಮಠದ ರಾಮಾನಂದ ಭಾರತಿ ಸ್ವಾಮೀಜಿ ನೇತೃತ್ವ ವಹಿಸುವರು.</p>.<p>ಸೌಟಗಿ ಲಿಂಗಯ್ಯ ಸ್ವಾಮೀಜಿ, ತೆಲಗಿಯ ಶಂಭುಲಿಂಗಾಶ್ರಮದ ಪೂರ್ಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.</p>.<p>ಮೊದಲ ದಿನ ಫೆ.12ರಂದು ʻಮಾಯೆ ಕರ್ಮದ ಬಾಧೆ ಕಾಯಕದ ಬಾಧೆ ವಾಯು ವಿಷಯೇಂದ್ರಿಯದ ಬಾಧೆ ಶಂಕರʼ ಎಂಬ ವಿಷಯದ ಕುರಿತು, ಫೆ.13ರಂದು ʻನರಜನ್ಮದಿಂದಹದೊಳು ಮಿಗಿಲುಂಟೆ ಕರಣವಿಜಯದಿಂದೆ ಕಲಿತನಮುಂಟೆʼ ಎಂಬ ವಿಷಯ, ಫೆ.14 ರಂದು ʻನವವಿಧ ಭಕ್ತಿʼಯ ಕುರಿತು ವೇದಾಂತ ಸಭೆ ನಡೆಯಲಿದೆ.</p>.<p>ಸಂಜೆ 4.30ಕ್ಕೆ ಸ್ವಾಮೀಜಿಗಳ ಸಮ್ಮುಖದಲ್ಲಿ ಮಹಾರಥೋತ್ಸವ ನಡೆಯುತ್ತದೆ ಎಂದು ಸಿದ್ದಾರೂಢಮಠದ ಅಧ್ಯಕ್ಷ ಮಲ್ಲಯ್ಯಜ್ಜ ಸ್ವಾಮೀಜಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂ</strong>ರು: ಇಲ್ಲಿನ ಸಿದ್ದಾರೂಢ ನಗರದ ಸಿದ್ದಾರೂಢ ಮಠದಲ್ಲಿ ಫೆ.12 ರಿಂದ ಫೆ.14 ವರೆಗೆ 24ನೇ ವರ್ಷದ ವೇದಾಂತ ಪರಿಷತ್ ಅಂಗವಾಗಿ ಮಹಾಸಭೆ ಹಾಗೂ ಸಿದ್ದಾರೂಢರ 10ನೇ ವರ್ಷದ ಮಹಾರಥೋತ್ಸವ ನಡೆಯಲಿದೆ.</p>.<p>ಫೆ.12ರಂದು ಬೆಳಿಗ್ಗೆ ಸಿದ್ದಾರೂಢ ಮೂರ್ತಿಗೆ ಅಭಿಷೇಕ ಹಾಗೂ ಹೂವುಗಳ ಅಲಂಕಾರ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ರಾತ್ರಿ 8.30ಕ್ಕೆ ಮಠದ ಮುಖ್ಯ ಮಹಾದ್ವಾರದ ಉದ್ಘಾಟನೆ ನಡೆಯಲಿದೆ ಎಂದು ಸಿದ್ದಾರೂಢಮಠದ ಅಧ್ಯಕ್ಷ ಮಲ್ಲಯ್ಯಜ್ಜ ಸ್ವಾಮೀಜಿ ತಿಳಿಸಿದರು.</p>.<p>ಇಲ್ಲಿನ ಸಿದ್ದಾರೂಢಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಠದ ಆವರಣದಲ್ಲಿ ಮೂರು ದಿನಗಳ ಕಾಲ ವೇದಾಂತ ಪರಿಷತ್ ನಡೆಯುತ್ತದೆ. ಹುಬ್ಬಳ್ಳಿಯ ಸಿದ್ದಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಜಡೆಸಿದ್ದೇಶ್ವರಮಠದ ರಾಮಾನಂದ ಭಾರತಿ ಸ್ವಾಮೀಜಿ ನೇತೃತ್ವ ವಹಿಸುವರು.</p>.<p>ಸೌಟಗಿ ಲಿಂಗಯ್ಯ ಸ್ವಾಮೀಜಿ, ತೆಲಗಿಯ ಶಂಭುಲಿಂಗಾಶ್ರಮದ ಪೂರ್ಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.</p>.<p>ಮೊದಲ ದಿನ ಫೆ.12ರಂದು ʻಮಾಯೆ ಕರ್ಮದ ಬಾಧೆ ಕಾಯಕದ ಬಾಧೆ ವಾಯು ವಿಷಯೇಂದ್ರಿಯದ ಬಾಧೆ ಶಂಕರʼ ಎಂಬ ವಿಷಯದ ಕುರಿತು, ಫೆ.13ರಂದು ʻನರಜನ್ಮದಿಂದಹದೊಳು ಮಿಗಿಲುಂಟೆ ಕರಣವಿಜಯದಿಂದೆ ಕಲಿತನಮುಂಟೆʼ ಎಂಬ ವಿಷಯ, ಫೆ.14 ರಂದು ʻನವವಿಧ ಭಕ್ತಿʼಯ ಕುರಿತು ವೇದಾಂತ ಸಭೆ ನಡೆಯಲಿದೆ.</p>.<p>ಸಂಜೆ 4.30ಕ್ಕೆ ಸ್ವಾಮೀಜಿಗಳ ಸಮ್ಮುಖದಲ್ಲಿ ಮಹಾರಥೋತ್ಸವ ನಡೆಯುತ್ತದೆ ಎಂದು ಸಿದ್ದಾರೂಢಮಠದ ಅಧ್ಯಕ್ಷ ಮಲ್ಲಯ್ಯಜ್ಜ ಸ್ವಾಮೀಜಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>